ETV Bharat / state

ಬೆಳ್ತಂಗಡಿಯಲ್ಲಿ ದನಕಳ್ಳರೆಂದು ಇಬ್ಬರ ಮೇಲೆ ಹಲ್ಲೆ: 5 ಮಂದಿ ಬಂಧನ

ಬೆಳ್ತಂಗಡಿ ತಾಲೂಕಲ್ಲಿ ದನದ ಕಳ್ಳರೆಂದು ಆರೋಪಿಸಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ. ಕುಪ್ಪೆಟ್ಟಿಯ ಅಬ್ದುಲ್ ರಹೀಮ್ ಹಾಗೂ ಮಹಮ್ಮದ್ ಮುಸ್ತಾಫ ಹಲ್ಲೆಗೊಳಗಾದವರು.

author img

By

Published : Apr 1, 2021, 10:56 PM IST

beaten
ಹಲ್ಲೆ

ಬೆಳ್ತಂಗಡಿ: ದನದ ಕಳ್ಳರೆಂದು ಭಾವಿಸಿ ಇಬ್ಬರಿಗೆ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೆಲಂತಬೆಟ್ಟು ಸಮೀಪ ನಡೆದಿದೆ.

ಕುಪ್ಪೆಟ್ಟಿಯ ಅಬ್ದುಲ್ ರಹೀಮ್ ಹಾಗೂ ಮಹಮ್ಮದ್ ಮುಸ್ತಾಫ ಹಲ್ಲೆಗೊಳಗಾದವರು. ಈ ಇಬ್ಬರು ಪಿಕಪ್ ವಾಹನ ರಿಪೇರಿಗಾಗಿ ಬೆಳ್ತಂಗಡಿಗೆ ಬಂದಿದ್ದರು, ಹಾಗೆಯೇ ತಮ್ಮ ಸಂಬಂಧಿಕರ ಮನೆಗೆ ಹೋಗಿ ಹಿಂದಿರುಗುವ ವೇಳೆ ಮೇಲಂತಬೆಟ್ಟು ಪಂಚಾಯತ್ ಸಮೀಪ ಬೈಕ್ ಹಾಗೂ ಕಾರಿನಲ್ಲಿ ಬಂದ ತಂಡ ದನ ಕಳ್ಳತನದ ಆರೋಪ ಹೊರಿಸಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಗಳು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ: ದನದ ಕಳ್ಳರೆಂದು ಭಾವಿಸಿ ಇಬ್ಬರಿಗೆ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೆಲಂತಬೆಟ್ಟು ಸಮೀಪ ನಡೆದಿದೆ.

ಕುಪ್ಪೆಟ್ಟಿಯ ಅಬ್ದುಲ್ ರಹೀಮ್ ಹಾಗೂ ಮಹಮ್ಮದ್ ಮುಸ್ತಾಫ ಹಲ್ಲೆಗೊಳಗಾದವರು. ಈ ಇಬ್ಬರು ಪಿಕಪ್ ವಾಹನ ರಿಪೇರಿಗಾಗಿ ಬೆಳ್ತಂಗಡಿಗೆ ಬಂದಿದ್ದರು, ಹಾಗೆಯೇ ತಮ್ಮ ಸಂಬಂಧಿಕರ ಮನೆಗೆ ಹೋಗಿ ಹಿಂದಿರುಗುವ ವೇಳೆ ಮೇಲಂತಬೆಟ್ಟು ಪಂಚಾಯತ್ ಸಮೀಪ ಬೈಕ್ ಹಾಗೂ ಕಾರಿನಲ್ಲಿ ಬಂದ ತಂಡ ದನ ಕಳ್ಳತನದ ಆರೋಪ ಹೊರಿಸಿ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಗಳು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.