ಪುತ್ತೂರು: ಕೊರೊನಾ ಎಂಬ ಮಹಾಮಾರಿ ಹೊಡೆದೋಡಿಸಲು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಮಾಜಿ ಅಧ್ಯಕ್ಷ, ಉದ್ಯಮಿ ಕಿಶೋರ್ ಬೊಟ್ಯಾಡಿ ಅವರ ನೇತೃತ್ವದಲ್ಲಿ ಮಂಗಳೂರಿನಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆ ಯಾತ್ರೆ ನಡೆಸಲಾಯಿತು.
ಜೂ.7 ರಂದು ಸಂಜೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಹೊರಟ ಕಿಶೋರ್ ಬೊಟ್ಯಾಡಿ, ಹರ್ಷಿತ್ ಭಟ್, ವಸಂತ ಪೂಜಾರಿ, ಮಾಜಿ ಕಾರ್ಪೋರೇಟ್ ರಘುವೀರ್ ಪಣಂಬೂರು, ಮಂಜುನಾಥ್ ಅವರು ಜೂ.8 ರಂದು ಬೆಳಗ್ಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಶ್ರೀ ದೇವರ ದರ್ಶನ ಪಡೆದು ಮಂಗಳೂರಿಗೆ ವಾಪಸಾದರು.