ETV Bharat / state

ಕಾಫಿನಾಡಿನ ಹುಡುಗರ ಜೊತೆ ಕ್ರಿಕೆಟ್​ ಆಡಿದ ಸಂಸದ ತೇಜಸ್ವಿ ಸೂರ್ಯ - MP tejasvi surya played cricket in chikkamagaluru

ಸಂಸದ ತೇಜಸ್ವಿ ಸೂರ್ಯ ಅವರು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಗದ್ದೆಯ ಕಣದಲ್ಲಿ ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಕ್ರಿಕೆಟ್​ ಆಡಿದ ಸಂಸದ ತೇಜಸ್ವಿ ಸೂರ್ಯ,  MP tejasvi surya played cricket with boys in chikkamagaluru
ಕ್ರಿಕೆಟ್​ ಆಡಿದ ಸಂಸದ ತೇಜಸ್ವಿ ಸೂರ್ಯ
author img

By

Published : Dec 19, 2019, 6:01 AM IST

ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಾಳೆಹೊನ್ನೂರಿನ ಗದ್ದೆಯ ಕಣದಲ್ಲಿ ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮದ ಮಾಲತೇಶ್ ಎಂಬುವರು ಕೆಲ ದಿನಗಳ ಹಿಂದೆ ತಮ್ಮ ನೂತನ ಮನೆ ಗೃಹ ಪ್ರವೇಶ ಮಾಡಿದ್ದರು. ಆ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಕೆಲಸ ಹಾಗೂ ರಾಜಕೀಯ ಒತ್ತಡದಿಂದ ತೇಜಸ್ವಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು.

ಕ್ರಿಕೆಟ್​ ಆಡಿದ ಸಂಸದ ತೇಜಸ್ವಿ ಸೂರ್ಯ

ಬುಧವಾರ ತಮ್ಮ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಆಗಮಿಸುತ್ತಿರುವ ವೇಳೆ ಬಾಳೆಹೊನ್ನೂರಿನ ಬಳಿ ಭತ್ತದ ಕಣದಲ್ಲಿ ಸ್ಥಳೀಯ ಹುಡುಗರು ಕ್ರಿಕೆಟ್ ಆಡುತ್ತಿದ್ದುದ್ದನ್ನು ಕಂಡ ಸಂಸದರು, ತಾವೂ ಕೂಡ ಅವರೊಟ್ಟಿಗೆ ಕೆಲಕಾಲ ಆಟವಾಡಿದ್ದಾರೆ. ಬಳಿಕ ಸ್ಥಳೀಯ ಹುಡುಗರ ಜೊತೆ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲ ಕಾಫಿ ತೋಟ, ಪ್ರಕೃತಿ ಸೌಂದರ್ಯ ಸವಿದರು.

ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಾಳೆಹೊನ್ನೂರಿನ ಗದ್ದೆಯ ಕಣದಲ್ಲಿ ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮದ ಮಾಲತೇಶ್ ಎಂಬುವರು ಕೆಲ ದಿನಗಳ ಹಿಂದೆ ತಮ್ಮ ನೂತನ ಮನೆ ಗೃಹ ಪ್ರವೇಶ ಮಾಡಿದ್ದರು. ಆ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಕೆಲಸ ಹಾಗೂ ರಾಜಕೀಯ ಒತ್ತಡದಿಂದ ತೇಜಸ್ವಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದರು.

ಕ್ರಿಕೆಟ್​ ಆಡಿದ ಸಂಸದ ತೇಜಸ್ವಿ ಸೂರ್ಯ

ಬುಧವಾರ ತಮ್ಮ ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಆಗಮಿಸುತ್ತಿರುವ ವೇಳೆ ಬಾಳೆಹೊನ್ನೂರಿನ ಬಳಿ ಭತ್ತದ ಕಣದಲ್ಲಿ ಸ್ಥಳೀಯ ಹುಡುಗರು ಕ್ರಿಕೆಟ್ ಆಡುತ್ತಿದ್ದುದ್ದನ್ನು ಕಂಡ ಸಂಸದರು, ತಾವೂ ಕೂಡ ಅವರೊಟ್ಟಿಗೆ ಕೆಲಕಾಲ ಆಟವಾಡಿದ್ದಾರೆ. ಬಳಿಕ ಸ್ಥಳೀಯ ಹುಡುಗರ ಜೊತೆ ಬಾಳೆಹೊನ್ನೂರು ಸೇರಿದಂತೆ ಸುತ್ತಮುತ್ತಲ ಕಾಫಿ ತೋಟ, ಪ್ರಕೃತಿ ಸೌಂದರ್ಯ ಸವಿದರು.

Intro:Kn_Ckm_01_Mp_Crickent_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಅವರು ಇಂದೂ ತಮ್ಮ ರಾಜಕೀಯ ಜಂಜಾಟವನ್ನೆಲ್ಲಾ ಮರೆತು ಫ್ರೀ ಮೂಡ್‍ನಲ್ಲಿ ಗದ್ದೆಯ ಕಣದಲ್ಲಿ ಸ್ಥಳೀಯ ಹುಡುಗರ ಜೊತೆ ಕ್ರಿಕೆಟ್ ಆಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಗ್ರಾಮದ ಮಾಲತೇಶ್ ಅವರು ಕೆಲ ದಿನಗಳ ಹಿಂದೇ ತಮ್ಮ ಮನೆ ಗೃಹ ಪ್ರವೇಶ ಮಾಡಿದ್ದರು. ಆ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ತಮ್ಮ ಮನೆಯ ಗೃಹ ಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಅಧಿಕ ಕೆಲಸ ಹಾಗೂ ರಾಜಕೀಯದ ಒತ್ತಡದಿಂದಾ ತೇಜಸ್ವಿ ಸೂರ್ಯ ಅವರ ಮಾಲತೇಶ್ ಅವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬರಲೂ ಸಾಧ್ಯವಾಗಿರಲಿಲ್ಲ. ಇಂದು ತನ್ನ 12 ಜನ ಸ್ನೇಹಿತರೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿರುವ ವೇಳೆ ಬಾಳೆಹೊನ್ನೂರಿನಲ್ಲಿ ಭತ್ತದ ಕಣದಲ್ಲಿ ಸ್ಥಳೀಯರು ಹುಡುಗರು ಕ್ರಿಕೆಟ್ ಆಡುತ್ತಿದ್ದದ್ದನ್ನು ನೋಡಿ ಆ ಜಾಗಕ್ಕೆ ಹೋಗಿ ತನ್ನ ಸ್ನೇಹಿತರೊಂದಿಗೆ ಸೇರಿ ಸ್ಥಳೀಯ ಹುಡುಗರ ಜೊತೆ ಸೇರಿ ಕ್ರಿಕೆಟ್ ಆಟ ಆಡಿದ್ದಾರೆ. ಕ್ರಿಕೆಟ್ ಬಳಿಕ ಸ್ಥಳೀಯ ಹುಡುಗರ ಜೊತೆ ಸೇರಿ ಬಾಳೆಹೊನ್ನೂರು ಸೇರಿದಂತೆ ಸುತ್ತ ಮುತ್ತಲ ಪ್ರದೇಶದ ಕಾಫಿ ತೋಟ, ಪ್ರಕೃತಿಯ ಸೌಂದರ್ಯವನ್ನು ಸವಿದು ನಂತರ ಹೊಲ ಗದ್ದೆಗಳನ್ನು ಸುತ್ತು ಹೊಡೆದು ಮಲೆನಾಡ ಸೌಂದರ್ಯವನ್ನು ಸವೆಯುವುದರ ಮೂಲಕ ತಮ್ಮದೇ ಆದಂತಹ ಕ್ಷಣಗಳನ್ನು ಕಳೆದಿದ್ದಾರೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.