ETV Bharat / state

ಶೃಂಗೇರಿ ಶಾರದಕ್ಕನ ದರ್ಶನದ ಬಳಿಕ ಇವುಗಳನ್ನ ನೋಡದೇ ಹೋಗಲು ಚಾನ್ಸೇ ಇಲ್ಲ..

ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ತುಂಗಾ ನದಿಯಲ್ಲಿರುವ ಸಹಸ್ರಾರು ಮೀನುಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ.

author img

By

Published : May 12, 2019, 6:30 PM IST

ನೋಡ ಬನ್ನಿ ಶೃಂಗೇರಿಯಲ್ಲಿನ ಮೀನುಗಳ ಬೆಡಗ

ಚಿಕ್ಕಮಗಳೂರು : ಮಲೆನಾಡು ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರು ಸೀರೆಯುಟ್ಟು ಕಂಗೊಳಿಸುವ ಪ್ರಕೃತಿ ದೇವತೆ ಪ್ರವಾಸಿಗರನ್ನು ಪ್ರತಿನಿತ್ಯ ಕೈಬೀಸಿ ತನ್ನತ್ತ ಕರೆಯುತ್ತಿದ್ದಾಳೆ.

ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಶೃಂಗೇರಿಯ ಶ್ರೀ ಶಾರದಾ ಪೀಠ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವುದರ ಜೊತೆಗೆ ತುಂಗಾ ನದಿಯಲ್ಲಿರುವ ಸಾವಿರಾರು ಮೀನುಗಳು ನಿತ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ. ಮೀನುಗಳನ್ನು ನೋಡಿ ಅವುಗಳಿಗೆ ಆಹಾರ ಹಾಕೋದೇ ಒಂದು ಸೊಬಗು. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಶಾರದಾಂಬೆಯ ದರ್ಶನ ಮತ್ತು ಜಗದ್ಗುರುಗಳ ಆಶೀರ್ವಾದ ಪಡೆದು ಕೃತಾರ್ಥರಾದರೆ, ಪ್ರವಾಸಿಗರು ಅಲ್ಲಿನ ಅದ್ಭುತ ವಾಸ್ತುಶಿಲ್ಪ ಮನಮೋಹಕ ಪ್ರಕೃತಿ ಹಾಗೂ ತುಂಗಾ ನದಿಯ ಸಹಸ್ರಾರು ಮೀನುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಶ್ರೀಮಠದ ಸ್ನಾನಘಟ್ಟದಲ್ಲಿ ಮಾತ್ರ ಕಂಡು ಬರುವ ಗಜ ಗಾತ್ರದ ಮೀನುಗಳು ಪ್ರವಾಸಿಗರ ಮತ್ತು ಮಕ್ಕಳ ಮನ ಸೂರೆಗೊಳ್ಳುತ್ತಿವೆ.

ನೋಡ ಬನ್ನಿ ಶೃಂಗೇರಿಯ ಮೀನುಗಳ ಬೆಡಗ

ಈ ದೇವಿ ದರ್ಶನ ಪಡೆಯಲು ಮತ್ತು ಇಲ್ಲಿನ ಮೀನುಗಳನ್ನು ನೋಡಲು ರಾಜ್ಯದಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ದಿನದಿಂದ ದಿನಕ್ಕೆ ದೇವಸ್ಥಾಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

ಚಿಕ್ಕಮಗಳೂರು : ಮಲೆನಾಡು ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರು ಸೀರೆಯುಟ್ಟು ಕಂಗೊಳಿಸುವ ಪ್ರಕೃತಿ ದೇವತೆ ಪ್ರವಾಸಿಗರನ್ನು ಪ್ರತಿನಿತ್ಯ ಕೈಬೀಸಿ ತನ್ನತ್ತ ಕರೆಯುತ್ತಿದ್ದಾಳೆ.

ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಶೃಂಗೇರಿಯ ಶ್ರೀ ಶಾರದಾ ಪೀಠ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವುದರ ಜೊತೆಗೆ ತುಂಗಾ ನದಿಯಲ್ಲಿರುವ ಸಾವಿರಾರು ಮೀನುಗಳು ನಿತ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿವೆ. ಮೀನುಗಳನ್ನು ನೋಡಿ ಅವುಗಳಿಗೆ ಆಹಾರ ಹಾಕೋದೇ ಒಂದು ಸೊಬಗು. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಶಾರದಾಂಬೆಯ ದರ್ಶನ ಮತ್ತು ಜಗದ್ಗುರುಗಳ ಆಶೀರ್ವಾದ ಪಡೆದು ಕೃತಾರ್ಥರಾದರೆ, ಪ್ರವಾಸಿಗರು ಅಲ್ಲಿನ ಅದ್ಭುತ ವಾಸ್ತುಶಿಲ್ಪ ಮನಮೋಹಕ ಪ್ರಕೃತಿ ಹಾಗೂ ತುಂಗಾ ನದಿಯ ಸಹಸ್ರಾರು ಮೀನುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಶ್ರೀಮಠದ ಸ್ನಾನಘಟ್ಟದಲ್ಲಿ ಮಾತ್ರ ಕಂಡು ಬರುವ ಗಜ ಗಾತ್ರದ ಮೀನುಗಳು ಪ್ರವಾಸಿಗರ ಮತ್ತು ಮಕ್ಕಳ ಮನ ಸೂರೆಗೊಳ್ಳುತ್ತಿವೆ.

ನೋಡ ಬನ್ನಿ ಶೃಂಗೇರಿಯ ಮೀನುಗಳ ಬೆಡಗ

ಈ ದೇವಿ ದರ್ಶನ ಪಡೆಯಲು ಮತ್ತು ಇಲ್ಲಿನ ಮೀನುಗಳನ್ನು ನೋಡಲು ರಾಜ್ಯದಿಂದ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ದಿನದಿಂದ ದಿನಕ್ಕೆ ದೇವಸ್ಥಾಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ.

Intro:R_Kn_Ckm_02_12_Fish in surnger tunga river_Rajkumar_Ckm_pkg_7202347Body:


ಚಿಕ್ಕಮಗಳೂರು:-

ಮಲೆನಾಡು ಪ್ರವಾಸಿಗರ ಸ್ವರ್ಗದ ತಾಣ. ಹಸಿರು ಸೀರೆತೊಟ್ಟು ನಿಂತಿರುವ ಇಲ್ಲಿನ ಪ್ರಕೃತಿ ದೇವತೆ . ಪ್ರವಾಸಿಗರನ್ನು ಪ್ರತಿನಿತ್ಯ ಕೈಬಿಸಿ ಕರೆಯುತ್ತಿದ್ದಾಳೆ. ಅಷ್ಟೇ ಇಲ್ಲಿನ ದೇವಾಲಯಗಳು ಕೂಡ ಅಷ್ಟೇ ಪ್ರಸ್ಧಿದಿ ಪಡೆದಿವೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳ ಶೃಂಗೇರಿಯ ಶ್ರೀ ಶಾರದಾ ಪೀಠ ಆದ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ದಾ ಕೇಂದ್ರವಾಗಿರುವುದರ ಜೊತೆಗೆ ತುಂಗಾ ನದಿಯಲ್ಲಿರುವ ಸಾವಿರಾರೂ ಮೀನುಗಳು ಪ್ರತಿನಿತ್ಯ ಪ್ರವಾಸಿಗರ ಆಕರ್ಷಣೆಯ ಕೇಂದ್ರವೂ ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.......

ಹೌದು ಹೀಗೆ ಮೀನುಗಳಿಗೆ ಆಹಾರ ಹಾಕಿರುತ್ತಿರುವ ಭಕ್ತ ಸಮೂಹ. ಮತ್ತೋಂದು ಕಡೆ ದೇವಸ್ಥಾನದಲ್ಲಿ ಮಕ್ಕಳಿಗೆ ಅಕ್ಷರ ಅಭ್ಯಾಸಕ್ಕಾಗಿ ಬರುವ ಪೋಷಕರು. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ದೇವಸ್ಥಾನ ಪ್ರಸ್ಥಿದ ತಾಣಗಳಲ್ಲಿ ಒಂದು. ಇಲ್ಲಿಗೆ ಬರುವ ಭಕ್ತರಿಗೆ ಸಕಲ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗೀ ಇಲ್ಲಿಗೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಪ್ರಮುಖವಾಗಿ ತುಂಗಾ ನದಿಯಲ್ಲಿ ಇರುವ ಸಾವಿರಾರು ಮೀನುಗಳು ಇಲ್ಲಿನ ಮತ್ತೋಂದು ಆಕರ್ಷಣೆಯ ಕೇಂದ್ರ, ಈ ನೀರಿನ ಪ್ರಮುಖ ವಿಶೇಷ ಅಂದರೇ ಇಲ್ಲಿ ಸ್ನಾನ ಮಾಡಿದರೇ ಚರ್ಮ ರೋಗ ವಾಸಿಯಾಗೋದು ಎಂಬುದು ಇಲ್ಲಿನ ಜನರ ನಂಬಿಕೆ, ಈ ಹಿಂದಿನ ಶ್ರೀ ಗಳು ನದಿಯಲ್ಲಿನ ಒಂದು ಮೀನಿಗೆ ಚಿನ್ನದ ಉಂಗುರ ಹಾಕಿರೋದಲ್ಲದೇ ಅದು ವರ್ಷಕ್ಕೆ ಒಂದು ಭಾರೀ ಪೂಜೆಯ ಸಂದರ್ಭದಲ್ಲಿ ದರ್ಶನ ನೀಡುತ್ತದೆ ಎಂಬುದು ಮತ್ತೋಂದು ಪ್ರತೀತಿ, ಇಲ್ಲಿನ ಸಾವಿರಾರೂ ಮೀನನ್ನು ನೋಡಲು ಮತ್ತು ಅದಕ್ಕೆ ಆಹಾರವನ್ನು ನೀಡೋದೇ ಒಂದು ಚೆಂದ.ಅಲ್ಲದೆ ಈ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮನಸ್ಸುಗೆ ನೆಮ್ಮದಿ ದೊರೆಯುತ್ತದೆ.....

ಕ್ಷೇತ್ರಕ್ಕೆ ಆಗಮಿಸುವ ಭಕ್ತರು ವಿದ್ಯಾದಿದೇವತೆ ಶ್ರೀ ಶಾರದಾಂಬೆಯ ದರ್ಶನ ಮತ್ತು ಜಗದ್ಗುರುಗಳ ಆಶೀರ್ವಾದ ಪಡೆದು ಕೃತಾರ್ಥರಾದರೆ ಪ್ರವಾಸಿಗರು ಅಲ್ಲಿನ ಅದ್ಬುತ ವಾಸ್ತುಶಿಲ್ಪ ಸುಂದರ ಪ್ರಕೃತಿ ಹಾಗೂ ತುಂಗಾ ನದಿಯಲ್ಲಿರುವ ಸಹಸ್ರಾರು ಮೀನುಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಶ್ರೀಮಠದ ಸ್ನಾನಘಟ್ಟದಲ್ಲಿ ಮಾತ್ರ ಕಂಡು ಬರುವ ಗಜ ಗಾತ್ರದ ಮೀನುಗಳು ತಮ್ಮ ಹಾವ ಬಾವಗಳಿಂದ ಪ್ರವಾಸಿಗರ ಮತ್ತು ಮಕ್ಕಳ ಮನ ಸೂರೆಗೊಳ್ಳುತ್ತಿವೆ. ಮೀನುಗಳನ್ನು ನೋಡುತ್ತಿದ್ದರೆ ಬಾಲ್ಯದ ನೆನಪುಗಳು ಮರುಕಳಿಸುತ್ತವೆ .ಬದುಕಿನ ಜಂಜಾಟ ಮರೆತು ಒಂದೆರಡು ದಿನ ಇಲ್ಲೇ ತಂಗುವ ಮನಸ್ಸು ಆಗದೇ ಇರದು.....

ಒಟ್ಟಾರೆಯಾಗಿ ಈ ದೇವಿ ದರ್ಶನ ಪಡೆಯುಲು ಮತ್ತು ಇಲ್ಲಿನ ಮೀನುಗಳನ್ನು ನೋಡಲು ರಾಜ್ಯದಿಂದ ಮಾತ್ರ ಹೊರ ರಾಜ್ಯಗಳಿಂದಲೂ ಭಕ್ತರ ಆಗಮಿಸುತ್ತಾರೆ. ಶಾಲಾ ಮತ್ತು ಕಾಲೇಜುಗಳ ರಜಾ ದಿನ ಇರುವ ಹಿನ್ನಲೆ ದಿನದಿಂದ ದಿನಕ್ಕೆ ದೇವಸ್ಥಾಕ್ಕೆ ಬರುವ ಭಕ್ತರು ಸಂಖ್ಯೆಯೂ ಹೆಚ್ಚಾಗಿದೆ. ಜೊತೆಗೆ ಇಲ್ಲಿನ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿದು ಪ್ರವಾಸಿಗರು ಆನಂದ ಪಡೆಯುತ್ತಿದ್ದಾರೆ......

byte:-1 ಮೂರ್ತಿ,,,,,,ದೇವಸ್ಥಾನದ ಭಕ್ತ

byte:-2 ಸರಳ,,,,,,ದೇವಸ್ಥಾನದ ಭಕ್ತೆ

Conclusion:ರಾಜಕುಮಾರ್,,,,,,,
ಈ ಟಿವಿ ಭಾರತ್.......
ಚಿಕ್ಕಮಗಳೂರು............
ETV Bharat Logo

Copyright © 2024 Ushodaya Enterprises Pvt. Ltd., All Rights Reserved.