ETV Bharat / state

ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿ: ಮಂಜ್ರೇಕರ್ - ಮಂಗಳೂರಿನಲ್ಲಿ ಬ್ಯಾಂಕ್ ವಿಲೀನ ಖಂಡಿಸಿ ಪ್ರತಿಭಟನೆ

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿಗಳಿಂದ ಸೃಷ್ಠಿಯಾಗಿರುವ ಬಿಕ್ಕಟ್ಟನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಗರದ ಪಾಂಡೇಶ್ವರ ಕಾಪೋರೇಷನ್ ಬ್ಯಾಂಕ್​ ವರೆಗೆ ಕ್ಯಾಂಡಲ್ ಮೆರವಣಿಗೆ ನಡೆಸಿದರು.

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿ ವಿರೋಧಿಸಿ ಕ್ಯಾಂಡಲ್ ಮೆರವಣಿಗೆ
author img

By

Published : Oct 19, 2019, 3:54 PM IST

ಮಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜಿಡಿಪಿ ಕುಸಿಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿ ಅವರು ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಮೆರಿಕಾದ ಹೌಡಿ ಕಾರ್ಯಕ್ರಮದಲ್ಲಿ ಹೊಗಳಿ ಬಂದಿದ್ದಾರೆ ಎಂದು ಎಐಒಪಿ ಮುಖಂಡ ಅಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿ ವಿರೋಧಿಸಿ ಕ್ಯಾಂಡಲ್ ಮೆರವಣಿಗೆ

ಬ್ಯಾಂಕ್​ಗಳ ವಿಲೀನ ವಿರೋಧಿಸಿ ವಿವಿಧ ಸಂಘಟನೆಗಳು ಜಂಟಿಯಾಗಿ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್​ವರೆಗೆ ಹಮ್ಮಿಕೊಂಡಿದ್ದ ಕ್ಯಾಂಡಲ್ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.

ಜುಲೈ 19ರಂದು ರಾಷ್ಟ್ರೀಕರಣದ ಸುವರ್ಣ ಸಂಭ್ರಮವನ್ನು ಆಚರಿಸಿದ್ದೆವು. ಇದಾಗಿ ಒಂದೂವರೆ ತಿಂಗಳಲ್ಲಿ ವಿತ್ತ ಸಚಿವರು 10 ಬ್ಯಾಂಕ್​ಗಳನ್ನು ವಿಲೀನ ಮಾಡಿ, ನಾಲ್ಕು ಬ್ಯಾಂಕ್​ಗಳು ಉಳಿಯುತ್ತವೆ ಎಂದು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಬ್ಯಾಂಕ್​ ವಿಲೀನದಿಂದ ಬ್ಯಾಂಕಿಂಗ್​​ ಉದ್ಯಮ ಧೂಳಿಪಟ ಮಾಡಲಾಗುತ್ತಿದೆ. ಆರ್ಥಿಕ ಅಭದ್ರತೆ ಸೃಷ್ಟಿಸಿರುವ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭ ವಿವಿಧ ಬ್ಯಾಂಕ್​ಗಳ ಅಧಿಕಾರಿಗಳು, ನೌಕರರು ಸೇರಿ ಮೂರು ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜಿಡಿಪಿ ಕುಸಿಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿ ಅವರು ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಮೆರಿಕಾದ ಹೌಡಿ ಕಾರ್ಯಕ್ರಮದಲ್ಲಿ ಹೊಗಳಿ ಬಂದಿದ್ದಾರೆ ಎಂದು ಎಐಒಪಿ ಮುಖಂಡ ಅಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿ ವಿರೋಧಿಸಿ ಕ್ಯಾಂಡಲ್ ಮೆರವಣಿಗೆ

ಬ್ಯಾಂಕ್​ಗಳ ವಿಲೀನ ವಿರೋಧಿಸಿ ವಿವಿಧ ಸಂಘಟನೆಗಳು ಜಂಟಿಯಾಗಿ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್​ವರೆಗೆ ಹಮ್ಮಿಕೊಂಡಿದ್ದ ಕ್ಯಾಂಡಲ್ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.

ಜುಲೈ 19ರಂದು ರಾಷ್ಟ್ರೀಕರಣದ ಸುವರ್ಣ ಸಂಭ್ರಮವನ್ನು ಆಚರಿಸಿದ್ದೆವು. ಇದಾಗಿ ಒಂದೂವರೆ ತಿಂಗಳಲ್ಲಿ ವಿತ್ತ ಸಚಿವರು 10 ಬ್ಯಾಂಕ್​ಗಳನ್ನು ವಿಲೀನ ಮಾಡಿ, ನಾಲ್ಕು ಬ್ಯಾಂಕ್​ಗಳು ಉಳಿಯುತ್ತವೆ ಎಂದು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಬ್ಯಾಂಕ್​ ವಿಲೀನದಿಂದ ಬ್ಯಾಂಕಿಂಗ್​​ ಉದ್ಯಮ ಧೂಳಿಪಟ ಮಾಡಲಾಗುತ್ತಿದೆ. ಆರ್ಥಿಕ ಅಭದ್ರತೆ ಸೃಷ್ಟಿಸಿರುವ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭ ವಿವಿಧ ಬ್ಯಾಂಕ್​ಗಳ ಅಧಿಕಾರಿಗಳು, ನೌಕರರು ಸೇರಿ ಮೂರು ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Intro:ಮಂಗಳೂರು: ಬ್ಯಾಂಕ್ ಗಳ ವಿಲೀನವನ್ನು ವಿರೋಧಿಸಿ ಬ್ಯಾಂಕ್ ನೌಕರರು, ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಹಭಾಗಿತ್ವದಲ್ಲಿ ಇಂದು ಸಂಜೆ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್ ವರೆಗೆ ಕ್ಯಾಂಡಲ್ ಮೆರವಣಿಗೆ ನಡೆಯಿತು.

ಪ್ರಗತಿಪರ ಚಿಂತಕ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಟಿ.ಆರ್.ಭಟ್ ಪ್ರತಿಭಟನಾಕಾರರಿಗೆ ಪಂಜು ನೀಡುವ ಮೂಲಕ ಕ್ಯಾಂಡಲ್ ಮೆರವಣಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಇವತ್ತು ಉರಿಸಿರುವ ದೊಂದಿ ದೇಶದ ಆರ್ಥಿಕತೆ ಹಾಗೂ ಬ್ಯಾಂಕ್ ಉದ್ಯಮವನ್ನು ಧೂಳಿಪಟ ಮಾಡುವ ಸರಕಾರವನ್ನು ಕಿತ್ತೊಗೆಯುವವರೆಗೆ ಉರಿಯಬೇಕು. ಯಾವ ಸರಕಾರವನ್ನು ನಾವು ಮತ ಹಾಕಿ ಗೆಲ್ಲಿಸಿದ್ದೇವೆಯೋ ಅವರೇ ಇದನ್ನು ಮಾಡಿದ್ದಾರೆ ಎಂಬುದು ನಮಗೆ ಮನದಟ್ಟಾಗದಿದ್ದರೆ ನಾವು ಈ ದೊಂದಿಯನ್ನು ಹಿಡಿದುಕೊಂಡಲ್ಲಿಯೇ ಇರಬೇಕಾಗುತ್ತದೆ. ಸರಕಾರ ನಮ್ಮ ಬೆನ್ನ ಹಿಂದೆ ಇಂತಹ ಕೃತ್ಯಗಳನ್ನು ಮಾಡುತ್ತಲೇ ಇರುತ್ತದೆ. ಆದ್ದರಿಂದ ಇದನ್ನು ಮನಗಂಡು ಮುಂದಿನ ಚುನಾವಣೆಯಲ್ಲಿ ಈ ಸರಕಾರವನ್ನು ಎಲ್ಲರೂ ಕಿತ್ತೊಗೆಯಬೇಕು ಎಂದು ಹೇಳಿದರು.


Body:ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಐಒಪಿಯ ಅಜಯ್ ಮಂಜ್ರೇಕರ್ ಮಾತನಾಡಿ, ಇಂದಿನ ನಮ್ಮ ಜಾಥಾ ಬಹಳ ಅನನ್ಯವಾಗಿದೆ ಎಂದು ಹೇಳಬಹುದು. ಯಾಕೆಂದರೆ ಇದು ಬ್ಯಾಂಕ್ ವಿಲೀನವನ್ನು ವಿರೋಧಿಸಿ ನಡೆದ ಜಾಥಾ. ಸೆಪ್ಟೆಂಬರ್ 30ರಂದು ದೆಹಲಿಯಲ್ಲಿ ಎಸಿಟಿಯು ಕನ್ವೆನ್ಷನ್ ನಡೆಯಿತು. ಅದರಲ್ಲಿ ಆರ್ಥಿಕತೆಯ ಪರಿಣಾಮ ಗಳೇನು ಅದರಿಂದಾಗುವ ದುಷ್ಪರಿಣಾಮಗಳೇನು, ನಿರುದ್ಯೋಗ ಹೇಗೆ ಉಂಟಾಗುತ್ತದೆ. ಜಿಡಿಪಿ ಹೇಗೆ ಕುಸಿಯುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಪ್ರಮಾಣ ಯಾವ ರೀತಿ ಕುಸಿಯುತ್ತಿದೆ. ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಆದರೆ ನಮ್ಮ ಪ್ರಧಾನಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದಾರೆ. ನಾವು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ನಾವು ಜನವಿರೋಧಿ ನೀತಿಗಳನ್ನು ವಿರೋಧಿಸುತ್ತೇವೆಯೇ ವಿನಃ ಮನುಷ್ಯರನ್ನಲ್ಲ ಎಂದು ಹೇಳಿದರು.

ಜುಲೈ 19ರಂದು ರಾಷ್ಟ್ರೀಕರಣದ ಸುವರ್ಣ ಸಂಭ್ರಮ ವನ್ನು ಆಚರಿಸಿದ್ದೆವು. ಆದರೆ ಇದಾಗಿ ಒಂದುವರೆ ತಿಂಗಳಲ್ಲಿ ವಿತ್ತ ಮಂತ್ರಿ 10 ಬ್ಯಾಂಕುಗಳನ್ನು ವಿಲೀನ ಮಾಡಿ ನಾಲ್ಕು ಬ್ಯಾಂಕುಗಳು ಉಳಿಯುತ್ತವೆ ಎಂದು ಘೋಷಣೆ ಮಾಡಿದ್ದಾರೆ. ಇದರರ್ಥ ಉಳಿದ ಆರು ಬ್ಯಾಂಕುಗಳು ಮುಚ್ಚಲ್ಪಡುತ್ತದೆ.ಇದರ ವಿರುದ್ಧ ನಾವು ಹೋರಾಡಲೇಬೇಕು ಎಂದು ಅವರು ಹೇಳಿದರು.

ಈ ಸಂದರ್ಭ ವಿವಿಧ ಬ್ಯಾಂಕುಗಳ ಅಧಿಕಾರಿಗಳು, ನೌಕರರು ಸೇರಿ ಮೂರು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Reporter_Vishwanath Panjimogaru

ಪ್ಲ್ಯಾಗ್ ಹಿಡಿದ ಹಿಂದಿನವರು ಅಜಯ್ ಮಂಜ್ರೇಕರ್

40 ನಿಮಿಷದ ಫೈಲ್ ವೀಡಿಯೋ ಇರುವವರು ಶ್ರೀನಿವಾಸ ಕಕ್ಕಿಲ್ಲಾಯ


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.