ಚಿತ್ರದುರ್ಗ: ಲಾಕ್ಡೌನ್ ವೇಳೆ ಉಳ್ಳವರು ಇಲ್ಲದವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಿದ್ದು, ಸದ್ಯ ಮಾಜಿ ಸಚಿವ ಡಿ. ಸುಧಾಕರ್ ಅವರ ಬೆಂಬಲಿಗರು ಬಡ ಕಾರ್ಮಿಕರಿಗೆ ಕೊಳೆತ ತರಕಾರಿ ಕಿಟ್ ವಿತರಿಸಿರುವ ಆರೋಪ ಕೇಳಿಬಂದಿದೆ.
ಮಾಜಿ ಸಚಿವರ ಭಾವಚಿತ್ರ ಹಾಗೂ ಹೆಸರು ಇರುವ ತರಕಾರಿ ಕಿಟ್ ಇದಾಗಿದ್ದು, ಡಿ.ಸುಧಾಕರ್ ಬೆಂಬಲಿಗರಿಂದ ಕೊಳೆತ ತರಕಾರಿ ವಿತರಿಸಿರುವ ಆರೋಪ ಕೇಳಿ ಬಂದಿದೆ. ಕೊಳೆತ ತರಕಾರಿಯಾದ ಟೊಮೆಟೊ, ಮೂಲಂಗಿ, ಕ್ಯಾರೆಟ್, ನುಗ್ಗೆಕಾಯಿ ತರಕಾರಿ ವಿತರಣೆ ಮಾಡಲಾಗಿತ್ತು. ಆದ್ರೆ ಅದನ್ನು ತೆಗೆದುಕೊಂಡ ಗ್ರಾಮಸ್ಥರು ಬೀದಿಗೆ ಎಸೆದಿದ್ದಾರೆ. ಹಿರಿಯೂರು ತಾಲೂಕಿನ ಹರಿಯಬ್ಬೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ತರಕಾರಿ ಬೀದಿಗೆ ಎಸೆದಿರುವ ಫೋಟೋ, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.