ETV Bharat / state

ಏಸು ಪ್ರತಿಮೆ ವಿರೋಧಿಸುವ ಕಲ್ಲಡ್ಕ ಭಟ್‌ರಿಗೆ ತಕ್ಕ ಪ್ರತ್ಯುತ್ತರ ನೀಡ್ತೇವೆ.. ಧನಂಜಯ ಅಡ್ಪಂಗಾಯ

ಕಾಂಗ್ರೆಸ್ ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ಪ್ರಚಾರ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮಾತನಾಡಿ, ಕನಕಪುರದ ಕಪಾಲಿ ಬೆಟ್ಟದ ಮೇಲೆ ಏಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.

author img

By

Published : Jan 15, 2020, 2:08 PM IST

Dhananjaya Adpagaya
ಕಾಂಗ್ರೆಸ್ ದ.ಕ.ಜಿಲ್ಲಾ ಸಮಿತಿಯ ಪ್ರಚಾರಧ್ಯಕ್ಷ ಧನಂಜಯ ಅಡ್ಪಂಗಾಯ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಿಜೆಪಿ,ಆರ್​ಎಸ್​ಎಸ್​ನ ಪ್ರಯೋಗ ಶಾಲೆಯಾಗಿದೆ. ಡಿಕೆಶಿಯವರ ಯಾವುದೇ ರಾಜಕೀಯ ವಿಚಾರಗಳನ್ನು ಧರ್ಮಕ್ಕೆ ಎಳೆದರೆ, ನಾವು ಬಿಜೆಪಿಗರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ದ.ಕ ಜಿಲ್ಲಾ ಸಮಿತಿಯ ಪ್ರಚಾರ ಅಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.

ಕನಕಪುರದ ಕಪಾಲಿ ಬೆಟ್ಟದ ಮೇಲೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ನಮ್ಮ ಜಿಲ್ಲೆಯ ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ. ಏಸು ಪ್ರತಿಮೆಯನ್ನು ವಿರೋಧಿಸಿ ಪ್ರಭಾಕರ ಭಟ್ ಅವರು ದ.ಕ.ಜಿಲ್ಲೆಯಿಂದ ಎಷ್ಟು ಜನರನ್ನು ಅಲ್ಲಿಗೆ ಕರೆದೊಯ್ದು, ಪ್ರತಿಭಟನೆ ನಡೆಸಿದ್ದಾರೋ ಅದೇ ರೀತಿ ನಾವು ಕೂಡ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಜನರನ್ನು ಸೇರಿಸಿ ಆ ಪ್ರತಿಭಟನೆಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.

ಕಾಂಗ್ರೆಸ್ ದ.ಕ.ಜಿಲ್ಲಾ ಸಮಿತಿಯ ಪ್ರಚಾರಧ್ಯಕ್ಷ ಧನಂಜಯ ಅಡ್ಪಂಗಾಯ..

ವಿವೇಕಾನಂದ, ಗಾಂಧಿ, ನೆಹರೂ ಅವರಂತ ಸಾತ್ವಿಕ ಗುಣಗಳಿಂದ ನಮ್ಮ ಭಾರತಕ್ಕೆ ಇಡೀ ಪ್ರಪಂಚದಲ್ಲಿಯೇ ಒಂದು ಗೌರವವಿದೆ. ಅಮೆರಿಕಾದಲ್ಲಿ ಹಿಂದೂ ದೇವಾಲಯ, ಮಠ, ಮಂದಿರಗಳಿವೆ. ಇಸ್ಲಾಂ ರಾಷ್ಟ್ರ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಬೋಧನೆ ಮಾಡುವ ಬಹುದೊಡ್ಡ ಪ್ರತಿಮೆಯಿದೆ. ಮಲೇಷ್ಯಾದಲ್ಲಿ ಅತೀದೊಡ್ಡ ಸುಬ್ರಹ್ಮಣ್ಯ ದೇವಾಲಯವಿದೆ.

ಅಲ್ಲದೆ ಮಲೇಷ್ಯಾಯಾದಲ್ಲಿ ಮುಸ್ಲಿಂ ಸರ್ಕಾರವಿದ್ದರೂ ಹಿಂದೂಗಳಿಗೆ ಅಲ್ಲಿ ಶೇ.5% ಉದ್ಯೋಗ ಮೀಸಲಾತಿಯಿದೆ. ದುಬೈನಲ್ಲಿ ಹಿಂದೂ ದೇವಾಲಯವನ್ನು ಮೋದಿ-ಅಮಿತ್ ಶಾ ಅವರ ಸಮ್ಮುಖದಲ್ಲೇ ಪ್ರತಿಷ್ಠಾಪನೆ ಮಾಡಿರೋದು ಎಲ್ಲರಿಗೂ ತಿಳಿದಿದೆ‌. ಈ ನಿಟ್ಟಿನಲ್ಲಿ ಡಿಕೆಶಿಯವರು ಕಪಾಲ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿಸಲು ಬೆಂಬಲ‌ ನೀಡಿರೋದನ್ನು ವಿರೋಧಿಸಿ, ಚಾರಿತ್ರ್ಯ ವಧೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ ಹೋರಾಟ ಮಾಡಲು ಇಳಿದಿರೋದು ವಿಷಾಧನೀಯ. ಇದರಿಂದ ಇಡೀ ಸಮಾಜದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮದವರು ಅಪ ನಂಬಿಕೆಯಿಂದ ಬದುಕುವ ಸ್ಥಿತಿ ಎದುರಾಗಿದೆ ಎಂದರು.

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಿಜೆಪಿ,ಆರ್​ಎಸ್​ಎಸ್​ನ ಪ್ರಯೋಗ ಶಾಲೆಯಾಗಿದೆ. ಡಿಕೆಶಿಯವರ ಯಾವುದೇ ರಾಜಕೀಯ ವಿಚಾರಗಳನ್ನು ಧರ್ಮಕ್ಕೆ ಎಳೆದರೆ, ನಾವು ಬಿಜೆಪಿಗರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ದ.ಕ ಜಿಲ್ಲಾ ಸಮಿತಿಯ ಪ್ರಚಾರ ಅಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.

ಕನಕಪುರದ ಕಪಾಲಿ ಬೆಟ್ಟದ ಮೇಲೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ನಮ್ಮ ಜಿಲ್ಲೆಯ ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ. ಏಸು ಪ್ರತಿಮೆಯನ್ನು ವಿರೋಧಿಸಿ ಪ್ರಭಾಕರ ಭಟ್ ಅವರು ದ.ಕ.ಜಿಲ್ಲೆಯಿಂದ ಎಷ್ಟು ಜನರನ್ನು ಅಲ್ಲಿಗೆ ಕರೆದೊಯ್ದು, ಪ್ರತಿಭಟನೆ ನಡೆಸಿದ್ದಾರೋ ಅದೇ ರೀತಿ ನಾವು ಕೂಡ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಜನರನ್ನು ಸೇರಿಸಿ ಆ ಪ್ರತಿಭಟನೆಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.

ಕಾಂಗ್ರೆಸ್ ದ.ಕ.ಜಿಲ್ಲಾ ಸಮಿತಿಯ ಪ್ರಚಾರಧ್ಯಕ್ಷ ಧನಂಜಯ ಅಡ್ಪಂಗಾಯ..

ವಿವೇಕಾನಂದ, ಗಾಂಧಿ, ನೆಹರೂ ಅವರಂತ ಸಾತ್ವಿಕ ಗುಣಗಳಿಂದ ನಮ್ಮ ಭಾರತಕ್ಕೆ ಇಡೀ ಪ್ರಪಂಚದಲ್ಲಿಯೇ ಒಂದು ಗೌರವವಿದೆ. ಅಮೆರಿಕಾದಲ್ಲಿ ಹಿಂದೂ ದೇವಾಲಯ, ಮಠ, ಮಂದಿರಗಳಿವೆ. ಇಸ್ಲಾಂ ರಾಷ್ಟ್ರ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಬೋಧನೆ ಮಾಡುವ ಬಹುದೊಡ್ಡ ಪ್ರತಿಮೆಯಿದೆ. ಮಲೇಷ್ಯಾದಲ್ಲಿ ಅತೀದೊಡ್ಡ ಸುಬ್ರಹ್ಮಣ್ಯ ದೇವಾಲಯವಿದೆ.

ಅಲ್ಲದೆ ಮಲೇಷ್ಯಾಯಾದಲ್ಲಿ ಮುಸ್ಲಿಂ ಸರ್ಕಾರವಿದ್ದರೂ ಹಿಂದೂಗಳಿಗೆ ಅಲ್ಲಿ ಶೇ.5% ಉದ್ಯೋಗ ಮೀಸಲಾತಿಯಿದೆ. ದುಬೈನಲ್ಲಿ ಹಿಂದೂ ದೇವಾಲಯವನ್ನು ಮೋದಿ-ಅಮಿತ್ ಶಾ ಅವರ ಸಮ್ಮುಖದಲ್ಲೇ ಪ್ರತಿಷ್ಠಾಪನೆ ಮಾಡಿರೋದು ಎಲ್ಲರಿಗೂ ತಿಳಿದಿದೆ‌. ಈ ನಿಟ್ಟಿನಲ್ಲಿ ಡಿಕೆಶಿಯವರು ಕಪಾಲ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿಸಲು ಬೆಂಬಲ‌ ನೀಡಿರೋದನ್ನು ವಿರೋಧಿಸಿ, ಚಾರಿತ್ರ್ಯ ವಧೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ ಹೋರಾಟ ಮಾಡಲು ಇಳಿದಿರೋದು ವಿಷಾಧನೀಯ. ಇದರಿಂದ ಇಡೀ ಸಮಾಜದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮದವರು ಅಪ ನಂಬಿಕೆಯಿಂದ ಬದುಕುವ ಸ್ಥಿತಿ ಎದುರಾಗಿದೆ ಎಂದರು.

Intro:ಮಂಗಳೂರು: ದ.ಕ.ಜಿಲ್ಲೆ ಬಿಜೆಪಿ ಆರ್ ಎಸ್ ಎಸ್ ನ ಪ್ರಯೋಗ ಶಾಲೆಯಾಗಿದೆ. ಬಿಜೆಪಿಗರು ಯಾವುದೇ ರಾಜಕೀಯ ವಿಚಾರಗಳನ್ನು ಧರ್ಮಕ್ಕೆ ಎಳೆದರೆ ನಾವು ಅದಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ದ.ಕ.ಜಿಲ್ಲಾ ಸಮಿತಿಯ ಪ್ರಚಾರಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದರು.

ಕನಕಪುರದ ಕಪಾಲಿ ಬೆಟ್ಟದ ಮೇಲೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ನಮ್ಮ ಜಿಲ್ಲೆಯ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಭಾವನೆ ಕೆರಳಿಸುವ ಹೇಳಿಕೆ ನೀಡಿರುವ ಬಗ್ಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಏಸು ಪ್ರತಿಮೆಯನ್ನು ವಿರೋಧಿಸಿ ಪ್ರಭಾಕರ ಭಟ್ ಅವರು ದ.ಕ.ಜಿಲ್ಲೆಯಿಂದ ಎಷ್ಟು ಜನರನ್ನು ಅಲ್ಲಿಗೆ ಕರೆದೊಯ್ದು ಪ್ರತಿಭಟನೆ ನಡೆಸಿದ್ದಾರೋ ಅದೇ ರೀತಿ ನಾವು ಕೂಡಾ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಜನರನ್ನು ಸೇರಿಸಿ ಆ ಪ್ರತಿಭಟನೆಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದು ಆಗ್ರಹಿಸಿದರು.




Body:ವಿವೇಕಾನಂದ, ಗಾಂಧಿ, ನೆಹರೂ ರವರಂತಹ ಸಾತ್ವಿಕ ಗುಣಗಳಿಂದ ನಮ್ಮ ಭಾರತಕ್ಕೆ ಇಡೀ ಪ್ರಪಂಚದಲ್ಲಿ ಯೇ ಒಂದು ಗೌರವವಿದೆ. ಅಮೇರಿಕಾದಲ್ಲಿ ಹಿಂದೂ ದೇವಾಲಯ, ಮಠ, ಮಂದಿರಗಳಿವೆ, ಇಸ್ಲಾಂ ರಾಷ್ಟ್ರ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಕೃಷ್ಣ ಅರ್ಜುನನಿಗೆ ಗೀತೋಪದೇಶ ಬೋಧನೆ ಮಾಡುವ ಬಹುದೊಡ್ಡ ಪ್ರತಿಮೆಯಿದೆ. ಮಲೇಶಿಯಾ ದಲ್ಲಿ ಅತೀದೊಡ್ಡ ಸುಬ್ರಹ್ಮಣ್ಯ ದೇವಾಲಯ ವಿದೆ. ಅಲ್ಲದೆ ಮಲೇಶಿಯಾದಲ್ಲಿ ಮುಸ್ಲಿಂ ಸರಕಾರವಿದ್ದರೂ ಹಿಂದೂಗಳಿಗೆ ಅಲ್ಲಿ 5% ಉದ್ಯೋಗ ಮೀಸಲಾತಿಯಿದೆ. ದುಬೈನಲ್ಲಿ ಹಿಂದೂ ದೇವಾಲಯವನ್ನು ಮೋದಿ-ಅಮಿತ್ ಷಾ ಅವರ ಸಮ್ಮುಖದಲ್ಲೇ ಪ್ರತಿಷ್ಠೆ ಮಾಡಿರೋದು ಎಲ್ಲರಿಗೂ ತಿಳಿದಿದೆ‌. ಈ ನಿಟ್ಟಿನಲ್ಲಿ ಸಂವಿಧಾನದ ಚೌಕಟ್ಟಿನೊಳಗಡೆ ಸರ್ವಧರ್ಮ ಸಮನ್ವಯದ ರಾಜಕೀಯ ಪಕ್ಷದ ನಾಯಕರಾದ ಡಿಕೆಶಿಯವರು ಕಪಾಲ ಬೆಟ್ಟದ ಮೇಲೆ ಏಸು ಪ್ರತಿಮೆ ಸ್ಥಾಪಿಸಲು ಬೆಂಬಲ‌ ನೀಡಿರೋದನ್ನು ವಿರೋಧಿಸಿ ಚಾರಿತ್ರ್ಯ ವಧೆ ಮಾಡಲು ಕಲ್ಲಡ್ಕ ಪ್ರಭಾಕರ ಭಟ್ ಹೋರಾಟ ಮಾಡೋದಕ್ಕೆ ಇಳಿದಿರೋದು ವಿಷಾದನೀಯ. ಇದರಿಂದ ಇಡೀ ಸಮಾಜದಲ್ಲಿ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮದವರು ಅಪ ನಂಬಿಕೆಯಲ್ಲಿ ಬದುಕುವ ಸ್ಥಿತಿ ಎದುರಾಗಿದೆ ಎಂದು ಹೇಳಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.