ETV Bharat / state

68 ಆ್ಯಪಲ್ ಐಪೋನ್ ಕಳ್ಳತನ ಪ್ರಕರಣ: ಆರೋಪಿ ಬಂಧನ, 41 ಲಕ್ಷ ರೂ ಮೌಲ್ಯದ ಮೊಬೈಲ್​ ಫೋನ್​ಗಳು ವಶ

author img

By

Published : Aug 14, 2021, 4:29 PM IST

ಮಂಗಳೂರಿನ ಮೊಬೈಲ್​​ ಶೋರೂಂನಲ್ಲಿ 68 ಆ್ಯಪಲ್ ಫೋನ್​ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 41ಲಕ್ಷ ರೂ ಮೌಲ್ಯದ ಐಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ.

apple phones thief arrested in mangalore
68 ಆ್ಯಪಲ್ ಫೋನ್ಸ್​​ ಕಳ್ಳತನ ಪ್ರಕರಣದ ಆರೋಪಿ ಬಂಧನ

ಮಂಗಳೂರು; ಮಂಗಳೂರಿನ ಮೊಬೈಲ್​​ ಶೋರೂಂನಲ್ಲಿ 68 ಆ್ಯಪಲ್ ಫೋನ್​ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 41ಲಕ್ಷ ರೂ ಮೌಲ್ಯದ 40 ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳ್ಳತನ ಪ್ರಕರಣದ ಕುರಿತು ಸುದ್ದಿಗೋಷ್ಟಿ

ಲಾಕ್​ಡೌನ್ ಸಂದರ್ಭ ಅಂಗಡಿ ಬಂದ್​ ಮಾಡಿದ್ದ ವೇಳೆ 'ಮ್ಯಾಪಲ್' ಶೋರೂಂನಲ್ಲಿ‌ ಮೊಬೈಲ್​ ಫೋನ್​ಗಳ ಕಳ್ಳತನವಾಗಿತ್ತು. ಶೋರೂಂನ ಹಿಂಬದಿಯಲ್ಲಿ ಇರುವ ಮೂರು ಸರಳುಗಳನ್ನು ಕತ್ತರಿಸಿ 68 ಮೊಬೈಲ್ ಫೋನ್​ಗಳು ಮತ್ತು 1.15 ಲಕ್ಷ ರೂ. ನಗದನ್ನು ಕಳ್ಳತನ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದವನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆ ವ್ಯಾಪ್ತಿಯ ನಿವಾಸಿ ವಿನೋದ್ ಸಿಂಗ್ ಯಾನೆ ವಿಜಯ್ ಶೆಟ್ಟಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿಯಿಂದ 41 ಆ್ಯಪಲ್ ಫೋನ್ಸ್​ ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ.

ಕಳವು ಮಾಡಿದ ಅಂಗಡಿಗೆ 3 ದಿನದ ಮೊದಲು ಬಂದಿದ್ದ ಕಳ್ಳರು!

ಮ್ಯಾಪೆಲ್ ಶೋರೂಂನಲ್ಲಿ ಕಳವು ಮಾಡುವ ಮೂರು ದಿನಕ್ಕೆ ಮುಂಚೆ ಆರೋಪಿಗಳಿಬ್ಬರು ಈ ಶೋರೂಂಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಮುಂಬೈನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಇವರು, ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಲು ಸರ್ವೆ ಮಾಡಿದ್ದರು. 6 ಮೊಬೈಲ್ ಅಂಗಡಿಗಳನ್ನು ಗುರುತಿಸಿ, ಮ್ಯಾಪೆಲ್ ಶೂರೂಂನಲ್ಲಿ ಕಳವು ಮಾಡಲು ನಿರ್ಧರಿಸಿದ್ದರು.

ಮ್ಯಾಪೆಲ್ ಶೋರೂಂಗೆ ಗ್ರಾಹಕರಂತೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದರು. ವಾಷ್​​​​ ರೂಂ ಒಳಗೂ ಹೋಗಿ ಪರಿಶೀಲನೆ ನಡೆಸಿದ್ದರು. ಕೊನೆಗೆ ಮ್ಯಾಪೆಲ್ ಶೋರೂಂ ನಲ್ಲಿ ಕಳ್ಳತನ ಮಾಡಲು ಫಿಕ್ಸ್​ ಆಗಿದ್ದರು. ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ:ಅಂಚೆ ಕಚೇರಿ ಮೇಲೆ ಧ್ವಜ ಇರಿಸುವ ವೇಳೆ ಮುರಿದು ಬಿದ್ದ ಕ್ರೇನ್​​: ಮೂವರ ದುರ್ಮರಣ

ಮಂಗಳೂರು; ಮಂಗಳೂರಿನ ಮೊಬೈಲ್​​ ಶೋರೂಂನಲ್ಲಿ 68 ಆ್ಯಪಲ್ ಫೋನ್​ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 41ಲಕ್ಷ ರೂ ಮೌಲ್ಯದ 40 ಮೊಬೈಲ್​​ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳ್ಳತನ ಪ್ರಕರಣದ ಕುರಿತು ಸುದ್ದಿಗೋಷ್ಟಿ

ಲಾಕ್​ಡೌನ್ ಸಂದರ್ಭ ಅಂಗಡಿ ಬಂದ್​ ಮಾಡಿದ್ದ ವೇಳೆ 'ಮ್ಯಾಪಲ್' ಶೋರೂಂನಲ್ಲಿ‌ ಮೊಬೈಲ್​ ಫೋನ್​ಗಳ ಕಳ್ಳತನವಾಗಿತ್ತು. ಶೋರೂಂನ ಹಿಂಬದಿಯಲ್ಲಿ ಇರುವ ಮೂರು ಸರಳುಗಳನ್ನು ಕತ್ತರಿಸಿ 68 ಮೊಬೈಲ್ ಫೋನ್​ಗಳು ಮತ್ತು 1.15 ಲಕ್ಷ ರೂ. ನಗದನ್ನು ಕಳ್ಳತನ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದವನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆ ವ್ಯಾಪ್ತಿಯ ನಿವಾಸಿ ವಿನೋದ್ ಸಿಂಗ್ ಯಾನೆ ವಿಜಯ್ ಶೆಟ್ಟಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿಯಿಂದ 41 ಆ್ಯಪಲ್ ಫೋನ್ಸ್​ ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ.

ಕಳವು ಮಾಡಿದ ಅಂಗಡಿಗೆ 3 ದಿನದ ಮೊದಲು ಬಂದಿದ್ದ ಕಳ್ಳರು!

ಮ್ಯಾಪೆಲ್ ಶೋರೂಂನಲ್ಲಿ ಕಳವು ಮಾಡುವ ಮೂರು ದಿನಕ್ಕೆ ಮುಂಚೆ ಆರೋಪಿಗಳಿಬ್ಬರು ಈ ಶೋರೂಂಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಮುಂಬೈನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದ ಇವರು, ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಲು ಸರ್ವೆ ಮಾಡಿದ್ದರು. 6 ಮೊಬೈಲ್ ಅಂಗಡಿಗಳನ್ನು ಗುರುತಿಸಿ, ಮ್ಯಾಪೆಲ್ ಶೂರೂಂನಲ್ಲಿ ಕಳವು ಮಾಡಲು ನಿರ್ಧರಿಸಿದ್ದರು.

ಮ್ಯಾಪೆಲ್ ಶೋರೂಂಗೆ ಗ್ರಾಹಕರಂತೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದ್ದರು. ವಾಷ್​​​​ ರೂಂ ಒಳಗೂ ಹೋಗಿ ಪರಿಶೀಲನೆ ನಡೆಸಿದ್ದರು. ಕೊನೆಗೆ ಮ್ಯಾಪೆಲ್ ಶೋರೂಂ ನಲ್ಲಿ ಕಳ್ಳತನ ಮಾಡಲು ಫಿಕ್ಸ್​ ಆಗಿದ್ದರು. ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ:ಅಂಚೆ ಕಚೇರಿ ಮೇಲೆ ಧ್ವಜ ಇರಿಸುವ ವೇಳೆ ಮುರಿದು ಬಿದ್ದ ಕ್ರೇನ್​​: ಮೂವರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.