ETV Bharat / state

ಸೂಕ್ತ ಪರಿಹಾರ ಕೊಡಿಸುವುದಾಗಿ ಅಭಯ ನೀಡಿದ ಶಾಸಕ ಸಿ.ಟಿ.ರವಿ

author img

By

Published : Aug 13, 2019, 5:32 AM IST

ಮೂಡಿಗೆರೆ ತಾಲ್ಲೂಕಿನಲ್ಲಿ ನೆರೆ ಸಂತ್ರಸ್ಥರ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಸಿ.ಟಿ.ರವಿ ಅವರು ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

CT Ravi, the MLA, promised to provide the right solution

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಮಹಾಮಳೆಯಿಂದ ಅತಿವೃಷ್ಟಿಗೆ ಒಳಗಾದ ಪ್ರದೇಶಗಳನ್ನು ಶಾಸಕ ಸಿ.ಟಿ.ರವಿ ವೀಕ್ಷಿಸಿದ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು. ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಜೀವನದಲ್ಲಿ ಇಂತಹ ದುರಂತ ಜಿಲ್ಲೆಯಲ್ಲಿ ನೋಡಿರಲಿಲ್ಲ. ದೇವರು ಜನರನ್ನು ಬದುಕಿಸಿದ್ದಾನೆ. ಸರ್ಕಾರ ಯಾವ ನಿಯಮ ನೋಡಬಾರದು. ಅವರ ಬದುಕಿಗೆ ಆಸರೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಶಾಸಕ ಸಿ.ಟಿ.ರವಿ

ಇಲ್ಲಿನ ಜಾಗಕ್ಕೆ ಸ್ವೇಷಲ್ ಪ್ಯಾಕೇಜ್ ನೀಡಬೇಕು. ನಿಮಯಗಳು ಬೇಡ. ಅವರ ಹಿಂದಿನ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನರನ್ನು ಈ ಸಮಯದಲ್ಲಿ ಅಲೆದಾಡಿಸಬಾರದು. ಆಸ್ತಿ ಪಾಸ್ತಿ ಹಾನಿಯ ಲೆಕ್ಕಾಚಾರ ಹಾಕಿ ಅವರು ಪುನರ್ ನಿರ್ಮಾಣ ಮಾಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಆಗಸ್ಟ್ 15 ಅಥವಾ 16 ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಸಂತ್ರಸ್ತರ ಸ್ಪಂದನೆಗೆ ನೆರವಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಇಂತಹ ಜಾಗಗಳಿಗೆ ಬರದಿದ್ದರೇ ಅವರಿಗೆ ಸಮಸ್ಯೆ ಅರಿವಾಗುವುದಿಲ್ಲ. ಮುಖ್ಯಮಂತ್ರಿಗಳು ಬಂದಾಗ ಇಂತಹ ಜಾಗ ತೋರಿಸಬೇಕು. ಆಗ ಮಾತ್ರ ಅವರಿಗೆ ಭೀಕರತೆಯ ಅರಿವಾಗುತ್ತದೆ. ಇಲ್ಲಿಯವರೆಗೂ 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 22 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಮಹಾಮಳೆಯಿಂದ ಅತಿವೃಷ್ಟಿಗೆ ಒಳಗಾದ ಪ್ರದೇಶಗಳನ್ನು ಶಾಸಕ ಸಿ.ಟಿ.ರವಿ ವೀಕ್ಷಿಸಿದ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು. ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಜೀವನದಲ್ಲಿ ಇಂತಹ ದುರಂತ ಜಿಲ್ಲೆಯಲ್ಲಿ ನೋಡಿರಲಿಲ್ಲ. ದೇವರು ಜನರನ್ನು ಬದುಕಿಸಿದ್ದಾನೆ. ಸರ್ಕಾರ ಯಾವ ನಿಯಮ ನೋಡಬಾರದು. ಅವರ ಬದುಕಿಗೆ ಆಸರೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಶಾಸಕ ಸಿ.ಟಿ.ರವಿ

ಇಲ್ಲಿನ ಜಾಗಕ್ಕೆ ಸ್ವೇಷಲ್ ಪ್ಯಾಕೇಜ್ ನೀಡಬೇಕು. ನಿಮಯಗಳು ಬೇಡ. ಅವರ ಹಿಂದಿನ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನರನ್ನು ಈ ಸಮಯದಲ್ಲಿ ಅಲೆದಾಡಿಸಬಾರದು. ಆಸ್ತಿ ಪಾಸ್ತಿ ಹಾನಿಯ ಲೆಕ್ಕಾಚಾರ ಹಾಕಿ ಅವರು ಪುನರ್ ನಿರ್ಮಾಣ ಮಾಡುವ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಆಗಸ್ಟ್ 15 ಅಥವಾ 16 ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಸಂತ್ರಸ್ತರ ಸ್ಪಂದನೆಗೆ ನೆರವಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಇಂತಹ ಜಾಗಗಳಿಗೆ ಬರದಿದ್ದರೇ ಅವರಿಗೆ ಸಮಸ್ಯೆ ಅರಿವಾಗುವುದಿಲ್ಲ. ಮುಖ್ಯಮಂತ್ರಿಗಳು ಬಂದಾಗ ಇಂತಹ ಜಾಗ ತೋರಿಸಬೇಕು. ಆಗ ಮಾತ್ರ ಅವರಿಗೆ ಭೀಕರತೆಯ ಅರಿವಾಗುತ್ತದೆ. ಇಲ್ಲಿಯವರೆಗೂ 9 ಮಂದಿ ಜೀವ ಕಳೆದುಕೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 22 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

Intro:Kn_Ckm_07_Mla Ct Ravi visit_av_7202347Body:

ಚಿಕ್ಕಮಗಳೂರು:-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಹಾಮಳೆಯಿಂದಾ ಅತಿವೃಷ್ಟಿಗೆ ಒಳಗಾದ ಪ್ರದೇಶಗಳಿಗೆ ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದರು. ಮೂಡಿಗೆರೆ ತಾಲೂಕಿನಲ್ಲಿ ನಾನಾ ಭಾಗದಲ್ಲಿ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯ ಜನರಿಗೆ ಸಾಂತ್ವಾನ ಹೇಳಿದರು. ಸೂಕ್ತವಾದ ಪರಿಹಾರ ಕೊಡಿಸೋದಾಗಿ ಸ್ಥಳೀಯರಿಗೆ ಆತ್ಮವಿಶ್ವಾಸವನ್ನು ಶಾಸಕ ಸಿ ಟಿ ರವಿ ತುಂಬಿದ್ದು ಇದೇ ಸಂದರ್ಭದಲ್ಲಿ ಈ ಟಿವಿ ಭಾರತ್ ಗೆ ಮಾತನಾಡಿದ ಇವರು ನನ್ನ ಜೀವನದಲ್ಲಿ ಇಂತಹ ದುರಂತ ನಮ್ಮ ಜಿಲ್ಲೆಯಲ್ಲಿ ನೋಡಿರಲಿಲ್ಲ.ದೇವರು ಜನರನ್ನ ಬದುಕಿಸಿದ್ದಾನೆ. ಇವರ ಬದುಕ ಕಟ್ಟಿಕೊಳ್ಳಲು ನೆರವಾಗಬೇಕು. ಸರ್ಕಾರ ಯಾವ ನಿಯಮ ನೋಡಬಾರದು ಅವರಿಗೆ ಬದುಕು ಕಟ್ಟಿಕೊಳ್ಳಬೇಕು.ಈ ಭಾಗದ ಜನರು ಧೈರ್ಯವಂತರು ಅದಕ್ಕೆ ಅವರು ಧೈರ್ಯ ಕಳೆದುಕೊಂಡಿಲ್ಲ. ಇಲ್ಲಿನ ಜಾಗಕ್ಕೆ ಸ್ವೇಷಲ್ ಪ್ಯಾಕೇಜ್ ನೀಡಬೇಕು. ರೂಲ್ಸ್ ಗಳು ಇಲ್ಲಿ ಬೇಡಾ ಅವರ ಹಿಂದಿನ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಪರ್ಯಾಯಾ ವ್ಯವಸ್ಥೆ ಮಾಡಬೇಕು .ಜನರನ್ನು ಈ ಸಮಯದಲ್ಲಿ ಅಲೆದಾಡಿಸಬಾರದು. ಆಸ್ತಿ ಪಾಸ್ತಿ ಹಾನಿಯ ಲೆಕ್ಕಾಚಾರ ಹಾಕಿ ಅವರು ಪುನರ್ ನಿರ್ಮಾಣ ಮಾಡುವ ಯೋಜನೆ ರೂಪಿಸಬೇಕು. ಆಗಸ್ಟ್ 15 ಅಥವಾ 16 ರಂದೂ ಜಿಲ್ಲಾಧಿಕಾರಿಗಳಿಗೆ ವಿಶೇಷ ಮೀಟಿಂಗ್ ಮಾಡಲು ಹೇಳಿ ಜನರ ಸ್ವಂದನೆಗೆ ನೆರವಾಗಬೇಕಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಇಂತಹ ಜಾಗಗಳಿಗೆ ಬರದಿದ್ದರೇ ಅವರಿಗೆ ಸಮಸ್ಯೆ ಅರಿವಾಗೋದಿಲ್ಲ.ಮುಖ್ಯಮಂತ್ರಿಗಳು ಬಂದಾಗ ಇಂತಹ ಜಾಗ ತೋರಿಸಬೇಕು ಆಗ ಮಾತ್ರ ಅವರಿಗೆ ಭೀಕರತೆಯ ಅರಿವಾಗುತ್ತದೆ. ಆಗಿರುವ ಅನಾವುತಕ್ಕೆ ಜೀವ ಹಾನಿ ಹೆಚ್ಚಾಗಿಲ್ಲ. ಇಲ್ಲಿಯವರೆಗೂ 9 ಜನರು ಜೀವ ಕಳೆದುಕೊಂಡಿದ್ದಾರೆ.3 ಜನರು ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ 22 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಂದೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಶಾಸಕ ಸಿ ಟಿ ರವಿ ಹೇಳಿದರು.....


byte:-1 ಸಿ ಟಿ ರವಿ....ಶಾಸಕ

Conclusion:ರಾಜಕುಮಾರ್......
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.