ಚಿಕ್ಕಮಗಳೂರು : ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನ ಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಶೃಂಗೇರಿ ತಾಲೂಕಿನ ಮಕ್ಕಿಮನೆ ಗ್ರಾಮದ ಸುಧಾಕರ್ ಎಂಬುವರ ಕುಟುಂಬದ ಮೂವರು ಸದಸ್ಯರಾದ ವೀಣಾ (49), ಶಾರದಮ್ಮ (70) ಮತ್ತು ಶ್ರಾವ್ಯ (15) ಎಂದು ಗುರುತಿಸಲಾಗಿದೆ. ವೀಣಾ ಅವರು ಹೊನ್ನವಳ್ಳಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮಗಳು ಶ್ರಾವ್ಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಇದನ್ನೂ ಓದಿ: ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು ಡಿವೈಡರ್ಗೆ ಡಿಕ್ಕಿ
ಇಂದು ಬೆಳಗ್ಗೆ 10.30ಕ್ಕೆ ಅಂಗನವಾಡಿ ಆಯಾ ಪೂರ್ಣಿಮಾ ಅವರು ವೀಣಾ ಅವರಿಗೆ ಕರೆ ಮಾಡಿದ್ದು, ಫೋನ್ಗೆ ಸಿಕ್ಕಿರಲಿಲ್ಲ. ನಂತರ ಸ್ಥಳೀಯರು ಅನುಮಾನಗೊಂಡು ಮನೆಯ ಹಂಚು ತೆಗೆದಾಗ ವಿಷಯ ಬೆಳಕಿಗೆ ಬಂದಿದೆ.
ಘಟನೆಗೆ ನಿಖರ ಕಾರಣ ಏನೆಂದು ಈವರೆಗೆ ತಿಳಿದು ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಪೊಲೀಸರು ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.