ETV Bharat / state

ಸರ್ಕಾರದ ಅಸಹಕಾರ,  ವೈದ್ಯಾಧಿಕಾರಿ ಕಾಳಜಿ: ಭಟ್ಕಳ ಆಸ್ಪತ್ರೆಗೆ ಸಿಕ್ತು ಮುಕ್ತಿ.. - undefined

ಸರ್ಕಾರದ ಅನುದಾನವಿಲ್ಲದೇ ಆಸ್ಪತ್ರೆ ಚಾವಣಿ ರೆಡಿ ಮಾಡಿಸಿದ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್​

ಭಟ್ಕಳ ಆಸ್ಪತ್ರೆ
author img

By

Published : Jun 11, 2019, 3:43 PM IST

ಕಾರವಾರ: ಮಳೆ ಬಂದ್ರೆ ಸಾಕು ಚಾವಣಿ ನೀರು ಸೋರಿ ಆಸ್ಪತ್ರೆಯೆಲ್ಲ ಕೆರೆಯಂತಾಗುತ್ತಿತ್ತು. ರಿಪೇರಿಗಾಗಿ ಸರ್ಕಾರದ ಅನುದಾನಕ್ಕೆ ಎಷ್ಟು ಕಾದು ಕುಂತ್ರೂ ಉಪಯೋಗವಾಗಲಿಲ್ಲ. ಇಲ್ಲಿನ ವೈದ್ಯಾಧಿಕಾರಿ ಅನುದಾನದ ಬಗ್ಗೆ ಯೋಚ್ನೆ ಮಾಡ್ದೇ ಸರ್ಕಾರದ ಸಹಾಯನೂ ಇಲ್ಲದೇ ಆಸ್ಪತ್ರೆ ದುರಸ್ತಿ ಕಾರ್ಯ ಮಾಡಿಸುತ್ತಿದ್ದಾರೆ

ವೈದ್ಯಾಧಿಕಾರಿಯ ಕಾಳಜಿಯಿಂದ ಭಟ್ಕಳ ಆಸ್ಪತ್ರೆಗೆ ಸಿಕ್ತು ಮುಕ್ತಿ

ಹೌದು ಭಟ್ಕಳ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನ ಕಳೆದ ಮೂರ್ನಾಲ್ಕು ವರ್ಷದ ಹಿಂದೆಯೇ ಮೇಲ್ದರ್ಜೆಗೆ ಏರಿಸಲಾಗಿದೆ. ಆದ್ರೆ, ಇಲ್ಲಿ ಮಾತ್ರ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಹಾಳಾಗಿದೆ. ಮುಖ್ಯವಾಗಿ ಆಸ್ಪತ್ರೆಗೆ ಹೊದಿಸಿದ್ದ ಚಾವಣಿಯೇ ಬಿದ್ದುಹೋಗಿ ಆರು ವರ್ಷವೇ ಕಳೆದಿದ್ದು, ಪ್ರತಿಸಲ ಮಳೆಗಾಲ ಬಂದಾಗ್ಲೂ ಆಸ್ಪತ್ರೆಗೆ ಬರುವ ಜನ ಸೋರುವ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಬಾಣಂತಿಯರು, ವಯೋವೃದ್ಧರು ಆಸ್ಪತ್ರೆ ಒಳಗಡೆ ಓಡಾಡ​ ಬೇಕಂದ್ರೂ ಛತ್ರಿ ಹಿಡಿದೇ ತಿರುಗಾಡಬೇಕಾದ ಅನಿವಾರ್ಯತೆ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು.‌ ಆದ್ರೆ, ಪ್ರತಿ ಮಳೆಗಾಲ ಸಮೀಪಿಸಿದಾಗಲೂ ಚಾವಣಿ ನಿರ್ಮಿಸಲು ಸರ್ಕಾರದ ತಂಡ ಆಗಮಿಸಿ ಸುಮಾರು 45 ಲಕ್ಷದ ವರೆಗೂ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿತ್ತು. ಅಷ್ಟೆ ಆದ್ರೆ ಯಾವುದೇ ಉಪಯೋಗವಂತೂ ಆಗಿಲ್ಲಾ.

ಹೀಗೆ ಕಳೆದ ಐದಾರು ವರ್ಷದಿಂದ ಸರ್ಕಾರದಿಂದ ಯಾವುದೇ ಕಾರ್ಯ ಆಗದ್ದನ್ನು ಮನಗಂಡ ವೈದ್ಯಾಧಿಕಾರಿ ಸಂಪೂರ್ಣ ಆಸ್ಪತ್ರೆಗೆ ಚಾವಣಿ ನಿರ್ಮಿಸಲು ಯೋಜನೆ ರೂಪಿಸಿ ಹಣವನ್ನು ನೀಡುವ ದಾನಿಗಳ ಹುಡುಕಾಟಕ್ಕೆ ತೊಡಗಿದ್ದಾಗ, ಕೊನೆಗೆ ಇವರಿಗೆ ಸಿಕ್ಕಿದ್ದು, ಇನ್ಫೋಸಿಸ್ ಪೌಂಡೇಷನ್. ತಕ್ಷಣ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿದ್ದಾರೆ. ಮೊದಲು ಅಷ್ಟೊಂದು ಹಣದ ಸಹಕಾರ ನೀಡಲು ಒಪ್ಪದ ಅವರು ನಂತರ ಡಾ. ಸವಿತಾ ಕಾಮತ್​ ಅವರ ಒತ್ತಾಯಕ್ಕೆ ಮಣಿದು, ಆಸ್ಪತ್ರೆಯ ಸಂಪೂರ್ಣ ಚಾವಣಿಯನ್ನು ದುರಸ್ತಿ ಮಾಡಿಸಲು ಒಪ್ಪಿದ್ದು, ಕಳೆದ ಒಂದು ತಿಂಗಳಿಂದ 15 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ.

ಮುಂದಿನ ಕೆಲವೇ ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿದು ಲೋಕಾರ್ಪಣೆಯೂ ಆಗಲಿದೆ. ಆದರೆ ಸರ್ಕಾರದ ಅನುದಾನಕ್ಕಾಗಿ ನಂಬಿ ಕೂರದ ಡಾ. ಸವಿತಾ ಕಾಮತರ ಕಾಳಜಿಗೆ ಇದೀಗ ಭಟ್ಕಳ ಜನರಿಂದ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

ಕಾರವಾರ: ಮಳೆ ಬಂದ್ರೆ ಸಾಕು ಚಾವಣಿ ನೀರು ಸೋರಿ ಆಸ್ಪತ್ರೆಯೆಲ್ಲ ಕೆರೆಯಂತಾಗುತ್ತಿತ್ತು. ರಿಪೇರಿಗಾಗಿ ಸರ್ಕಾರದ ಅನುದಾನಕ್ಕೆ ಎಷ್ಟು ಕಾದು ಕುಂತ್ರೂ ಉಪಯೋಗವಾಗಲಿಲ್ಲ. ಇಲ್ಲಿನ ವೈದ್ಯಾಧಿಕಾರಿ ಅನುದಾನದ ಬಗ್ಗೆ ಯೋಚ್ನೆ ಮಾಡ್ದೇ ಸರ್ಕಾರದ ಸಹಾಯನೂ ಇಲ್ಲದೇ ಆಸ್ಪತ್ರೆ ದುರಸ್ತಿ ಕಾರ್ಯ ಮಾಡಿಸುತ್ತಿದ್ದಾರೆ

ವೈದ್ಯಾಧಿಕಾರಿಯ ಕಾಳಜಿಯಿಂದ ಭಟ್ಕಳ ಆಸ್ಪತ್ರೆಗೆ ಸಿಕ್ತು ಮುಕ್ತಿ

ಹೌದು ಭಟ್ಕಳ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನ ಕಳೆದ ಮೂರ್ನಾಲ್ಕು ವರ್ಷದ ಹಿಂದೆಯೇ ಮೇಲ್ದರ್ಜೆಗೆ ಏರಿಸಲಾಗಿದೆ. ಆದ್ರೆ, ಇಲ್ಲಿ ಮಾತ್ರ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಹಾಳಾಗಿದೆ. ಮುಖ್ಯವಾಗಿ ಆಸ್ಪತ್ರೆಗೆ ಹೊದಿಸಿದ್ದ ಚಾವಣಿಯೇ ಬಿದ್ದುಹೋಗಿ ಆರು ವರ್ಷವೇ ಕಳೆದಿದ್ದು, ಪ್ರತಿಸಲ ಮಳೆಗಾಲ ಬಂದಾಗ್ಲೂ ಆಸ್ಪತ್ರೆಗೆ ಬರುವ ಜನ ಸೋರುವ ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಬಾಣಂತಿಯರು, ವಯೋವೃದ್ಧರು ಆಸ್ಪತ್ರೆ ಒಳಗಡೆ ಓಡಾಡ​ ಬೇಕಂದ್ರೂ ಛತ್ರಿ ಹಿಡಿದೇ ತಿರುಗಾಡಬೇಕಾದ ಅನಿವಾರ್ಯತೆ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು.‌ ಆದ್ರೆ, ಪ್ರತಿ ಮಳೆಗಾಲ ಸಮೀಪಿಸಿದಾಗಲೂ ಚಾವಣಿ ನಿರ್ಮಿಸಲು ಸರ್ಕಾರದ ತಂಡ ಆಗಮಿಸಿ ಸುಮಾರು 45 ಲಕ್ಷದ ವರೆಗೂ ಎಸ್ಟಿಮೇಟ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿತ್ತು. ಅಷ್ಟೆ ಆದ್ರೆ ಯಾವುದೇ ಉಪಯೋಗವಂತೂ ಆಗಿಲ್ಲಾ.

ಹೀಗೆ ಕಳೆದ ಐದಾರು ವರ್ಷದಿಂದ ಸರ್ಕಾರದಿಂದ ಯಾವುದೇ ಕಾರ್ಯ ಆಗದ್ದನ್ನು ಮನಗಂಡ ವೈದ್ಯಾಧಿಕಾರಿ ಸಂಪೂರ್ಣ ಆಸ್ಪತ್ರೆಗೆ ಚಾವಣಿ ನಿರ್ಮಿಸಲು ಯೋಜನೆ ರೂಪಿಸಿ ಹಣವನ್ನು ನೀಡುವ ದಾನಿಗಳ ಹುಡುಕಾಟಕ್ಕೆ ತೊಡಗಿದ್ದಾಗ, ಕೊನೆಗೆ ಇವರಿಗೆ ಸಿಕ್ಕಿದ್ದು, ಇನ್ಫೋಸಿಸ್ ಪೌಂಡೇಷನ್. ತಕ್ಷಣ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿದ್ದಾರೆ. ಮೊದಲು ಅಷ್ಟೊಂದು ಹಣದ ಸಹಕಾರ ನೀಡಲು ಒಪ್ಪದ ಅವರು ನಂತರ ಡಾ. ಸವಿತಾ ಕಾಮತ್​ ಅವರ ಒತ್ತಾಯಕ್ಕೆ ಮಣಿದು, ಆಸ್ಪತ್ರೆಯ ಸಂಪೂರ್ಣ ಚಾವಣಿಯನ್ನು ದುರಸ್ತಿ ಮಾಡಿಸಲು ಒಪ್ಪಿದ್ದು, ಕಳೆದ ಒಂದು ತಿಂಗಳಿಂದ 15 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ.

ಮುಂದಿನ ಕೆಲವೇ ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿದು ಲೋಕಾರ್ಪಣೆಯೂ ಆಗಲಿದೆ. ಆದರೆ ಸರ್ಕಾರದ ಅನುದಾನಕ್ಕಾಗಿ ನಂಬಿ ಕೂರದ ಡಾ. ಸವಿತಾ ಕಾಮತರ ಕಾಳಜಿಗೆ ಇದೀಗ ಭಟ್ಕಳ ಜನರಿಂದ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.

Intro:ಆಡಳಿತ ವೈದ್ಯಾಧಿಕಾರಿಯ ಕಾಳಜಿ...ದಾನಿಗಳಿಂದ ಭಟ್ಕಳ ಆಸ್ಪತ್ರೆಗೆ ಸಿಕ್ತು ಮುಕ್ತಿ
ಕಾರವಾರ: ಪ್ರತಿ ಮಳೆಗಾಲದಲ್ಲಿ ಸೋರಿ ಕೆರೆಯಂತಾಗುತ್ತಿದ್ದ  ಸರ್ಕಾರಿ ಆಸ್ಪತ್ರೆಯೊಂದರ ದುರಸ್ಥಿಗೆ‌ ಪಣತೊಟ್ಟಿದ್ದ ಅಲ್ಲಿನ ವೈದ್ಯ ಆಡಳಿತಾಧಿಕಾರಿಯೊರ್ವರು ಸರ್ಕಾರದ ಅನುದಾನಕ್ಕಾಗಿ ಕಾದು ಸಾಕಾಗಿ ಕೊನೆಗೆ ದಾನಿಗಳನ್ನು ಹುಡುಕಿ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಭಟ್ಕಳ ಪಟ್ಟಣದಲ್ಲಿರುವ ೧೦೦ ಹಾಸಿಗೆಯ ಸರ್ಕಾರಿ ಆಸ್ಪತ್ರೆ ಕಳೆದ ಮೂರ್ನಾಲ್ಕು ವರ್ಷದ ಹಿಂದೆ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳು ಮಾತ್ರ ಇನ್ನು ಸಮರ್ಪಕವಾಗಿಲ್ಲ. ಅದರಲ್ಲಿ ಪ್ರಮುಖವಾಗಿ ಆಸ್ಪತ್ರೆಯ ಹೊದಿಸಿದ್ದ ಮೇಲ್ಚಾವಣಿ ದುರಸ್ಥಿಗೆ ತಲುಪಿ ಸುಮಾರು ಆರು ವರ್ಷಗಳೇ ಕಳೆದಿದೆ. ಪ್ರತಿ ಮಳೆಗಾಲ ಬಂದಾಗ ಸೋರುವ ಮಳೆಯಿಂದ ರಕ್ಷಣೆ ಪಡೆಯಲು ಆಸ್ಪತ್ರೆಗೆ ಬರುವವರು ಹರಸಾಹಸವನ್ನೆ ಪಡಬೇಕಿತ್ತು.  ಬಾಣಂತಿಯರು, ವಯೋವೃದ್ಧರು  ಇಲ್ಲಿ ನಡೆದಾಡಲು ಇನ್ನೊಬ್ಬರನ್ನು ಅವಲಂಭಿಸಬೇಕಾಗಿತ್ತು. ಆಸ್ಪತ್ರೆ ಒಳಗಡೆಯು ಛತ್ರಿ ಹಿಡಿದು ತಿರುಗಾಡಬೇಕಾದ ಅನಿವಾರ್ಯತೆ ಇತ್ತು.
ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿದ  ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು.‌ಆದರೆ ಪ್ರತಿ ಮಳೆಗಾಲ ಸಮೀಪಿಸಿದಾಗಲೂ ಮೇಲ್ಚಾವಣಿ ನಿರ್ಮಿಸಲು ಸರ್ಕಾರದ ತಂಡ ಆಗಮಿಸಿ ಎಸ್ಟಿಮೇಟ್ ನಿರ್ಮಿಸುತ್ತಿತ್ತು. ಸುಮಾರು 45 ಲಕ್ಷದ ವರೆಗೂ ಎಸ್ಟಿಮೇಟ್ ನಿರ್ಮಿಸಿ ಸರ್ಕಾರಕ್ಕೆ ಸಲ್ಲಿಸುತ್ತಿತ್ತು. ಹೀಗೆ ಕಳೆದ ಐದಾರು ವರ್ಷದಿಂದ ಇಂತಹದೇ ಆಟ ನಡೆದಿತ್ತು.
ಆದರೆ ಇದು ಸಾಧ್ಯವಾಗದ್ದನ್ನು ಮನಗಂಡ ಆಡಳಿತ ವೈದ್ಯಾಧಿಕಾರಿ ಸಂಪೂರ್ಣ ಆಸ್ಪತ್ರೆಗೆ ಮೇಲ್ಚಾವಣಿ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಲಕ್ಷಗಟ್ಟಲೆ ಹಣದ ಅವಶ್ಯಕತೆ ಇದ್ದು ಅಷ್ಟು ಹಣವನ್ನು ನೀಡುವ ದಾನಿಗಳ ಹುಡುಕಾಟಕ್ಕೆ ತೊಡಗಿದ್ದಾರೆ. ಕೊನೆಗೆ ಇನ್ಫೋಸಿಸ್ ಪೌಂಡೇಶನ್ ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿದ್ದಾರೆ.  ಮೊದಲು ಅಷ್ಟೊಂದು ಹಣದ ಸಹಕಾರ ನೀಡಲು ಒಪ್ಪದ ಅವರು ನಂತರ ಡಾ. ಸವಿತಾ ಕಾಮತರ ಒತ್ತಾಯಕ್ಕೆ ಮಣಿದಿದ್ದಾರೆ.
ಪ್ರತಿದಿನ ಇಲ್ಲಿ 700ರಿಂದ 800 ಹೋರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಮಳೆ ನೀರಿನಿಂದ ಅವರಿಗೆ ತೊಂದರೆ ತಪ್ಪಿದ್ದಲ್ಲ ಎಂದು ಮನವರಿಸಿದ್ದಾರೆ.  ಕೊನೆಗೂ ಇನ್ಪೋಸಿಸ್ ಸಂಪೂರ್ಣ ಮೆಲ್ಚಾವಣಿಯನ್ನು ಮಾಡಿಸಲು ಒಪ್ಪಿದ್ದು, ಕಳೆದ ಒಂದು ತಿಂಗಳಿಂದ 15 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಮೇಲ್ಚಾವಣಿ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಮುಂದಿನ ಕೆಲವೆ ದಿನಗಳಲ್ಲಿ ಇದರ ಲೋಕಾರ್ಪಣೆಯೂ ಆಗಲಿದೆ. 
ಆದರೆ ಸರ್ಕಾರದ ಅನುದಾನಕ್ಕಾಗಿ ನಂಬಿ ಕೂರದ ಡಾ ಸವಿತಾ ಕಾಮತರ ಕಾಳಜಿಗೆ ಇದೀಗ ಭಟ್ಕಳ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ 8 ವರ್ಷಗಳಲ್ಲಿ ಆಗದ ಕಾರ್ಯ 4 ತಿಂಗಳಲ್ಲಿ ನಡೆದಿದ್ದು ಆಸ್ಪತ್ರೆಯ ಮೇಲಿನ ಅಭಿಮಾನ ಇಮ್ಮಡಿಯಾಗಿದೆ ಎಂದು ಅವರ ಸಹೋದ್ಯೊಗಿಗಳು,  ಸಾಮಾಜಿಕ ಸಂಸ್ಥೆಗಳಾದ ತಂಜೀಂ, ರಬಿತಾ ಸೊಸೈಟಿ, ಭಟ್ಕಳ ಸೇವಾ ವಾಹಿಸಿ ಸೇರಿದಂತೆ ಇತರ ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ.
ಸರ್ಕಾರಿ ಕೆಲಸ ದೇವರ ಕೆಲಸ ಇದನ್ನು ಕೃತಿಯಲ್ಲಿ ತರಬೇಕು ಎನ್ನುವ ಭಾವನೆ ನನ್ನದು. ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಸಾಗಲು ರಸ್ತೆಯ ಅವಶ್ಯಕತೆ ಇದೆ. ಸುಮಾರು 5 ಲಕ್ಷದ ವರೆಗೂ ಖರ್ಚು ತಗಲುವ ನಿರೀಕ್ಷೆ ಇದೆ. ರಬಿತಾ ಸೊಸೈಟಿಯ ಅನಿವಾಸಿ ಭಾರತೀಯ ವೈದ್ಯರಿಗೆ ಸಹಾಯ ಯಾಚಿಸಿ ಮನವಿ ಮಾಡಿದ್ದೇನೆ. ಸದ್ಯ ಭಟ್ಕಳ ಪುರಸಭೆಗೆ ಭಟ್ಕಳ ಉಪವಿಭಾಗಾಧಿಕಾರಿಯೆ ಆಡಳಿತಾಧಿಕಾರಿಯಾಗಿರುವದರಿಂದ ಅವರ ಸಹಾಯ ಪಡೆಯಲು ಯೋಚಿಸಲಾಗಿದೆ. ಜೀವ ಅಮೂಲ್ಯವಾಗಿದ್ದು ಅಪಘಾತ, ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇನ್ನು ಹಲವು ಯೋಜನೆಗಳಿದ್ದು ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುವದು ಡಾ. ಸವಿತಾ ಕಾಮತ ತಿಳಿಸಿದ್ದಾರೆ.
ನಂತರ  ಡಾ. ಲಕ್ಷ್ಮೀಶ ನಾಯ್ಕ. ವೈದ್ಯರು, ಮಾತನಾಡಿದ ಡಾ. ಸವಿತಾ ಕಾಮತ ಆಡಳಿತ ವೈದ್ಯಾಧಿಕಾರಿಯಾಗಿ  ಅಧಿಕಾರ ಸ್ವೀಕರಿಸಿದ ಬಳಿಕ ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ ತೆರೆದಿದೆ. ಕಳೆದ 4 ತಿಂಗಳಲ್ಲಿ ಸುಮಾರು 65ಕ್ಕೂ ಅಧಿಕ ರೋಗಿಗಳು ದಾಖಲಾಗಿದ್ದು 60 ಜನರ ಜೀವ ಉಳಿದಿದೆ. ಡಯಾಲೀಸಸ್ ಘಟಕವೂ ಹಿಂದಿಗಿಂತಲೂ ಅಕ್ಟೀವ ಆಗಿದೆ. ಮೆಡಿಸನ್, ಸಿಬ್ಬಂದಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡು ನಮಗೆ ಕೆಲಸ ಮಾಡಿಸಲು ಪ್ರೇರಪಣೆ ನೀಡುತ್ತಾರೆ ಎಂದರು.
ಒಟ್ಟಿನಲ್ಲಿ ಸರ್ಕಾರವೇ ಮಾಡಬೇಕು ಎಂದು ನಂಬಿಕುಳ್ಳದೆ ಸಮಸ್ಯೆಯ ಗಂಭೀರತೆಯನ್ನು ದಾನಿಗಳಿಗೆ ಮನವರಿಕೆ ಮಾಡಿ ಲಕ್ಷಾಂತರ ವೆಚ್ಚದಲ್ಲಿ ಮೆಲ್ಚಾವಣಿ ಹೊದಿಸಿರುವುದು ನಿಜಕ್ಕೂ ಮೆಚ್ಚುವಂತಹ ಕೆಲಸ. Body:KConclusion:K

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.