ETV Bharat / state

ಸಿಪಾಯಿ ದಂಗೆಗಿಂತ ಮೊದಲೇ ಮೊಳಗಿತು ಮಂಗಳೂರಿನ ಸ್ವಾತಂತ್ರ್ಯ ರಣಕಹಳೆ - ಸಿಪಾಯಿ ದಂಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1837ರಲ್ಲಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಹಳೆ ಮೊಳಗಿಸಲಾಗಿದ್ದು ಈಗ ಇತಿಹಾಸವಾಗಿದೆ. ಅಮರ ಸುಳ್ಯ ಕ್ರಾಂತಿ, ಮಂಗಳೂರು ಕ್ರಾಂತಿ, ಕೊಡಗು-ಕೆನರಾ ಬಂಡಾಯ ಎಂಬ ಹೆಸರುಗಳಿಂದ ಅದನ್ನು ಕರೆಯಲಾಗುತ್ತದೆ.

ಸಿಪಾಯಿ ದಂಗೆ ಮೊದಲೇ ಮಂಗಳೂರಿನಲ್ಲಿ ಸ್ವಾತಂತ್ರ್ಯ ಕಹಳೆ
author img

By

Published : Aug 15, 2019, 5:06 AM IST

ಮಂಗಳೂರು: ಸ್ವಾತಂತ್ರ್ಯ ಹೋರಾಟದ ಇತಿಹಾಸ ಆರಂಭವಾಗುವುದೇ 1857ರ ಸಿಪಾಯಿ ದಂಗೆಯ ಮೂಲಕ. ಈ ದಂಗೆಯೇ ಬ್ರಿಟಿಷರ ದಾಸ್ಯದಿಂದ ಭಾರತ ವಿಮೋಚನೆಗೆ ನಾಂದಿ ಹಾಡಿದ್ದು ಇಂದು ಇತಿಹಾಸ. ಆದರೆ, ಅದಕ್ಕಿಂತ 20 ವರ್ಷಕ್ಕಿಂತ ಮೊದಲೇ, ಅಂದರೆ 1837ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು. ಕಲ್ಯಾಣಪ್ಪನೆಂಬ ಕ್ರಾಂತಿಕಾರಿ ಹೋರಾಟಗಾರ ತನ್ನ ತಂಡದೊಂದಿಗೆ ಬ್ರಿಟಿಷರನ್ನೇ ಹಿಮ್ಮೆಟ್ಟಿಸಿದ್ದ. ಬ್ರಿಟಿಷರ ಬಾವುಟವನ್ನು ಸುಟ್ಟುಹಾಕಿ, ಸ್ವತಂತ್ರ ತುಳು ರಾಜ್ಯದ ಬಾವುಟವನ್ನು ಏರಿಸಿದ್ದ. ಬಳಿಕ ಆ ಸ್ಥಳ ಬಾವುಟಗುಡ್ಡೆ ಎಂದೇ ನಾಮಾಂಕಿತವಾಯಿತು.

ಸಿಪಾಯಿ ದಂಗೆ ಮೊದಲೇ ಮಂಗಳೂರಿನಲ್ಲಿ ಸ್ವಾತಂತ್ರ್ಯ ಕಹಳೆ
ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.

ವ್ಯಾಪಾರದ ಜತೆಗೆ ಬ್ರಿಟಿಷರು ಅಧಿಪತ್ಯ ಸ್ಥಾಪನೆ ಮಾಡಲು ಶುರು ಮಾಡಿದರು. ದೇಶದ ಆಡಳಿತವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡ ಪರಿಣಾಮ ಭಾರತೀಯರು ಪರಕೀಯರ ಆಡಳಿತದಿಂದ ನರಳುವಂತಾಯಿತು. ಶೋಷಣೆ, ದೌರ್ಜನ್ಯಕ್ಕೆ ಲಕ್ಷಾಂತರ ಭಾರತೀಯರು ಬಲಿಯಾಗಬೇಕಾಯಿತು.

1837ರಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕೆನಾರ ಭಾಗ, ಅಂದರೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬ್ರಿಟಿಷರ ವಿರುದ್ಧ ಬಹುದೊಡ್ಡ ಸಶಸ್ತ್ರ ಹೋರಾಟವೇ ನಡೆದುಹೋಯಿತು‌. ಇದನ್ನು ಅಮರ ಸುಳ್ಯ ಕ್ರಾಂತಿ, ಮಂಗಳೂರು ಕ್ರಾಂತಿ, ಕೊಡಗು-ಕೆನರಾ ಬಂಡಾಯ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ಬ್ರಿಟಿಷರು ಮಾತ್ರ ಅದನ್ನು ಕಲ್ಯಾಣಪ್ಪನ ಕಾಟ್ ಕಾಯಿ (ಕಲ್ಯಾಣಪ್ಪನ ಫಲಕೊಡದ ಕಾಯಿ) ಎಂದು ಲೇವಡಿ ಮಾಡಿ ಪ್ರಚಾರ ಮಾಡಿದ್ದರು ಎನ್ನುತ್ತಾರೆ ಇತಿಹಾಸಕಾರರು.

1837ರ ಮಾರ್ಚ್ 29 ರಿಂದ ಎಪ್ರಿಲ್ 5ರವರೆಗೆ ಕೊಡಗಿಗೆ ಸೇರಿದ್ದ ಅಮರ ಸುಳ್ಯ ಸ್ಥಳದಿಂದ ಮಂಗಳೂರುವರೆಗೆ ಬ್ರಿಟಿಷರ ವಿರುದ್ಧ ಭಾರೀ ದೊಡ್ಡ ಮಟ್ಟದ ಕ್ರಾಂತಿ ನಡೆಯಿತು. ಈ ಕ್ರಾಂತಿಗೆ ಮುಖ್ಯ ಕಾರಣ ಸುಳ್ಯ ಪ್ರದೇಶವನ್ನು‌ ಬ್ರಿಟೀಷರು ಕೆನರಾ ಜಿಲ್ಲೆಗೆ (ಅಂದರೆ ಈಗಿನ ದಕ್ಷಿಣ ಕನ್ನಡ) ಸೇರಿಸಿದುದು ಹಾಗೂ ಧಾನ್ಯದ ರೂಪದಲ್ಲಿ ಕೊಡಲಾಗುತ್ತಿದ್ದ ತೆರಿಗೆಯನ್ನು ನಗದು ರೂಪದಲ್ಲಿ ಕೊಡಬೇಕೆಂದು ಆದೇಶಿಸಿದ್ದು, ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿತು ಎನ್ನಲಾಗುತ್ತಿದೆ.

ಆ ಸಂದರ್ಭ ಬಾವುಟಗುಡ್ಡೆ ಎಂಬ ಹೆಸರಿನ ಹಿಂದೆ ಇಂತಹ ರೋಚಕ ಇತಿಹಾಸವಿದೆ ಎಂದು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಉದಯ ಬಾರ್ಕೂರು ಮಾತನಾಡಿ, ಅನೇಕರಿಗೆ 1857 ರ ದಂಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಎಂದು ತಿಳಿದಿದ್ದಾರೆ. ಆದರೆ, ವಸಾಹತುಶಾಹಿ ವಿರುದ್ಧ ನಡೆದಿರುವ ಹೋರಾಟಗಳು 1757 ರ ಪ್ಲಾಸೀ ಕದನದ ನಂತರದಲ್ಲಿ ಭಾರತದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಾ ಬಂದಿತ್ತು. ಪ್ರತಿರೋಧಗಳು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಲ್ಲಿನ ನಾಯಕರ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ನಡೆಯುತ್ತಿತ್ತು. ಕರಾವಳಿಯನ್ನು ಕುರಿತು ನೋಡಿದರೆ, 1837ರಲ್ಲಿ ಅಮರಸುಳ್ಯ ಕ್ರಾಂತಿ ಕರಾವಳಿ ಕರ್ನಾಟಕದಲ್ಲಿ ಬಹು ದೊಡ್ಡಮಟ್ಟದಲ್ಲಿ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಹೊಸ ತಿರುವು ಎಂದರೆ ತಪ್ಪಿಲ್ಲ.

ಮಂಗಳೂರು: ಸ್ವಾತಂತ್ರ್ಯ ಹೋರಾಟದ ಇತಿಹಾಸ ಆರಂಭವಾಗುವುದೇ 1857ರ ಸಿಪಾಯಿ ದಂಗೆಯ ಮೂಲಕ. ಈ ದಂಗೆಯೇ ಬ್ರಿಟಿಷರ ದಾಸ್ಯದಿಂದ ಭಾರತ ವಿಮೋಚನೆಗೆ ನಾಂದಿ ಹಾಡಿದ್ದು ಇಂದು ಇತಿಹಾಸ. ಆದರೆ, ಅದಕ್ಕಿಂತ 20 ವರ್ಷಕ್ಕಿಂತ ಮೊದಲೇ, ಅಂದರೆ 1837ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು. ಕಲ್ಯಾಣಪ್ಪನೆಂಬ ಕ್ರಾಂತಿಕಾರಿ ಹೋರಾಟಗಾರ ತನ್ನ ತಂಡದೊಂದಿಗೆ ಬ್ರಿಟಿಷರನ್ನೇ ಹಿಮ್ಮೆಟ್ಟಿಸಿದ್ದ. ಬ್ರಿಟಿಷರ ಬಾವುಟವನ್ನು ಸುಟ್ಟುಹಾಕಿ, ಸ್ವತಂತ್ರ ತುಳು ರಾಜ್ಯದ ಬಾವುಟವನ್ನು ಏರಿಸಿದ್ದ. ಬಳಿಕ ಆ ಸ್ಥಳ ಬಾವುಟಗುಡ್ಡೆ ಎಂದೇ ನಾಮಾಂಕಿತವಾಯಿತು.

ಸಿಪಾಯಿ ದಂಗೆ ಮೊದಲೇ ಮಂಗಳೂರಿನಲ್ಲಿ ಸ್ವಾತಂತ್ರ್ಯ ಕಹಳೆ
ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ.

ವ್ಯಾಪಾರದ ಜತೆಗೆ ಬ್ರಿಟಿಷರು ಅಧಿಪತ್ಯ ಸ್ಥಾಪನೆ ಮಾಡಲು ಶುರು ಮಾಡಿದರು. ದೇಶದ ಆಡಳಿತವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡ ಪರಿಣಾಮ ಭಾರತೀಯರು ಪರಕೀಯರ ಆಡಳಿತದಿಂದ ನರಳುವಂತಾಯಿತು. ಶೋಷಣೆ, ದೌರ್ಜನ್ಯಕ್ಕೆ ಲಕ್ಷಾಂತರ ಭಾರತೀಯರು ಬಲಿಯಾಗಬೇಕಾಯಿತು.

1837ರಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕೆನಾರ ಭಾಗ, ಅಂದರೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬ್ರಿಟಿಷರ ವಿರುದ್ಧ ಬಹುದೊಡ್ಡ ಸಶಸ್ತ್ರ ಹೋರಾಟವೇ ನಡೆದುಹೋಯಿತು‌. ಇದನ್ನು ಅಮರ ಸುಳ್ಯ ಕ್ರಾಂತಿ, ಮಂಗಳೂರು ಕ್ರಾಂತಿ, ಕೊಡಗು-ಕೆನರಾ ಬಂಡಾಯ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ಬ್ರಿಟಿಷರು ಮಾತ್ರ ಅದನ್ನು ಕಲ್ಯಾಣಪ್ಪನ ಕಾಟ್ ಕಾಯಿ (ಕಲ್ಯಾಣಪ್ಪನ ಫಲಕೊಡದ ಕಾಯಿ) ಎಂದು ಲೇವಡಿ ಮಾಡಿ ಪ್ರಚಾರ ಮಾಡಿದ್ದರು ಎನ್ನುತ್ತಾರೆ ಇತಿಹಾಸಕಾರರು.

1837ರ ಮಾರ್ಚ್ 29 ರಿಂದ ಎಪ್ರಿಲ್ 5ರವರೆಗೆ ಕೊಡಗಿಗೆ ಸೇರಿದ್ದ ಅಮರ ಸುಳ್ಯ ಸ್ಥಳದಿಂದ ಮಂಗಳೂರುವರೆಗೆ ಬ್ರಿಟಿಷರ ವಿರುದ್ಧ ಭಾರೀ ದೊಡ್ಡ ಮಟ್ಟದ ಕ್ರಾಂತಿ ನಡೆಯಿತು. ಈ ಕ್ರಾಂತಿಗೆ ಮುಖ್ಯ ಕಾರಣ ಸುಳ್ಯ ಪ್ರದೇಶವನ್ನು‌ ಬ್ರಿಟೀಷರು ಕೆನರಾ ಜಿಲ್ಲೆಗೆ (ಅಂದರೆ ಈಗಿನ ದಕ್ಷಿಣ ಕನ್ನಡ) ಸೇರಿಸಿದುದು ಹಾಗೂ ಧಾನ್ಯದ ರೂಪದಲ್ಲಿ ಕೊಡಲಾಗುತ್ತಿದ್ದ ತೆರಿಗೆಯನ್ನು ನಗದು ರೂಪದಲ್ಲಿ ಕೊಡಬೇಕೆಂದು ಆದೇಶಿಸಿದ್ದು, ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿತು ಎನ್ನಲಾಗುತ್ತಿದೆ.

ಆ ಸಂದರ್ಭ ಬಾವುಟಗುಡ್ಡೆ ಎಂಬ ಹೆಸರಿನ ಹಿಂದೆ ಇಂತಹ ರೋಚಕ ಇತಿಹಾಸವಿದೆ ಎಂದು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಉದಯ ಬಾರ್ಕೂರು ಮಾತನಾಡಿ, ಅನೇಕರಿಗೆ 1857 ರ ದಂಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಎಂದು ತಿಳಿದಿದ್ದಾರೆ. ಆದರೆ, ವಸಾಹತುಶಾಹಿ ವಿರುದ್ಧ ನಡೆದಿರುವ ಹೋರಾಟಗಳು 1757 ರ ಪ್ಲಾಸೀ ಕದನದ ನಂತರದಲ್ಲಿ ಭಾರತದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಾ ಬಂದಿತ್ತು. ಪ್ರತಿರೋಧಗಳು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಲ್ಲಿನ ನಾಯಕರ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ನಡೆಯುತ್ತಿತ್ತು. ಕರಾವಳಿಯನ್ನು ಕುರಿತು ನೋಡಿದರೆ, 1837ರಲ್ಲಿ ಅಮರಸುಳ್ಯ ಕ್ರಾಂತಿ ಕರಾವಳಿ ಕರ್ನಾಟಕದಲ್ಲಿ ಬಹು ದೊಡ್ಡಮಟ್ಟದಲ್ಲಿ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಹೊಸ ತಿರುವು ಎಂದರೆ ತಪ್ಪಿಲ್ಲ.

Intro:SPECIAL STORY


ಮಂಗಳೂರು: ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಆರಂಭವಾಗುವುದೇ 1857ರ ಸಿಪಾಯಿ ದಂಗೆಯ ಮೂಲಕ. ಈ ದಂಗೆಯೇ ಬ್ರಿಟೀಷರ ದಾಸ್ಯವಿಮೋಚನೆಯಿಂದ ದೇಶ ಸ್ವಾತಂತ್ರ್ಯ ಹೊಂದಬೇಕೆಂದು ಹೋರಾಟಗಾರರ ಎದೆಯಲ್ಲಿ ಕಿಚ್ಚನ್ನು ಮೂಡಿಸಿದ್ದು ಎಂದು ಇತಿಹಾಸ ಹೇಳುತ್ತದೆ. ಆದರೆ ಅದಕ್ಕಿಂತ ಇಪ್ಪತ್ತು ವರ್ಷಕ್ಕಿಂತ ಮೊದಲೇ ಅಂದರೆ 1837ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು. ಕಲ್ಯಾಣಪ್ಪನೆಂಬ ಕ್ರಾಂತಿಕಾರಿ ಹೋರಾಟಗಾರ ತನ್ನ ತಂಡದೊಂದಿಗೆ ಬ್ರಿಟೀಷರನ್ನೇ ಹಿಮ್ಮೆಟ್ಟಿಸಿದ್ದ. ಬ್ರಿಟೀಷರ ಬಾವುಟವನ್ನು ಸುಟ್ಟುಹಾಕಿ, ಸ್ವತಂತ್ರ ತುಳುರಾಜ್ಯದ ಬಾವುಟವನ್ನು ಏರಿಸಿದ್ದ. ಬಳಿಕ ಆ ಸ್ಥಳ ಬಾವುಟಗುಡ್ಡೆ ಎಂದೇ ನಾಮಾಂಕಿತವಾಯಿತು. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ.

ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ಮೆಲ್ಲನೆ ಇಲ್ಲಿ ತಮ್ಮ ಅಧಿಪತ್ಯ ಸ್ಥಾಪನೆ ಮಾಡಲು ತೊಡಗಿದರು. ಇಡೀ ದೇಶದ ಆಡಳಿತವನ್ನು ತಮ್ಮ ಸ್ವಾಧೀನಕ್ಕೆ ತಂದರು. ಪರಿಣಾಮ ಭಾರತೀಯರು ಪರಕೀಯರ ಆಡಳಿತದಿಂದ ನರಳುವಂತಾಯಿತು. ಅವರ ಶೋಷಣೆ, ದೌರ್ಜನ್ಯಕ್ಕೆ ಬಲಿಯಾಗಿ ಬದುಕುವ ಸ್ಥಿತಿ ಒದಗಿತು. ಇದರಿಂದ ಬ್ರಿಟಿಷರ ಬಗ್ಗೆ ದೇಶದಲ್ಲಿ ಅಸಮಾಧಾನದ ಹೊಗೆಯಾಡಲು ಆರಂಭವಾಯಿತು. ಜೊತೆಗೆ ಅಲ್ಲಲ್ಲಿ ಸಣ್ಣ ಮಟ್ಟದ ಪ್ರತಿರೋಧಗಳೂ ನಡೆಯುತ್ತಲೇ ಇತ್ತು. ಇದೇ ರೀತಿಯ ಪ್ರತಿರೋಧವೊಂದು 1837ರಲ್ಲಿ ಕರಾವಳಿ ಕರ್ನಾಟಕದ ಸೌತ್ ಕೆನಾರ ಭಾಗ ಅಂದರೆ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ
ಬ್ರಿಟಿಷರ ವಿರುದ್ಧ ಬಹುದೊಡ್ಡ ಸಶಸ್ತ್ರ ಹೋರಾಟವೇ ಆಗಿ ನಡೆದುಹೋಯಿತು‌. ಇದನ್ನು ಅಮರ ಸುಳ್ಯ ಕ್ರಾಂತಿ, ಮಂಗಳೂರು ಕ್ರಾಂತಿ, ಕೊಡಗು-ಕೆನರಾ ಬಂಡಾಯ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ಬ್ರಿಟಿಷರು ಮಾತ್ರ ಅದನ್ನು ಕಲ್ಯಾಣಪ್ಪನ ಕಾಟ್ ಕಾಯಿ( ಕಲ್ಯಾಣಪ್ಪನ ಫಲಕೊಡದ ಕಾಯಿ) ಎಂದು ಲೇವಡಿ ಮಾಡಿ ಪ್ರಚಾರ ಮಾಡಿದರು.

1837ರ ಮಾರ್ಚ್ 29 ರಿಂದ ಎಪ್ರಿಲ್ 5ರವರೆಗೆ ಕೊಡಗಿಗೆ ಸೇರಿದ್ದ ಅಮರ ಸುಳ್ಯ ಎಂಬಲ್ಲಿಂದ ಮಂಗಳೂರುವರೆಗೆ ಬ್ರಿಟಿಷರ ವಿರುದ್ಧ ಭಾರೀ ದೊಡ್ಡ ಮಟ್ಟದ ಕ್ರಾಂತಿ ನಡೆಯಿತು. ಈ ಕ್ರಾಂತಿಗೆ ಮುಖ್ಯ ಕಾರಣ ಅಮರ ಸುಳ್ಯ ಪ್ರದೇಶವನ್ನು‌ ಬ್ರಿಟೀಷರು ಕೆನರಾ ಜಿಲ್ಲೆಗೆ(ಅಂದರೆ ಈಗಿನ ದಕ್ಷಿಣ ಕನ್ನಡ) ಸೇರಿಸಿದುದು ಹಾಗೂ ಧಾನ್ಯದ ರೂಪದಲ್ಲಿ ಕೊಡಲಾಗುತ್ತಿದ್ದ ತೆರಿಗೆಯನ್ನು ನಗದು ರೂಪದಲ್ಲಿ ಕೊಡಬೇಕೆಂದು ಆದೇಶಿಸಿದ್ದು, ರೈತರಲ್ಲಿ ಹೋರಾಟದ ಕಿಚ್ಚು ಹಚ್ಚಿತು.


Body:ಈ ನಡುವೆ ಬ್ರಿಟಿಷರು ಕೊಡಗಿನ ರಾಜನನ್ನು ಪದಚ್ಯುತಗೊಳಿಸಿ, ಕೊಡಗನ್ನು‌ ತಮ್ಮ ನೇರ ಆಳ್ವಿಕೆಗೆ ತೆಗೆದುಕೊಂಡರು‌. ಇದರಿಂದ ಕೊಡಗಿನ ಮುಂದಿನ ಉತ್ತರಾಧಿಕಾರಿಗಳಾದ ಸ್ವಾಮಿ ಅಪರಂಪಾರ ಮತ್ತು ಕಲ್ಯಾಣ ಸ್ವಾಮಿ ಅಸಮಾಧಾನವಾಯಿತು. ಜೊತೆಗೆ ಕೊಡಗಿನ ಬ್ರಿಟಿಷ್ ಅಧಿಕಾರಿಯೋರ್ವನು ಕೊಡಗಿನ ದಿವಾನರಾಗಿದ್ದ ಲಕ್ಷ್ಮೀನಾರಾಯಣಯ್ಯ ಎಂಬವರನ್ನು‌ ಸೇವೆಯಿಂದ ವಜಾಗೊಳಿಸಿ ಸೆರೆಮನೆಗೆ ತಳ್ಳಿದ. ಇದರಿಂದ ಲಕ್ಷ್ಮೀನಾರಾಯಣಯ್ಯರ ತಮ್ಮ ರಾಮಪ್ಪಯ್ಯ, ಸುಳ್ಯದ ಶ್ಯಾನುಭಾಗ ಶಂಕರನಾರಾಯಣಯ್ಯ, ಕಲ್ಯಾಣ ಸ್ವಾಮಿ, ಸ್ವಾಮಿ‌ ಅಪರಂಪಾರ ಹಾಗೂ ಇತರ ಅವರ ಬಂಧು- ಸ್ನೇಹಿತರು ಗುಟ್ಟಾಗಿ ಒಟ್ಟಾದರು. ಬ್ರಿಟಿಷರ ವಿರುದ್ಧ ಯುದ್ಧ ಸಾರಲು ಸುಳ್ಯದ ಗೌಡ ಜಮೀನುದಾರ ಕೆಂದಂಬಾಡಿ ರಾಮಯ್ಯ ಗೌಡ ಎಂಬಾತನ ನೇತೃತ್ವದಲ್ಲಿ ಸೈನ್ಯ ಸಜ್ಜಾಯಿತು.

ಈ ನಡುವೆ ಕಲ್ಯಾಣ ಸ್ವಾಮಿಯನ್ನು ಬ್ರಿಟಿಷರು ಬಂಧಿಸಿದಾಗ, ರಾಮಯ್ಯ ಗೌಡ ಹಾಗೂ ಸುಳ್ಯದ ಹೋರಾಟಗಾರರು ಆತನ ಬಂಧನದ ವಿಷಯವನ್ನು ಮರೆಮಾಡಿ ಕೊಡಗಿನ ಶನಿವಾರ ಸಂತೆಯ ಹೆಮ್ಮನಿ ಗ್ರಾಮದ ಪುಟ್ಟ ಬಸಪ್ಪ ಎಂಬಾತನಿಗೆ ಕಲ್ಯಾಣ ಸ್ವಾಮಿಯ ವೇಷ ತೊಡಿಸಿ ಕಲ್ಯಾಣಪ್ಪ ಎಂದು ಬಿಂಬಿಸಿ ಹೋರಾಟಕ್ಕೆ ಅಣಿಯಾಗುತ್ತಾರೆ. 1837 ರ ಮಾರ್ಚ್ 29ಕ್ಕೆ ಸೈನ್ಯ ಸುಳ್ಯದ ಸಂಪಾಜೆ, ಪೆರಾಜೆಯಲ್ಲಿ ಜನರನ್ನು‌ ಒಟ್ಟುಗೊಳಿಸಿ ಹೊರಡುತ್ತದೆ. ಇಲ್ಲಿಂದ ಮಾರ್ಚ್ 30 ಕ್ಕೆ ಬೆಳ್ಳಾರೆಯ ಬ್ರಿಟಿಷ್‌ ಬಂಗಲೆಯನ್ನು ಹಾಗೂ ಖಜಾನೆಯನ್ನು ವಶಪಡಿಸಿಕೊಳ್ಳಲಾಗುತ್ತದೆ. ಇಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ತಲೆತಪ್ಪಿಸಿಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಹೊರಟ ಕಲ್ಯಾಣಪ್ಪನ ಸೇನೆ ಸುಳ್ಯ, ಪುತ್ತೂರು, ಕಾಸರಗೋಡು, ಕುಂಬಳೆ, ಮಂಜೇಶ್ವರ,‌ ಬಂಟ್ವಾಳ ಪರಂಗಿಪೇಟೆಯನ್ನು ವಶಕ್ಕೆ ತೆಗೆದುಕೊಳ್ಳುತ್ತದೆ. ಈ ನಡುವೆ ನಂದಾವರದ ಅರಸು ಲಕ್ಷ್ಮಪ್ಪ ಬಂಗರಸನೂ ಜೊತೆ ಸೇರಿ ಮಂಗಳೂರಿಗೆ ಮುತ್ತಿಗೆ ಹಾಕುತ್ತಾರೆ. ಜೊತೆಗೆ ಕೊಡಗಿನ ಅರಸು ಕಲ್ಯಾಣ ಸ್ವಾಮಿ ಅಪಾರ ಸೈನ್ಯದೊಂದಿಗೆ ಬಂದು ಬ್ರಿಟಿಷರನ್ನು ಸೋಲಿಸಿ ಸರಕಾರ ಸ್ಥಾಪನೆ ಮಾಡಲಿದ್ದಾನೆ‌‌ ತೆರಿಗೆಯ ಹೊರೆಯನ್ನೂ ಇಳಿಸುತ್ತಾನೆ ಎಂಬ ಪ್ರಚಾರ ಮಾಡಿ ಸೌತ್ ಕೆನರಾ(ಇಂದಿನ ದಕ್ಷಿಣ ಕನ್ನಡ) ಜಿಲ್ಲೆಯಾದ್ಯಂತ ಹೋರಾಟಗಾರರನ್ನು ಒಟ್ಟುಗೂಡಿಸುವ ಪ್ರಯತ್ನವೂ ನಡೆಯುತ್ತದೆ.

ಎಪ್ರಿಲ್ 5ರಂದು ಕಲ್ಯಾಣಪ್ಪನ ಸೈನ್ಯ ಮಂಗಳೂರಿನ ಈಗಿನ‌ ಜಿಲ್ಲಾಧಿಕಾರಿಯ ಕಚೇರಿಯಿರುವ ಬ್ರಿಟಿಷ್ ಕಲೆಕ್ಟರ್ ನ ಕಚೇರಿಗೆ ಮುತ್ತಿಗೆ ಹಾಕುತ್ತದೆ. ಆದರೆ ಅದಾಗಲೇ ಬ್ರಿಟಿಷರು ಹೆದರಿ ಕಣ್ಣಾನೂರಿಗೆ ಪಲಾಯನ ಗೈದಿರುತ್ತಾರೆ. ಬ್ರಿಟಿಷ್ ಕಲೆಕ್ಟರ್ ಕಚೇರಿಯ ಮೇಲೆ ಹಾರುತ್ತಿದ್ದ ಬಾವುಟವನ್ನು ಕಲ್ಯಾಣಪ್ಪನ ಸೈನ್ಯ ಕೆಡವಿ ಸುಟ್ಟು ಹಾಕುತ್ತದೆ. ಅಲ್ಲಿಂದ ಸೈನ್ಯ ಈಗ ಬಾವುಟಗುಡ್ಡೆ ಎಂದು ಹೆಸರಿಸಲಾಗುವ ಪ್ರದೇಶಕ್ಕೆ ಬಂದು ಸ್ವತಂತ್ರ ತುಳುರಾಜ್ಯದ ಬಾವುಟವನ್ನು‌ ಏರಿಸಲಾಯಿತು‌. ಹಾಗಾಗಿ ಆ ಸ್ಥಳಕ್ಕೆ ಬಾವುಟಗುಡ್ಡೆ ಎಂದು ಹೆಸರಾಯಿತು. ಹೀಗೆ ಕಲ್ಯಾಣಪ್ಪನ ಸೈನ್ಯ ಏಳು ದಿನಗಳ ದಂಡಯಾತ್ರೆ ನಡೆಸಿ ಬ್ರಿಟಿಷರನ್ನು ಓಡಿಸಿ ತುಳು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿ ಆಡಳಿತ ನಡೆಸತೊಡಗಿತು.

ಆದರೆ ಈ ಸ್ವತಂತ್ರ ಆಡಳಿತ ಕೇವಲ 13 ದಿನಗಳು ಮಾತ್ರ ನಡೆಯಿತು. ಅದಾಗಿ 13 ದಿನಗಳ ಬಳಿಕ ಬ್ರಿಟಿಷರು ತಲಚ್ಚೇರಿ ಹಾಗೂ ಬೆಂಗಳೂರಿನಿಂದ ಹೆಚ್ಚಿನ ಸೈನ್ಯ ತಂದು ಹೋರಾಟಗಾರರೊಂದಿಗೆ ಯುದ್ಧ ಮಾಡಿದರು. ಈ ಸೈನ್ಯದೆದುರು ಹೋರಾಡಲು ಕಲ್ಯಾಣಪ್ಪನ ಸೈನ್ಯಕ್ಕೆ ಶಕ್ತಿ ಸಾಲದಾಯಿತು‌. ಇವರಲ್ಲಿ ಕೆದಂಬಾಡಿ ರಾಮಯ್ಯ ಗೌಡ, ಹುಲಿಕುಂದ ನಂಜಯ್ಯ ಸೇರಿ ಹಲವಾರು ಮಂದಿ ಮಡಿದರು. ಕಲ್ಯಾಣಪ್ಪ, ನಂದಾವರದ ಲಕ್ಷ್ಮಪ್ಪ ಬಂಗರಸ ಹಾಗೂ ಉಪ್ಪಿನಂಗಡಿಯ ಮಂಜ ಎಂಬವರನ್ನು ಸೆರೆ ಹಿಡಿದ ಬ್ರಿಟಿಷರು ಜೂನ್ 29ಕ್ಕೆ ಇಂದಿನ ಬಿಕರ್ನಕಟ್ಟೆಯಲ್ಲಿರುವ ನ್ಯಾಯದ ಕಟ್ಟೆಯ ಮೇಲೆ ಗಲ್ಲಿಗೇರಿಸಿದರು‌. ಗಲ್ಲಿಗೇರಿಸಿದ ಕೃತ್ಯ ಎಷ್ಟು ಭೀಕರವಾಗಿತ್ತೆಂದರೆ ಅವರ ಹೆಣವನ್ನು ಅವರ ಮನೆಯವರಿಗೆ ನೀಡದೆ ಬಹು ದಿನಗಳ ಕಾಲ ಅಲ್ಲೇ ನೇತಾಡುತ್ತಾ ಕೊಳೆಯುವಂತೆ ಮಾಡಲಾಯಿತು. ಜನರು ಅದನ್ನು ನೋಡಿ ಹೆದರಿ ಹೆದರಿ ಅದಕ್ಕೆ ಭೀಕರ-ರಣ-ಕಟ್ಟೆ ಎಂದು ಹೆಸರಾಯಿತು. ಅದೇ ಇಂದು ಬಿಕರ್ನಕಟ್ಟೆಯಾಯಿತು.


Conclusion:ಆದರೆ ಇಂದು ಜನರು ಇತಿಹಾಸವನ್ನು ಮರೆತಿದ್ದಾರೆ ಯಾರಿಗೂ ಬಾವುಟಗುಡ್ಡೆ ಹಾಗೂ ಬಿಕರ್ನಕಟ್ಟೆ ಹೆಸರಿನ ಹಿಂದೆ ಇಂತಹ ರೋಚಕ ಇತಿಹಾಸ ಇದೆ ಎಂದೇ ತಿಳಿದಿಲ್ಲ. ಅಲ್ಲದೆ ಜಿಲ್ಲಾಡಳಿತವೂ ಕಲ್ಯಾಣಪ್ಪನ ಕ್ರಾಂತಿಯ ಇತಿಹಾಸವನ್ನು ಮರೆತುಬಿಟ್ಟಿದೆ. ಜೊತೆಗೆ ಕಲ್ಯಾಣಪ್ಪನ ವಿಷಯವಾಗಿ ಯಾವ ಕುರುಹನ್ನು ನೆನಪಿಸುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಜಿಲ್ಲಾಡಳಿತ ಇಂತಹ ಪ್ರಯತ್ನ ನಡೆಸಿದರೆ, ಜನಮಾನಸದಲ್ಲಿ ಕಲ್ಯಾಣಪ್ಪನ ಹೆಸರು ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಅಲ್ಲದೆ ಒಂದು ವರ್ಷದ ಹಿಂದೆ ಇದೇ ಬಾವುಟಗುಡ್ಡೆಯ ರಸ್ತೆಗೆ ವಿಜಯ ಬ್ಯಾಂಕ್ ಸ್ಥಾಪಕ ಮುಲ್ಕಿ ಸುಂದರರಾಮ ಶೆಟ್ಟರ ಹೆಸರು, ಅಲೋಶಿಯಸ್ ರಸ್ತೆ ಎಂದು ಮರುನಾಮಕರಣ ಮಾಡಬೇಕು ಎಂಬುದರ ಬಗ್ಗೆ ಬಹುದೊಡ್ಡ ಲಾಭಿಯೇ ನಡೆಯಿತು.

ಆದರೆ ಆ ಸಂದರ್ಭ ಬಾವುಟಗುಡ್ಡೆ ಎಂಬ ಹೆಸರಿನ ಹಿಂದೆ ಇಂತಹ ರೋಚಕ ಇತಿಹಾಸವಿದೆ ಎಂದು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಉದಯ ಬಾರ್ಕೂರು ಮಾತನಾಡಿ, ಅನೇಕರಿಗೆ 1857 ರ ದಂಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಎಂದು ತಿಳಿದಿದ್ದಾರೆ. ಆದರೆ ವಸಾಹತುಶಾಹಿ ವಿರುದ್ಧ ನಡೆದಿರುವ ಹೋರಾಟಗಳು 1757 ರ ಪ್ಲಾಸೀ ಕದನದ ನಂತರದಲ್ಲಿ ಭಾರತದ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಾ ಬಂದಿತ್ತು. ಪ್ರತಿರೋಧಗಳು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಲ್ಲಿನ ನಾಯಕರ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ನಡೆಯುತ್ತಿತ್ತು. ಕರಾವಳಿಯನ್ನು ಕುರಿತು ನೋಡಿದರೆ 1837ರಲ್ಲಿ ಅಮರಸುಳ್ಯ ಕ್ರಾಂತಿ ಕರಾವಳಿ ಕರ್ನಾಟಕದಲ್ಲಿ ಬಹು ದೊಡ್ಡಮಟ್ಟದಲ್ಲಿ
ಸ್ವಾತಂತ್ರ್ಯ ಚಳುವಳಿಗೆ ನೀಡಿದ ಹೊಸ ತಿರುವು ಎಂದರೆ ತಪ್ಪಿಲ್ಲ. ಇದು ಬ್ರಿಟಿಷ್ ವಸಾಹತು ಶಾಹಿ ವಿರುದ್ಧ ಮಾತ್ರವಲ್ಲದೆ ಬ್ರಿಟಿಷ್ ಕಲೆಕ್ಟರ್ ಗಳು ಹಾಕಿರುವ ಕಂದಾಯದ ವಿರುದ್ಧ ನಡೆದಿರುವ ಏರು ದನಿಯ ಹೋರಾಟ. ಇದು ಅಪರಂಪಾರ ಮತ್ತು ಪುಟ್ಟಬಸಪ್ಪ ಕಲ್ಯಾಣಪ್ಪನ ಹೆಸರಿನಲ್ಲಿ ಅಮರ ಸುಳ್ಯ ಎಂಬ ಭಾಗದಲ್ಲಿ ನಡೆಸಿರುವಂತಹ ಚಳುವಳಿ. ಇಲ್ಲಿ ಗ್ರಾಮೀಣರ ಜನರಿಂದ ಬ್ರಿಟಿಷರು ಭೂಕಂದಾಯವನ್ನು ಹೆಚ್ಚು ಪಡೆಯುತ್ತಿರುವುದು ಮಾತ್ರವಲ್ಲ ವ್ಯಾಪಾರಸ್ಥರ ಮೇಲೆ ಹೆಚ್ಚು ತೆರಿಗೆ ಹೇರುತ್ತಿದ್ದರು. ಇದರಿಂದ ಬೇಸತ್ತ ಜನರು ಮುಂದೆ ಬ್ರಿಟಿಷರ ವಿರುದ್ಧ ಬಹುದೊಡ್ಡ ಕ್ರಾಂತಿಯನ್ನೇ ಮಾಡುತ್ತಾರೆ ಎಂದು ಹೇಳಿದರು.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.