ಚಿಕ್ಕಬಳ್ಳಾಪುರ: ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಉರುಳಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿ ನಗರದ ಬಾಗೇಪಲ್ಲಿ ರಸ್ತೆಯಲ್ಲಿ ನಡೆದಿದೆ.
ನಾರಾಯಣ ಸ್ವಾಮಿ(58) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ. ಉಪ್ಪಾರಪೇಟೆ ಗ್ರಾಮದ ಸೈಯದ್ ಗಯಾಸ್ ಪಾಷಾ, ನಾರಾಯಣ ಸ್ವಾಮಿ ಹಾಗೂ ಇತರ 3 ಮಂದಿ ಫ್ಯಾಕ್ಟರಿಯಿಂದ ಇಟ್ಟಿಗೆ ಲೋಡ್ ಮಾಡಿಕೊಂಡು ಬಾಗೇಪಲ್ಲಿ ಕಡೆ ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಉರುಳಿದೆ ಎನ್ನಲಾಗಿದೆ.
ಸೈಯದ್ ಗಯಾಸ್ ಪಾಷಾಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.