ಚಿಕ್ಕಮಗಳೂರು: ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಸರ್ಕಾರವು ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಎಸ್ಡಿಪಿಐ, ಕಾಂಗ್ರೆಸ್, ಜಾತ್ಯತೀತ, ಕೋಮುವಾದಿ, ಸೆಕ್ಯುಲರ್ ಎಂದು ಹೇಳಿಕೊಂಡು ಸುಮ್ಮನೆ ಕುಳಿತು ಕೊಳ್ಳಬಾರದು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಗಲಭೆ ಪ್ರಕರಣ ಕುರಿತು ಮಾತನಾಡಿದ ಅವರು, ಎಸ್ಡಿಪಿಐ ಸಂಘಟನೆ ಕೆಟ್ಟ ಕೆಲಸ ಮಾಡಿದೆ ಎಂದಾದರೆ, ಕೂಡಲೇ ಸರ್ಕಾರ ಕಟ್ಟು ನಿಟ್ಟಿನ ತೀರ್ಮಾನ ಮಾಡಬೇಕು. ಸರ್ಕಾರ ಸುಮ್ಮನೆ ಬಾಯಲ್ಲಿ ಹೇಳಬಾರದು ಎಂದರು.
ಯಾವತ್ತೂ ಕೂಡ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ತಂತ್ರ ಅನುಸರಿಸಬಾರದು. ತೀರ್ಮಾನ ತೆಗೆದುಕೊಂಡರೆ ಅದು ಖಡಕ್ ಆಗಿರಬೇಕು. ಕೂಡಲೇ ತೀರ್ಮಾನ ಬರಬೇಕು ಎಂದರು.