ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ಜರುಗಿತು. ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎದುರು ಸದಸ್ಯರುಗಳು ಸಮಸ್ಯೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಈ ಸಭೆಗೆ ಬೆರಳಣಿಕೆಯಷ್ಟು ಸದಸ್ಯರುಗಳು ಮಾತ್ರವೇ ಆಗಮಿಸಿದ್ದರೂ ಸಹ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಿತ್ತು. ಕೃಷಿ, ತೋಟಾಗಾರಿಕೆ, ರೇಷ್ಮೆ, ಪಶುಸಂಗೊಪನೆ ಸೇರಿ ಇನ್ನಿತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇರುವ ಸಂಕಷ್ಟಗಳನ್ನು ಜಿಲ್ಲಾ ಪಂಚಾಯತ್ ಸಿಇಒ ಸತ್ಯಭಾಮ ಅವರಿಗೆ ಸದಸ್ಯರು ತಿಳಿಸಿದರು.
ಈ ಸಮಸ್ಯೆಗಳಿಗೆ ಶಿಘ್ರವೇ ಪರಿಹಾರ ನೀಡುವುದಾಗಿ ಜಿಪಂ ಸಿಇಒ ಭರವಸೆ ನೀಡಿದರು. ಇದೇ ವೇಳೆ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.