ಚಿಕ್ಕಮಗಳೂರು: ಆಲ್ದೂರಿನ ಬೀರಂಜಿ ಹಳ್ಳದ ವೆಸ್ಟ್ರನ್ ಘಾಟ್ ಹೋಟೆಲ್ ಬಳಿ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಆಲ್ಡೂರು ಪೊಲೀಸರು ದಾಳಿ ಮಾಡಿ ಆನೆಯ ಎರಡು ದಂತ ಮತ್ತು 7 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಪಿಗಳಿಂದ ಎರಡು ಕಾರು ವಶಕ್ಕೆ ಪಡೆದಿದ್ದು, ಉಡುಪಿಯ ಎರಡು ಜನ, ಮಂಗಳೂರಿನ ನಾಲ್ಕು ಜನ ಹಾಗೂ ಬೆಂಗಳೂರಿನ ಓರ್ವ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಸಂತೋಷ್ ಕುಮಾರ್, ರಂಜಿತ್, ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಶ್ರಫ್, ಉಡುಪಿಯ ಗಣೇಶ್, ಸುರೇಶ್, ಬೆಂಗಳೂರಿನ ಜಗದೀಶ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುವ ವೇಳೆ ವಿಜಯ್ ಹೆಗ್ಡೆ ಎಂಬ ವ್ಯಕ್ತಿಯಿಂದ ಈ ಎರಡು ಆನೆ ದಂತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಆಲ್ಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.