ETV Bharat / state

ಶೃಂಗೇರಿ ಶಾರದೆ ಸನ್ನಿಧಿಯಲ್ಲಿ ತುಂಗಾ ಪುಷ್ಕರ ಮಹೋತ್ಸವಕ್ಕೆ ಚಾಲನೆ..

ತುಂಗಾ ನದಿಯ ತಟದಲ್ಲಿ‌ ಈ ಮಹೋತ್ಸವ ನಡೆಯುತ್ತಿದ್ದು, ತುಂಗಾ ನದಿಗೆ ನಾಲ್ಕು ಮಂದಿ ಪುರೋಹಿತರು ತುಂಗಾ ಆರತಿ ಮಾಡುವುದರ ಮೂಲಕ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.

author img

By

Published : Nov 21, 2020, 9:16 PM IST

Tunga Pushkara Jubilee Celebration sringeri temple
ಶೃಂಗೇರಿ ಶಾರದೆ ಸನ್ನಿಧಿ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಶಾರದಾ ಪೀಠದಲ್ಲಿರುವ ತುಂಗಾ ನದಿ ತೀರದಲ್ಲಿ, ತುಂಗಾ ಪುಷ್ಕರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಶೃಂಗೇರಿ ಶಾರದೆ ಸನ್ನಿಧಿ

ತುಂಗಾ ನದಿಯ ತಟದಲ್ಲಿ‌ ಈ ಮಹೋತ್ಸವ ನಡೆಯುತ್ತಿದ್ದು, ತುಂಗಾ ನದಿಗೆ ನಾಲ್ಕು ಮಂದಿ ಪುರೋಹಿತರು ತುಂಗಾ ಆರತಿ ಮಾಡುವುದರ ಮೂಲಕ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್ 1ರ ತನಕ ನಡೆಯಲಿದ್ದು, ಲೋಕ ಕಲ್ಯಾಣಾರ್ಥಕವಾಗಿ ತುಂಗಾ ಪುಷ್ಕರ ಮಹೋತ್ಸವ ನಡೆಸಲಾಗುತ್ತಿದೆ.

ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಬೆಳಗ್ಗೆ-ಸಂಜೆ ಈ ಮಹೋತ್ಸವ ನಡೆಯುತ್ತಿದ್ದು, ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ, ಹಾಗೂ ವಿಧುಶೇಖರ ಶ್ರೀಗಳ ಆದೇಶದಂತೆ ಮಹೋತ್ಸವ ಪ್ರಾರಂಭವಾಗಿದೆ. 11 ದಿನಗಳ ಕಾಲ ತುಂಗಾ‌ ನದಿಯಲ್ಲಿ ದೇವರುಗಳ ತೆಪ್ಪೋತ್ಸವ ಕೂಡ ನಡೆಯಲಿದ್ದು, ದಕ್ಷಿಣಾಮಾಯ ಶೃಂಗೇರಿ ಶಾರದಾ ಪೀಠದಲ್ಲಿ ತುಂಗಾ ಪುಷ್ಕರ ವಿಶೇಷವಾಗಿ ಪ್ರಾರಂಭವಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಶಾರದಾ ಪೀಠದಲ್ಲಿರುವ ತುಂಗಾ ನದಿ ತೀರದಲ್ಲಿ, ತುಂಗಾ ಪುಷ್ಕರ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.

ಶೃಂಗೇರಿ ಶಾರದೆ ಸನ್ನಿಧಿ

ತುಂಗಾ ನದಿಯ ತಟದಲ್ಲಿ‌ ಈ ಮಹೋತ್ಸವ ನಡೆಯುತ್ತಿದ್ದು, ತುಂಗಾ ನದಿಗೆ ನಾಲ್ಕು ಮಂದಿ ಪುರೋಹಿತರು ತುಂಗಾ ಆರತಿ ಮಾಡುವುದರ ಮೂಲಕ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್ 1ರ ತನಕ ನಡೆಯಲಿದ್ದು, ಲೋಕ ಕಲ್ಯಾಣಾರ್ಥಕವಾಗಿ ತುಂಗಾ ಪುಷ್ಕರ ಮಹೋತ್ಸವ ನಡೆಸಲಾಗುತ್ತಿದೆ.

ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಬೆಳಗ್ಗೆ-ಸಂಜೆ ಈ ಮಹೋತ್ಸವ ನಡೆಯುತ್ತಿದ್ದು, ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ, ಹಾಗೂ ವಿಧುಶೇಖರ ಶ್ರೀಗಳ ಆದೇಶದಂತೆ ಮಹೋತ್ಸವ ಪ್ರಾರಂಭವಾಗಿದೆ. 11 ದಿನಗಳ ಕಾಲ ತುಂಗಾ‌ ನದಿಯಲ್ಲಿ ದೇವರುಗಳ ತೆಪ್ಪೋತ್ಸವ ಕೂಡ ನಡೆಯಲಿದ್ದು, ದಕ್ಷಿಣಾಮಾಯ ಶೃಂಗೇರಿ ಶಾರದಾ ಪೀಠದಲ್ಲಿ ತುಂಗಾ ಪುಷ್ಕರ ವಿಶೇಷವಾಗಿ ಪ್ರಾರಂಭವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.