ETV Bharat / state

ಜಿಲ್ಲಾಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರಿಸುತ್ತಿದ್ದರೂ ಅಧಿಕಾರಿಗಳ ನಿರಾಸಕ್ತಿ: ಶಾಸಕ ಆಕ್ರೋಶ

author img

By

Published : Dec 25, 2019, 8:13 AM IST

ಗುಡಿಬಂಡೆ ತಾಲೂಕು ಪಟ್ಟಣ ಪಂಚಾಯತ್​ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಸ್​​​.ಎನ್​​​ ​​.ಸುಬ್ಬಾರೆಡ್ಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ ಆದ್ರು.

Progress review meeting
ಪ್ರಗತಿ ಪರಿಶೀಲನೆ ಸಭೆ

ಗುಡಿಬಂಡೆ: ತಾಲೂಕು ಪಟ್ಟಣ ಪಂಚಾಯತ್​ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಸ್​​​.ಎನ್​​​​. ಸುಬ್ಬಾರೆಡ್ಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ರು.

ಜಿಲ್ಲೆ ಹಾಗೂ ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ ) ಪ್ರಗತಿ ಪರಿಶೀಲನೆಯನ್ನು ಇನ್ನು ಮುಂದೆ ಆ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್​ ಮಟ್ಟದಲ್ಲೂ ನಡೆಯಲಿದೆ ಎಂದು ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.

ಇದರೊಂದಿಗೆ ಇಲಾಖಾವಾರು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅನುದಾನ ಬಳಕೆ ಪ್ರಗತಿ ಕುರಿತು ಗ್ರಾಮ ಪಂಚಾಯತಿಯೂ ಪರಿಶೀಲನೆ ನಡೆಸಬಹುದು ಎಂದರು.

ಪ್ರಗತಿ ಪರಿಶೀಲನೆ ಸಭೆ

ಬರಪೀಡಿತ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಆಸಕ್ತಿ ತೋರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸ್ವಚ್ಛ ಭಾರತ ಯೋಜನೆ ಅನುಷ್ಠಾನವಾಗಿ ವಿಶೇಷ ಯೋಜನೆ ರೂಪಿಸಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು. ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಾಡಬೇಕು. ಅದರ ಘಟಕ ಸ್ಥಾಪನೆಗಾಗಿ ಜನವರಿ ಒಂದರೊಳಗೆ ಪಿಡಿಓಗಳು ಸ್ಥಳ ಗುರುತಿಸಿ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಗುಡಿಬಂಡೆ: ತಾಲೂಕು ಪಟ್ಟಣ ಪಂಚಾಯತ್​ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ ಎಸ್​​​.ಎನ್​​​​. ಸುಬ್ಬಾರೆಡ್ಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ರು.

ಜಿಲ್ಲೆ ಹಾಗೂ ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ ) ಪ್ರಗತಿ ಪರಿಶೀಲನೆಯನ್ನು ಇನ್ನು ಮುಂದೆ ಆ ತಾಲೂಕಿನ ಪ್ರತಿ ಗ್ರಾಮ ಪಂಚಾಯತ್​ ಮಟ್ಟದಲ್ಲೂ ನಡೆಯಲಿದೆ ಎಂದು ಎಸ್.ಎನ್. ಸುಬ್ಬಾರೆಡ್ಡಿ ಹೇಳಿದರು.

ಇದರೊಂದಿಗೆ ಇಲಾಖಾವಾರು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅನುದಾನ ಬಳಕೆ ಪ್ರಗತಿ ಕುರಿತು ಗ್ರಾಮ ಪಂಚಾಯತಿಯೂ ಪರಿಶೀಲನೆ ನಡೆಸಬಹುದು ಎಂದರು.

ಪ್ರಗತಿ ಪರಿಶೀಲನೆ ಸಭೆ

ಬರಪೀಡಿತ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಆಸಕ್ತಿ ತೋರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸ್ವಚ್ಛ ಭಾರತ ಯೋಜನೆ ಅನುಷ್ಠಾನವಾಗಿ ವಿಶೇಷ ಯೋಜನೆ ರೂಪಿಸಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು. ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಾಡಬೇಕು. ಅದರ ಘಟಕ ಸ್ಥಾಪನೆಗಾಗಿ ಜನವರಿ ಒಂದರೊಳಗೆ ಪಿಡಿಓಗಳು ಸ್ಥಳ ಗುರುತಿಸಿ ಸಂಪೂರ್ಣ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

Intro:ಗುಡಿಬಂಡೆ ತಾಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆBody:ಗುಡಿಬಂಡೆ ತಾಲೂಕು ಪಟ್ಟಣ ಪಂಚಾಯಿತಿ ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು..Conclusion:ಜಿಲ್ಲೆ ಹಾಗೂ ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ ) ಪ್ರಗತಿ ಪರಿಶೀಲನೆಯ ಇನ್ನು ಮುಂದೆ ಆ ತಾಲೂಕು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ.. ಇದರೊಂದಿಗೆ ಇಲಾಖೆವಾರು ಕಾರ್ಯಕ್ರಮಗಳ ಅನುಷ್ಠಾನ ಮತ್ತು ಅನುದಾನ ಬಳಕೆಯ ಪ್ರಗತಿಯನ್ನು ಗ್ರಾಮ ಪಂಚಾಯಿತಿಯೂ ಪರಿಶೀಲನೆ ನಡೆಸಬಹುದು ಎಂದು ಶಾಸಕ ಎಸ್. ಎನ್. ಸುಬ್ಬರೆಡ್ಡಿ ತಿಳಿಸಿದರು

ಬರಪೀಡಿ ಜಿಲ್ಲೆಯ ಅಭಿವೃದ್ದಿಗಾಗಿ ಸರ್ಕಾರ ಆಸಕ್ತಿ ತೋರಿಸತ್ತಿದ್ದರು ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಅಧಿಕಾರಿಗಳು ಮುಖ್ಯ ಕೇಂದ್ರ ಸರ್ಕಾರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಅನುಷ್ಠಾನವಾಗಿ ವಿಶೇಷ ಯೋಜನೆ ರೂಪಿಸಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಬೇಕು ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಾಡಬೇಕು.. ಸ್ವಚ್ಛ ಭಾರತ್ ಮಿಷನ್ ಘಟಕ ಸ್ಥಾಪನೆಗಾಗಿ ಜನವರಿ ಒಂದನೇ ತಾರೀಕುನೊಳಗೆ ಪಿಡಿಓಗಳು ಗುರುತಿಸಿ ಸಂಪೂರ್ಣ ವರದಿಯನ್ನು ನೀಡಬೇಕೆಂದು ಶಾಸಕರು ಪಿಡಿಓ ಖಡಕ್ ಎಚ್ಚರಿಕೆ ನೀಡಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.