ETV Bharat / state

ಗುಡಿಬಂಡೆಯಲ್ಲಿ ಅದ್ಧೂರಿ ಗ್ರಾಮೋತ್ಸವ ಕಾರ್ಯಕ್ರಮ - ಗುಡಿಬಂಡೆಯಲ್ಲಿ ಗ್ರಾಮೋತ್ಸವ ಕಾರ್ಯಕ್ರಮ

ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ನಡೆದ ಗ್ರಾಮೋತ್ಸವ ಹಾಗೂ ಸೇವಾದಿನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿರು.

Gramotsava program in Gudibande
ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಮೋತ್ಸವ ಕಾರ್ಯಕ್ರಮ
author img

By

Published : Dec 17, 2019, 5:34 AM IST

ಗುಡಿಬಂಡೆ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ದಿ.ಅಜಿತ್ ಕುಮಾರ್ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಗ್ರಾಮೋತ್ಸವ ಹಾಗೂ ಸೇವಾದಿನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿರು.

ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಮೋತ್ಸವ ಕಾರ್ಯಕ್ರಮ

ಬಳಿಕ ಆರ್ಶೀವಚನ ನೀಡಿದ ಅವರು, ನಮ್ಮ ದೇಶದಲ್ಲಿ ಅನೇಕರು ಸಮಾಜಸೇವೆ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಿಮ್ಮ ಬಗ್ಗೆ ಇಡೀ ದೇಶ ನೆನೆಪಿಸಿಕೊಳ್ಳಬೇಕಾದರೆ ದೇಶ ಮೆಚ್ಚುವಂತಹ ಕೆಲಸ ಮಾಡಬೇಕು. ಚಳಿ, ಆಹಾರ, ನಿದ್ರೆಯನ್ನು ಲೆಕ್ಕಿಸದೇ ಹಿಮಾಲಯ ತಪ್ಪಲಿನಲ್ಲಿ ಕಾಯುತ್ತಿರುವ ಸೈನಿಕರಿಂದಲೇ ಇಂದು ನಾವು ಸಂತೋಷದಿಂದ ಬದುಕುತ್ತಿದ್ದೇವೆ. ಸೂರ್ಯ ಹುಟ್ಟಿದ ಕೂಡಲೇ ಹೇಗೆ ಎಲ್ಲಾ ಕೆಲಸಗಳು ನಡೆಯುತ್ತದೆಯೋ ಅದೇ ರೀತಿ ನಾವು ಕೂಡ ಒಬ್ಬರಿಗಾಗಿ ಕಾಯದೇ ಸಮಾಜದ ಅಭಿವೃದ್ದಿಗೆ, ದೇಶದ ಒಳಿತಿಗಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿದಂತಹ ಮಹನೀಯರನ್ನು ಸದಾ ನೆನೆಯುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದರು.

ಇನ್ನು ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಭಾರತಮಾತೆಯ ಚಿತ್ರದೊಂದಿಗೆ ಎತ್ತಿನಗಾಡಿಯಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ನಂತರ ಒಂದೇ ಸಮಯಕ್ಕೆ ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ? ಎಂಬ ವಿಷಯದ ಬಗ್ಗೆ ಕೃಷಿಕರ ಗೋಷ್ಠಿ, ಮಾತೃತ್ವ, ನೇತೃತ್ವ, ಕರ್ತೃತ್ವ ವಿಷಯದ ಬಗ್ಗೆ ಮಹಿಳಾಗೋಷ್ಠಿ ಹಾಗೂ ಯುವನಡಿಗೆ ಗ್ರಾಮದೆಡೆಗೆ ಎಂಬ ವಿಷಯದ ಬಗ್ಗೆ ಯುವಗೋಷ್ಠಿಗಳು ನಡೆದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗುಡಿಬಂಡೆ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ದಿ.ಅಜಿತ್ ಕುಮಾರ್ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಗ್ರಾಮೋತ್ಸವ ಹಾಗೂ ಸೇವಾದಿನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿರು.

ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ ಗ್ರಾಮೋತ್ಸವ ಕಾರ್ಯಕ್ರಮ

ಬಳಿಕ ಆರ್ಶೀವಚನ ನೀಡಿದ ಅವರು, ನಮ್ಮ ದೇಶದಲ್ಲಿ ಅನೇಕರು ಸಮಾಜಸೇವೆ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಿಮ್ಮ ಬಗ್ಗೆ ಇಡೀ ದೇಶ ನೆನೆಪಿಸಿಕೊಳ್ಳಬೇಕಾದರೆ ದೇಶ ಮೆಚ್ಚುವಂತಹ ಕೆಲಸ ಮಾಡಬೇಕು. ಚಳಿ, ಆಹಾರ, ನಿದ್ರೆಯನ್ನು ಲೆಕ್ಕಿಸದೇ ಹಿಮಾಲಯ ತಪ್ಪಲಿನಲ್ಲಿ ಕಾಯುತ್ತಿರುವ ಸೈನಿಕರಿಂದಲೇ ಇಂದು ನಾವು ಸಂತೋಷದಿಂದ ಬದುಕುತ್ತಿದ್ದೇವೆ. ಸೂರ್ಯ ಹುಟ್ಟಿದ ಕೂಡಲೇ ಹೇಗೆ ಎಲ್ಲಾ ಕೆಲಸಗಳು ನಡೆಯುತ್ತದೆಯೋ ಅದೇ ರೀತಿ ನಾವು ಕೂಡ ಒಬ್ಬರಿಗಾಗಿ ಕಾಯದೇ ಸಮಾಜದ ಅಭಿವೃದ್ದಿಗೆ, ದೇಶದ ಒಳಿತಿಗಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿದಂತಹ ಮಹನೀಯರನ್ನು ಸದಾ ನೆನೆಯುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದರು.

ಇನ್ನು ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಭಾರತಮಾತೆಯ ಚಿತ್ರದೊಂದಿಗೆ ಎತ್ತಿನಗಾಡಿಯಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ನಂತರ ಒಂದೇ ಸಮಯಕ್ಕೆ ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ? ಎಂಬ ವಿಷಯದ ಬಗ್ಗೆ ಕೃಷಿಕರ ಗೋಷ್ಠಿ, ಮಾತೃತ್ವ, ನೇತೃತ್ವ, ಕರ್ತೃತ್ವ ವಿಷಯದ ಬಗ್ಗೆ ಮಹಿಳಾಗೋಷ್ಠಿ ಹಾಗೂ ಯುವನಡಿಗೆ ಗ್ರಾಮದೆಡೆಗೆ ಎಂಬ ವಿಷಯದ ಬಗ್ಗೆ ಯುವಗೋಷ್ಠಿಗಳು ನಡೆದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Intro:ಮಕ್ಕಳು ಪ್ರಶ್ನಿಸುವುದನ್ನು ರೂಡಿಸಿಕೊಳ್ಳಬೇಕು: ನಿರ್ಮಲಾನಂದ ಸ್ವಾಮೀಜಿBody:ಗುಡಿಬಂಡೆ: ಮಕ್ಕಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಾಠ ಕೇಳಿದ ನಂತರ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುವುದನ್ನು ರೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿರವರು ತಿಳಿಸಿದರು.Conclusion:ಅದ್ದರೂರಿಯಾಗಿ ನಡೆದ ಗ್ರಾಮ ವಿಕಾಸ ಸಂಸ್ಥೆಯ ಗ್ರಾಮೋತ್ಸವ

ಗುಡಿಬಂಡೆ :ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ನಡೆದ ದಿ.ಅಜಿತ್ ಕುಮಾರ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಗ್ರಾಮೋತ್ಸವ ಹಾಗೂ ಸೇವಾದಿನ ಕಾರ್ಯಕ್ರಮ ಉದ್ಘಾಟಿಸಿ ನಂತರ ಆರ್ಶೀವಚನ ನೀಡಿದ ಅವರು, ನಮ್ಮ ದೇಶದಲ್ಲಿ ಅನೇಕರು ಸಮಾಜಸೇವೆ ಹಾಗೂ ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ನಿಮ್ಮ ಬಗ್ಗೆ ಇಡೀ ದೇಶ ನೆನೆಪಿಸಿಕೊಳ್ಳಬೇಕಾದರೇ ದೇಶ ಮೆಚ್ಚುವಂತಹ ಕೆಲಸ ಮಾಡಬೇಕು. ಇಂದು ನಾವು ಇಲ್ಲಿ ಪ್ರಶಾಂತವಾಗಿ ಇಲ್ಲಿ ಜೀವಿಸುತ್ತಿರುವುದು ದೇಶ ಕಾಯವ ಸೈನಿಕರಿಂದ ಎಂದು ಮರೆಯಬಾರದು. ಚಳಿ, ಆಹಾರ, ನಿದ್ರೆಯನ್ನು ಲೆಕ್ಕಿಸದೇ ಹಿಮಾಲಯ ತಪ್ಪಲಿನಲ್ಲಿ ಕಾಯುತ್ತಿರುವ ಸೈನಿಕರಿಂದಲೇ ಇಂದು ನಾವು ಸಂತೋಷದಿಂದ ಬದುಕುತ್ತಿದ್ದೇವೆ. ಸೂರ್ಯ ಹುಟ್ಟಿದ ಕೂಡಲೇ ಹೇಗೆ ಎಲ್ಲಾ ಕೆಲಸಗಳು ನಡೆಯುತ್ತೆದೆಯೋ ಅದೇ ರೀತಿ ನಾವು ಕೂಡ ಒಬ್ಬರಿಗಾಗಿ ಕಾಯದೇ ಸಮಾಜದ ಅಭಿವೃದ್ದಿಗಾಗಿ ದೇಶದ ಒಳಿತಿಗಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿಂತಹ ಮಹನೀಯರನ್ನು ಸದಾ ನೆನೆಯುವುದರಿಂದ ನಮ್ಮ ಬದುಕು ಹಸನಾಗುತ್ತದೆ ಎಂದರು.
         ಮೊದಲು ನಮ್ಮ ಗ್ರಾಮಗಳನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕಿದೆ. ನಮ್ಮ ಮನೆಗಳಲ್ಲಿ ಅನೇಕ ದೇವರುಗಳ ಚಿತ್ರಗಳು, ಮಹನೀಯರ ಚಿತ್ರಗಳನ್ನು ಇಟ್ಟುಕೊಂಡಿರುತ್ತೇವೆ ಅದರ ಉದ್ದೇಶವೇ ನಾವು ಕೂಡ ಅವರಂತೆ ದೊಡ್ಡ ಸಾಧನೆ ಮಾಡಬೇಕು. ಒಂದು ಗ್ರಾಮವೆಂದರೇ ಅಲ್ಲಿ ಯಾವುದೇ ಜಾತಿ ಧರ್ಮಗಳಿರಬಾರದು, ಎಲ್ಲ ಕೆಟ್ಟ ಪದ್ದತಿಗಳಿರಬಾರದು, ದುಚ್ಚಟಗಳಿಂದ ಕೂಡಿರಬಾರದು, ಸ್ವಚ್ಚವಾದ ಪರಿಸರ ಹೊಂದಿರಬೇಕು. ಈ ರೀತಿಯ ಗ್ರಾಮ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಇಂದು ಒಂದು ಹಳ್ಳಿ ಪೂರ್ಣ ಹಾಳಾಗೊದಿಕ್ಕೆ ಮುಖ್ಯ ಕಾರಣವೇ ಹೆಂಡದ ಅಂಗಡಿಗಳು. ಯುವಜನತೆ ತಾವು ಎಷ್ಟೇ ಸಮಸ್ಯೆಗಳು ಬಂದರೂ ಯಾವುದೇ ಕೆಟ್ಟ ವ್ಯಸನಗಳಿಗೆ ಬಲಿಯಾಗಬೇಡಿ. ಒಮ್ಮೆ ಒಂದು ವ್ಯಸನಕ್ಕೆ ಬಲಿಯಾದರೇ ತಮ್ಮ ಇಡೀ ಜೀವನ ಆ ಚಟದಿಂದ ಹೊರಬರಲು ಸಾಧ್ಯವಿಲ್ಲ. ಇಂದು ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದಂತೆ ಮುಂದಿನ ದಿನಗಳಲ್ಲಿ ನಿಮ್ಮ ಸಾಧನೆಯ ಕಾರ್ಯಕ್ರಮವಾಗಬೇಕಿದೆ. ಗ್ರಾಮ ವಿಕಾಸದ ಮುಖ್ಯಸ್ಥ ಶ್ರೀಧರ್ ಸಾಗರ್ ರವರು ಈ ಗ್ರಾಮಕ್ಕೆ ಬಂದಿರುವುದು ನಿಮ್ಮೆಲ್ಲರ ಅದೃಷ್ಟವೆಂದೇ ಭಾವಿಸುತ್ತೇನೆ. ಮುಂದಿನ 10 ವರ್ಷಗಳಲ್ಲಿ ಇಡಿ ಗುಡಿಬಂಡೆಯನ್ನು ಉನ್ನತವಾದ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡುವ ಗುರಿಯನ್ನು ಗ್ರಾಮ ವಿಕಾಸ ಸಂಸ್ಥೆ ಹೊಂದಿದೆ ಎಂದರು.

         ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಭಾರತಮಾತೆಯ ಚಿತ್ರದೊಂದಿಗೆ ಎತ್ತಿನಗಾಡಿಯಲ್ಲಿ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಂತರ ಒಂದೇ ಸಮಯಕ್ಕೆ 3 ಗೋಷ್ಟಿಗಳನ್ನು ಏರ್ಪಡಿಸಲಾಗಿದೆ. ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ? ಎಂಬ ವಿಷಯದ ಬಗ್ಗೆ ಕೃಷಿಕರ ಗೋಷ್ಠಿ, ಮಾತೃತ್ವ, ನೇತೃತ್ವ, ಕರ್ತೃತ್ವ ವಿಷಯದ ಬಗ್ಗೆ ಮಹಿಳಾ ಗೋಷ್ಠಿ ಹಾಗೂ ಯುವನಡಿಗೆ ಗ್ರಾಮದೆಡೆಗೆ ಎಂಬ ವಿಷಯದ ಬಗ್ಗೆ ಯುವ ಗೋಷ್ಠಿಗಳು ನಡೆದವು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
         
ETV Bharat Logo

Copyright © 2025 Ushodaya Enterprises Pvt. Ltd., All Rights Reserved.