ETV Bharat / state

ನನ್ನ ಬಲಿದಾನದಿಂದ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ಅದಕ್ಕೆ ಸಿದ್ಧ:  ರೈ ಪಂಥಾಹ್ವಾನ - undefined

ನನ್ನ ಬಲಿದಾನದಿಂದ ಸಮಾಜದಲ್ಲಿ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ನಾನು ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸೋಲನುಭವಿಸಿರುವ ಮಿಥುನ್​ ರೈ ಹೇಳಿದ್ದಾರೆ.

ಮಿಥುನ್ ರೈ
author img

By

Published : May 27, 2019, 3:51 PM IST

ಮಂಗಳೂರು : ನಾನು ಯಾವಾಗಲೂ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿರುತ್ತೇನೆ. ಯಾರಾದರೂ ಬಂದು ನನ್ನ ತಲೆಯನ್ನು ಕಡಿಯಬಹುದು ಎಂದು ಮಿಥುನ್ ರೈ ತಮ್ಮ ವಿರುದ್ಧ ಘೋಷಣೆ ಕೂಗಿದವರಿಗೆ ಸವಾಲು ಹಾಕಿದ್ದಾರೆ.

ಜಿಲ್ಲೆಯಲ್ಲಿ ಮತೀಯವಾದಿಗಳ ಅಟ್ಟಹಾಸ ಆರಂಭವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಕೆಲವರು ದಕ್ಷಿಣ ಕನ್ನಡದ ಕಾಂಗ್ರೆಸ್​ ಅಭ್ಯರ್ಥಿ ಮಿಥುನ್​ ರೈ ನಮ್ಮ ವಿಚಾರಕ್ಕೆ ಬಂದರೆ ಹುಷಾರ್​ ಎಂಬ ಎಚ್ಚರಿಕೆ ನೀಡಿದ್ದರಂತೆ. ಈ ಸಂಬಂಧ ಘೋಷಣೆಯನ್ನೂ ಕೂಗಿದ್ದರಂತೆ. ಈ ಸಂಬಂಧ ಮಾತನಾಡಿರು ರೈ ಈ ಸವಾಲು ಹಾಕಿದ್ದಾರೆ.

ಮಿಥುನ್ ರೈ

ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ, ನನ್ನ ಬಲಿದಾನದಿಂದ ಸಮಾಜದಲ್ಲಿ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ನಾನು ಅದಕ್ಕೆ ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಇಂತಹ ಅವಹೇಳನಕಾರಿ ಈ ಮಾತುಗಳನ್ನ ಇವರು ತಮ್ಮ ಮನೆಯ ಮಗನಿಗೋ, ಮಗಳಿಗೋ ಹೇಳಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಮಿಥುನ್​ ರೈ, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇದನ್ನು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ ಇಂತಹ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಪಕ್ಷದ ಕಾರ್ಯಕರ್ತರು ನಾನಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾನೂ ಕೂಡಾ ಇಂದು ಅಥವಾ ನಾಳೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನನ್ನ ವೈಯಕ್ತಿಕ ನೆಲೆಯಲ್ಲಿ ದೂರು ದಾಖಲಿಸಿಲಿದ್ದೇನೆ. ಕೋಮುಗಲಭೆ ಸೃಷ್ಟಿಸುವ ಯಾವುದೇ ಸಂಘಟನೆ ಇರಲಿ ಅದು ಜನರ ನಡುವೆ ವಿಷ ಬೀಜ ಬಿತ್ತುವ ಸಂದರ್ಭದಲ್ಲಿ ನಾನು ಪ್ರತಿಭಟನೆ ನಡೆಸಲು ಸಿದ್ಧ ಎಂದು ಮಿಥುನ್​ ರೈ ಘೋಷಿಸಿದ್ದಾರೆ.

ಮಂಗಳೂರು : ನಾನು ಯಾವಾಗಲೂ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿರುತ್ತೇನೆ. ಯಾರಾದರೂ ಬಂದು ನನ್ನ ತಲೆಯನ್ನು ಕಡಿಯಬಹುದು ಎಂದು ಮಿಥುನ್ ರೈ ತಮ್ಮ ವಿರುದ್ಧ ಘೋಷಣೆ ಕೂಗಿದವರಿಗೆ ಸವಾಲು ಹಾಕಿದ್ದಾರೆ.

ಜಿಲ್ಲೆಯಲ್ಲಿ ಮತೀಯವಾದಿಗಳ ಅಟ್ಟಹಾಸ ಆರಂಭವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಎನ್ನಲಾದ ಕೆಲವರು ದಕ್ಷಿಣ ಕನ್ನಡದ ಕಾಂಗ್ರೆಸ್​ ಅಭ್ಯರ್ಥಿ ಮಿಥುನ್​ ರೈ ನಮ್ಮ ವಿಚಾರಕ್ಕೆ ಬಂದರೆ ಹುಷಾರ್​ ಎಂಬ ಎಚ್ಚರಿಕೆ ನೀಡಿದ್ದರಂತೆ. ಈ ಸಂಬಂಧ ಘೋಷಣೆಯನ್ನೂ ಕೂಗಿದ್ದರಂತೆ. ಈ ಸಂಬಂಧ ಮಾತನಾಡಿರು ರೈ ಈ ಸವಾಲು ಹಾಕಿದ್ದಾರೆ.

ಮಿಥುನ್ ರೈ

ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ, ನನ್ನ ಬಲಿದಾನದಿಂದ ಸಮಾಜದಲ್ಲಿ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ನಾನು ಅದಕ್ಕೆ ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಇಂತಹ ಅವಹೇಳನಕಾರಿ ಈ ಮಾತುಗಳನ್ನ ಇವರು ತಮ್ಮ ಮನೆಯ ಮಗನಿಗೋ, ಮಗಳಿಗೋ ಹೇಳಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಮಿಥುನ್​ ರೈ, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಇದನ್ನು ಅರಿತುಕೊಳ್ಳಬೇಕು. ಅಷ್ಟೇ ಅಲ್ಲ ಇಂತಹ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಪಕ್ಷದ ಕಾರ್ಯಕರ್ತರು ನಾನಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಾನೂ ಕೂಡಾ ಇಂದು ಅಥವಾ ನಾಳೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನನ್ನ ವೈಯಕ್ತಿಕ ನೆಲೆಯಲ್ಲಿ ದೂರು ದಾಖಲಿಸಿಲಿದ್ದೇನೆ. ಕೋಮುಗಲಭೆ ಸೃಷ್ಟಿಸುವ ಯಾವುದೇ ಸಂಘಟನೆ ಇರಲಿ ಅದು ಜನರ ನಡುವೆ ವಿಷ ಬೀಜ ಬಿತ್ತುವ ಸಂದರ್ಭದಲ್ಲಿ ನಾನು ಪ್ರತಿಭಟನೆ ನಡೆಸಲು ಸಿದ್ಧ ಎಂದು ಮಿಥುನ್​ ರೈ ಘೋಷಿಸಿದ್ದಾರೆ.

Intro:ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಮತೀಯವಾದಿಗಳ ಅಟ್ಟಹಾಸ ಆರಂಭವಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ನಡೆದ ವಿಜಯೋತ್ಸವದ ಸಂದರ್ಭ ಬಜರಂಗದಳದ ಕಾರ್ಯಕರ್ತರು ಬಹಿರಂಗವಾಗಿ ಬಜರಂಗದಳದ ವಿಚಾರಕ್ಕೆ ಬಂದರೆ ಮಿಥುನ್‌ ರೈಯ ಕೈಕಾಲು ಕಡಿಯುತ್ತೇವೆ, ಸಮಯ ಸಂದರ್ಭ ಬಂದರೆ ತಲೆಯನ್ನೂ ಕಡಿಯುತ್ತೇವೆ ಎಂಬ ಘೋಷಣೆ ಕೂಗಿದ್ದಾರೆ. ನನ್ನ ಬಲಿದಾನದಿಂದ ಸಮಾಜದಲ್ಲಿ ಮತೀಯವಾದಿಗಳ ಅಟ್ಟಹಾಸ ನಿಲ್ಲುವುದಿದ್ದರೆ ನಾನು ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ ಹೇಳಿದರು.

ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಮಿಥುನ್ ರೈ ವಿರುದ್ಧ ನಮ್ಮ ಸಂಘಟನೆಯ ಸುದ್ಧಿಗೆ ಬಂದರೆ ಕೈಕಾಲು ಕಡಿಯುತ್ತೇವೆ. ಅಗತ್ಯ ಬಿದ್ದರೆ ತಲೆಯನ್ನು ಕಡಿಯುತ್ತೇವೆ ಎಂಬ ವಿಡಿಯೋ ಒಂದು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.



Body:ತನಗಾದ ಅವಹೇಳನಕಾರಿ ಈ ಮಾತುಗಳು ಮುಂದೆ ತಮ್ಮ ಮನೆಯ ಮಗನಿಗೋ, ಮಗಳಿಗೋ ಹೇಳಬಹುದು ಎಂದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಅರಿತುಕೊಳ್ಳಬೇಕು. ಆದ್ದರಿಂದ ಇಂತಹ ಅವಹೇಳನಕಾರಿ ಮಾತಿನ‌ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ. ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ನಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ. ನಾನೂ ಕೂಡಾ ಇಂದು ಅಥವಾ ನಾಳೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನನ್ನ ವೈಯಕ್ತಿಕ ನೆಲೆಯಲ್ಲಿ ದೂರು ದಾಖಲಿಸಲಿದ್ದೇನೆ. ಕೋಮುಗಲಭೆ ಸೃಷ್ಟಿಸುವ ಯಾವುದೇ ಸಂಘಟನೆ ಇರಲಿ ಅದು ಜನರ ನಡುವೆ ವಿಷ ಬೀಜ ಸೃಷ್ಟಿಸುವ ಸಂದರ್ಭದಲ್ಲಿ ನಾನು ಪ್ರತಿಭಟನೆ ನಡೆಸಲು ಸಿದ್ಧ. ನಾನು ಯಾವಾಗಲೂ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿರುತ್ತೇನೆ. ಯಾರಾದರೂ ಬಂದು ನನ್ನ ತಲೆಯನ್ನು ಕಡಿಯಬಹುದು ಎಂದು ಮಿಥುನ್ ರೈ ಸವಾಲು ಹಾಕಿದರು.

Reporter_Vishwanath Panjimogaru


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.