ಚಿಕ್ಕಮಗಳೂರು : ನಾಗರಿಕ ಹಿತರಕ್ಷಣಾ ವೇದಿಕೆಯಡಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮುಂದೆ 2016 ರಲ್ಲಿ ಶರಣಾಗಿದ್ದ ಮಾಜಿ ನಕ್ಸಲ್ ನಿಲುಗುಣಿ ಪದ್ಮನಾಭ್ಗೆ ಶೃಂಗೇರಿಯ ಜೆಎಂಎಫ್ಸಿ ನ್ಯಾಯಾಲಯ ಆರು ತಿಂಗಳ ಜೈಲು ಜೊತೆ 2 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆ ಈ ಆದೇಶ ನೀಡಲಾಗಿದೆ. ನಕ್ಸಲ್ ಆಗಿದ್ದ ವೇಳೆ ನಿಲುಗುಣಿ ಪದ್ಮನಾಭ್ ವಿರುದ್ದ ಹಲವು ಪ್ರಕರಣ ದಾಖಲಾಗಿದ್ದವು. ಆದರೆ ಪೊಲೀಸ್ ಇಲಾಖೆಗೆ ಶರಣಾದ ಮೇಲೆ ನಿಲುಗುಣಿ ನಿರಂತರವಾಗಿ ಕೋರ್ಟ್ಗೆ ಗೈರಾಗಿದ್ದಾರೆ. ಈ ಹಿಂದೆ ನಿಲುಗುಣಿ ಪದ್ಮನಾಭ್, ಗೌರಿ ಲಂಕೇಶ್, ದೊರೆಸ್ವಾಮಿ, ನೇತೃತ್ವದಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.