ಚಿಕ್ಕಬಳ್ಳಾಪುರ: ವಂಚನೆಗೊಳಗಾದ ಅಶ್ವಥಮ್ಮ ನಗರದ ವಾರ್ಡ್ ನಂ.8 ರ ಮರುಳು ಸಿದ್ದೇಶ್ವರಸ್ವಾಮಿ ದೇವಸ್ಥಾನದ ಮುಂದೆ ವಾಸವಿದ್ದಾರೆ. ಚಿಂತಾಮಣಿ ಮೂಲದ ದೊಡ್ಡಗಂಜೂರು ಗ್ರಾಮದ ಸಹೋದರರಾದ ಕೆಎಸ್ಆರ್ಟಿಸಿ ಕಂಡಕ್ಟರ್ ರಮೇಶ ಮತ್ತು ಬಿಎಂಟಿಸಿ ಕಂಡೆಕ್ಟರ್ ಶ್ರೀನಿವಾಸ ವಂಚನೆ ಮಾಡಿದ್ದಾರೆ. ಅಶ್ವಥಮ್ಮನಿಗೆ ಪುಣ್ಯಕ್ಷೇತ್ರಗಳನ್ನು ಸುತ್ತುವ ಹವ್ಯಾಸ ಇತ್ತು. ಹಾಗಾಗಿ ಸಿಗಂಧೂರಿಗೆ ಹೋಗಿ ಚೌಡೇಶ್ವರಿ ದರ್ಶನ ಪಡೆದು ಬರೋಣ ಎಂದು ಮೆಜೆಸ್ಟಿಕ್ನಲ್ಲಿ ಬಸ್ಗಾಗಿ ಹುಡುಕಾಟ ನಡೆಸುತ್ತಿದ್ದರು.
ಬಸ್ಗಾಗಿ ಹುಡುಕುತ್ತಿದ್ದ ಇವರನ್ನು ನೋಡಿದ ಕೆಎಸ್ಆರ್ಟಿಸಿ ಕಂಡಕ್ಟರ್ ಈ ಬಸ್ ಡೈರೆಕ್ಟಾಗಿ ಸಿಗಂಧೂರಿಗೆ ಹೋಗುತ್ತದೆ ಎಂದು ಬಸ್ ಹತ್ತಿಸಿಕೊಂಡಿದ್ದಾನೆ. ಕಷ್ಟ ಸುಖ ಮಾತನಾಡುವ ರೀತಿಯಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಇಬ್ಬರೂ ಅಣ್ಣ- ತಮ್ಮಂದಿರು ಚಿಂತಾಮಣಿಯಲ್ಲಿ ಫೈನಾನ್ಸ್ ನಡೆಸುತ್ತಿರುವ ಬಗ್ಗೆ ಹೇಳಿದ್ದಾರೆ. ಬಳಿಕ ಫೋನ್ ಮಾಡಿ, ಇಬ್ಬರೂ ಮನೆಗೆ ಬಂದು ಅವರ ಮನವೊಲಿಸಿ ಅಶ್ವಥಮ್ಮ ಅವರ ಮನೆ ಅಡವಿಟ್ಟು, ಅಕ್ಕಪಕ್ಕದ ಮಹಿಳೆಯರ ಬಳಿ ಒಟ್ಟು 45 ಲಕ್ಷ ರೂ. ಹಣ ದೋಚಿ ವಂಚನೆ ಮಾಡಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರದ ನಗರ ಠಾಣೆಯಲ್ಲಿ ದೂರು ನೀಡಿದ್ರೂ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲವಂತೆ. ಎಫ್ಐಆರ್ ದಾಖಲು ಮಾಡಿದ ಪೊಲೀಸರೇ ಆರೋಪಿಗೆ ಹಣ ವಾಪಸ್ ಕೊಡಲು ನಾಲ್ಕು ತಿಂಗಳು ಟೈಮ್ ಕೊಡಿಸಿದ್ರಂತೆ. ಆದರೆ ಬಳಿಕವೂ ಹಣ ಅವರ ಕೈಸೇರಿಲ್ಲ. ಹೀಗಾಗಿ ವಂಚನೆಗೊಳಗಾದ ಮಹಿಳೆ ಎಸ್ಪಿ ಮಿಥುನ್ ಕುಮಾರ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಪೊಲೀಸರ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ನಿಯ ಸ್ನೇಹಿತೆಯ ಪ್ರೀತಿಸಿ ಕೊಲೆಗೈದ ಆರೋಪಿ ಸೆರೆ