ETV Bharat / state

ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಮಾಜಿ ಸಚಿವ ಡಿ.ಸುಧಾಕರ್

author img

By

Published : Apr 5, 2021, 2:18 PM IST

ಸಿಡಿ ಪ್ರಕರಣದಲ್ಲಿ ನನಗೆ ಎಸ್ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ಮಾಧ್ಯಮಕ್ಕೆ ತಿಳಿಸಿದರು.

chitradurga
ಮಾಜಿ ಸಚಿವ ಡಿ. ಸುಧಾಕರ್

ಚಿತ್ರದುರ್ಗ: ಸಿಡಿ ಲೇಡಿ ಪ್ರಕರಣ ಸಂಬಂಧಿಸಿದಂತೆ ಇಂದು ಎಸ್ಐ​ಟಿ ತಂಡ ನಡೆಸುವ ವಿಚಾರಣೆಗೆ ಮಾಜಿ ಸಚಿವ ಡಿ.ಸುಧಾಕರ್ ಆಗಮಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆಗಳು ಕಂಡುಬರಲಿಲ್ಲ.

ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ಡಿ.ಸುಧಾಕರ್, "ಸಿಡಿ ಬಹಿರಂಗ ಪ್ರಕರಣ ಸಂಬಂಧ ನನಗೆ ಎಸ್ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ತಪ್ಪಿಲ್ಲದ ಮೇಲೆ ನನಗೆ ಯಾಕೆ ನೋಟಿಸ್ ಕೊಡುತ್ತಾರೆ" ಎಂದರು.

ಮಾಜಿ ಸಚಿವ ಡಿ. ಸುಧಾಕರ್

"ಒಂದು ವೇಳೆ ನೋಟೀಸ್ ಬಂದರೆ ಖಂಡಿತಾ ಉತ್ತರ ಕೊಡುತ್ತೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನನ್ನು ನಾನು ಗೌರವಿಸುತ್ತೇನೆ. ನೋಟೀಸ್ ಬಂದರೆ ನಾನೇ ಮಾಧ್ಯಮಗಳಿಗೆ ಮಾಹಿತಿ ಕೊಡುತ್ತೇನೆ. ಆದರೆ ಇವೆಲ್ಲ ಷಡ್ಯಂತ್ರದ ಬಗ್ಗೆ ನನಗೇನು ಗೊತ್ತಿಲ್ಲ" ಎಂದರು

ಚಿತ್ರದುರ್ಗ: ಸಿಡಿ ಲೇಡಿ ಪ್ರಕರಣ ಸಂಬಂಧಿಸಿದಂತೆ ಇಂದು ಎಸ್ಐ​ಟಿ ತಂಡ ನಡೆಸುವ ವಿಚಾರಣೆಗೆ ಮಾಜಿ ಸಚಿವ ಡಿ.ಸುಧಾಕರ್ ಆಗಮಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆಗಳು ಕಂಡುಬರಲಿಲ್ಲ.

ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ಡಿ.ಸುಧಾಕರ್, "ಸಿಡಿ ಬಹಿರಂಗ ಪ್ರಕರಣ ಸಂಬಂಧ ನನಗೆ ಎಸ್ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ತಪ್ಪಿಲ್ಲದ ಮೇಲೆ ನನಗೆ ಯಾಕೆ ನೋಟಿಸ್ ಕೊಡುತ್ತಾರೆ" ಎಂದರು.

ಮಾಜಿ ಸಚಿವ ಡಿ. ಸುಧಾಕರ್

"ಒಂದು ವೇಳೆ ನೋಟೀಸ್ ಬಂದರೆ ಖಂಡಿತಾ ಉತ್ತರ ಕೊಡುತ್ತೇನೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನನ್ನು ನಾನು ಗೌರವಿಸುತ್ತೇನೆ. ನೋಟೀಸ್ ಬಂದರೆ ನಾನೇ ಮಾಧ್ಯಮಗಳಿಗೆ ಮಾಹಿತಿ ಕೊಡುತ್ತೇನೆ. ಆದರೆ ಇವೆಲ್ಲ ಷಡ್ಯಂತ್ರದ ಬಗ್ಗೆ ನನಗೇನು ಗೊತ್ತಿಲ್ಲ" ಎಂದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.