ಮಂಗಳೂರು: ಉಡುಪಿ ಜಿಲ್ಲೆಯ ಕಾಪು ಸಮೀಪ ನೌಕಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆಗೊಳಗಾದ 9 ಮಂದಿಯಲ್ಲಿ ಐವರು ಹಡಗಿನ ಮೂಲಕ ನಗರ ತಲುಪಿದ್ದಾರೆ.
ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಟಗ್ ಬೋಟ್ನಲ್ಲಿದ್ದ 9 ಮಂದಿಯನ್ನು 40 ಗಂಟೆಗಳ ಬಳಿಕ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ ರಕ್ಷಿಸಲಾಗಿತ್ತು. ಇದರಲ್ಲಿ 4 ಮಂದಿಯನ್ನು ಹೆಲಿಕಾಪ್ಟರ್ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು ಅವರನ್ನು ಅಲ್ಲಿಂದ ಎನ್ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಐದು ಮಂದಿಯನ್ನು ಕೋಸ್ಟ್ ಗಾರ್ಡ್ನ ಹಡಗಿನಲ್ಲಿ ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ.
ಹಡಗಿನಲ್ಲಿ ಬಂದ ಐವರನ್ನು ಎನ್ಎಂಪಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಕಾಲ ಆತಂಕದಲ್ಲಿದ್ದ 9 ಮಂದಿ ಮೀನುಗಾರರಿಗೆ ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.