ಚಿಕ್ಕಮಗಳೂರು: 'ಆಕ್ಸಿಜನ್ ಆನ್ ವೀಲ್' ಯೋಜನೆ ಮೂಲಕ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಮ್ಲಜನಕ ನೀಡುವ ವ್ಯವಸ್ಥೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಕೈ ಹಾಕಿದೆ.
ಬೆಂಗಳೂರನ್ನ ಹೊರತುಪಡಿಸಿದರೆ ಈ ಯೋಜನೆಯನ್ನ ಜಾರಿಗೆ ತಂದ ಮೊದಲ ಜಿಲ್ಲೆ ಚಿಕ್ಕಮಗಳೂರು. ಈಗಾಗಲೇ ಸಾರಿಗೆ ಇಲಾಖೆ ಜೊತೆ ಮಾತನಾಡಿರೋ ಜಿಲ್ಲಾಡಳಿತ 'ಆಕ್ಸಿಜನ್ ಆನ್ ವೀಲ್' ಅಭಿಯಾನದಲ್ಲಿ ಬಸ್ಗಳನ್ನು ಸಿದ್ಧ ಮಾಡಿದೆ. ಬಸ್ನಲ್ಲಿ 6 ರಿಂದ 8 ಜನ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ನೀಡಬಹುದಾಗಿದೆ. ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದು, ನಾಳೆ ಲೋಕಾರ್ಪಣೆಗೊಳ್ಳಲಿದೆ.
ಇದನ್ನು ಓದಿ-'ಆಕ್ಸಿಜನ್ ಆನ್ ವೀಲ್': ಚಿಕ್ಕಮಗಳೂರಿನ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜಾದ ಬಸ್
ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೂಡಲೇ ಆಕ್ಸಿಜನ್ ಬೆಡ್ ನೀಡಲು ಸಾಧ್ಯವಾಗದಿರಬಹುದು. ಆದ ಕಾರಣ, ಅವರಿಗೆ ಆಸ್ಪತ್ರೆ ಮುಂಭಾಗ ಬಸ್ನಲ್ಲಿ ಕೂರಿಸಿ ಆಕ್ಸಿಜನ್ ನೀಡಲಾಗುತ್ತದೆ. ತದನಂತರ ವೈದ್ಯರ ಪರೀಕ್ಷೆ ನಡೆಸಿ ಅವರ ಸ್ಥಿತಿಗತಿ ಆಧಾರದ ಮೇಲೆ ಮುಂದಿನ ಚಿಕಿತ್ಸೆ ನೀಡಬಹುದಾಗಿದೆ.