ಚಿಕ್ಕಮಗಳೂರು : ಲಾಕ್ಡೌನ್ ನಡುವೆ ಹಣ್ಣು ತೆಗೆದುಕೊಂಡು ಹೋಗಲು ಬಂದಿದ್ದ ಮಹಿಳೆಗೆ ಗ್ರಾಮ ಲೆಕ್ಕಾಧಿಕಾರಿ ಪೈಪ್ನಿಂದ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದಲ್ಲಿ ನಡೆದಿದೆ.
ತರಕಾರಿ, ಹಣ್ಣು ತರಲು ಹೊರಟ ಕೂಲಿ ಕಾರ್ಮಿಕರಿಗೂ ಲಾಠಿ ರುಚಿ ತೋರಿಸಿದ್ದು, ತಹಶೀಲ್ದಾರ್ ಎದುರೇ ಪೈಪ್ನಿಂದ ಕಂದಾಯ ಅಧಿಕಾರಿಗಳು ಹೊಡೆದಿದ್ದಾರೆ. ಬೈಕ್ನಲ್ಲಿ ಬಂದ ಅಧಿಕಾರಿಗಳು ಮಹಿಳೆಗೆ ಪೈಪ್ನಿಂದ ಹೊಡೆದು ಹೋಗಿದ್ದಾರೆ.
ಕಂದಾಯ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಮಾರ್ಕೆಟ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.