ETV Bharat / state

ಆ್ಯಂಬುಲೆನ್ಸ್​​​ನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶುಶ್ರೂಷಕರು - delivery in ambulance

ಇಂದು ಮುಂಜಾನೆ 3-50ರ ವೇಳೆಯಲ್ಲಿ ಕನಂಪಲ್ಲಿ ಗ್ರಾಮದ ಜ್ಯೋತಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ತೆರಳಿದ್ದಾರೆ. ದಾರಿ ಮಧ್ಯೆಯೇ ಜ್ಯೋತಿಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆ ಶುಶ್ರೂಷಕರಾದ ಮುರಳಿ ಹಾಗೂ ಸೀನಪ್ಪ ಧೈರ್ಯ ತೋರಿ ಹೆರಿಗೆ ಮಾಡಿಸಿದ್ದಾರೆ.

delivery in ambulance
ಆಂಬ್ಯುಲೆನ್ಸ್​​​ನಲ್ಲಿಯೇ ಮಗುವಿಗೆ ಜನ್ಮ....ಶುಶ್ರೂಷಕರಿಂದಲೇ ನಡೆಯಿತು ಹೆರಿಗೆ ಕಾರ್ಯ
author img

By

Published : Oct 16, 2020, 2:20 PM IST

ಚಿಕ್ಕಬಳ್ಳಾಪುರ: ಹೆರಿಗೆಗೆಂದು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯೆಯೇ ಗರ್ಭಿಣಿವೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕನಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆ್ಯಂಬುಲೆನ್ಸ್​​​ನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶುಶ್ರೂಷಕರು

ವಿಶೇಷ ಅಂದರೆ ಆ್ಯಂಬುಲೆನ್ಸ್​​​ನಲ್ಲಿ ಪ್ರಸೂತಿ ತಜ್ಞರು ಇಲ್ಲದಿದ್ದರೂ ಶುಶ್ರೂಷಕರೇ ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೆರಿಗೆ ಮಾಡಿಸಿದ್ದಾರೆ. ಇಂದು ಮುಂಜಾನೆ ಸುಮಾರು 3-50ರ ಸಮಯದಲ್ಲಿ ಗ್ರಾಮದ ಜ್ಯೋತಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ 108 ಆ್ಯಂಬುಲೆನ್ಸ್​​​ಗೆ ಕರೆ ಮಾಡಿದ್ದಾರೆ. ಆದರೆ ಆ್ಯಂಬುಲೆನ್ಸ್​​ನಲ್ಲಿ ಶುಶ್ರೂಷಕರು ಬಿಟ್ಟರೆ ಪ್ರಸೂತಿ ತಜ್ಞರು ಇರಲಿಲ್ಲ. ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಜ್ಯೋತಿಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆ್ಯಂಬುಲೆನ್ಸ್​​​ನಲ್ಲಿದ್ದ ಪೋಷಕರು ತೀವ್ರ ಆತಂಕಗೊಂಡಿದ್ದರು.

ಆದರೆ ಆ್ಯಂಬುಲೆನ್ಸ್​​​ನಲ್ಲಿದ್ದ ಶುಶ್ರೂಷಕರೇ ಧೈರ್ಯ ಮಾಡಿ ಹೆರಿಗೆ ಮಾಡಿಸಿದ್ದು, ಜ್ಯೋತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗುವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಶುಶ್ರೂಷಕರಾದ ಮುರಳಿ ಹಾಗೂ ಸೀನಪ್ಪ ತೋರಿದ ಮಾನವೀಯತೆಗೆ ಸಾರ್ವಜನಿಕರು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ: ಹೆರಿಗೆಗೆಂದು 108 ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುವಾಗ ದಾರಿ ಮಧ್ಯೆಯೇ ಗರ್ಭಿಣಿವೋರ್ವರು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕನಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆ್ಯಂಬುಲೆನ್ಸ್​​​ನಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶುಶ್ರೂಷಕರು

ವಿಶೇಷ ಅಂದರೆ ಆ್ಯಂಬುಲೆನ್ಸ್​​​ನಲ್ಲಿ ಪ್ರಸೂತಿ ತಜ್ಞರು ಇಲ್ಲದಿದ್ದರೂ ಶುಶ್ರೂಷಕರೇ ಮಹಿಳೆಗೆ ಯಾವುದೇ ತೊಂದರೆಯಾಗದಂತೆ ಹೆರಿಗೆ ಮಾಡಿಸಿದ್ದಾರೆ. ಇಂದು ಮುಂಜಾನೆ ಸುಮಾರು 3-50ರ ಸಮಯದಲ್ಲಿ ಗ್ರಾಮದ ಜ್ಯೋತಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ 108 ಆ್ಯಂಬುಲೆನ್ಸ್​​​ಗೆ ಕರೆ ಮಾಡಿದ್ದಾರೆ. ಆದರೆ ಆ್ಯಂಬುಲೆನ್ಸ್​​ನಲ್ಲಿ ಶುಶ್ರೂಷಕರು ಬಿಟ್ಟರೆ ಪ್ರಸೂತಿ ತಜ್ಞರು ಇರಲಿಲ್ಲ. ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆಯೇ ಜ್ಯೋತಿಗೆ ಹೆರಿಗೆ ನೋವು ಹೆಚ್ಚಾಗಿದ್ದು, ಆ್ಯಂಬುಲೆನ್ಸ್​​​ನಲ್ಲಿದ್ದ ಪೋಷಕರು ತೀವ್ರ ಆತಂಕಗೊಂಡಿದ್ದರು.

ಆದರೆ ಆ್ಯಂಬುಲೆನ್ಸ್​​​ನಲ್ಲಿದ್ದ ಶುಶ್ರೂಷಕರೇ ಧೈರ್ಯ ಮಾಡಿ ಹೆರಿಗೆ ಮಾಡಿಸಿದ್ದು, ಜ್ಯೋತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗುವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಶುಶ್ರೂಷಕರಾದ ಮುರಳಿ ಹಾಗೂ ಸೀನಪ್ಪ ತೋರಿದ ಮಾನವೀಯತೆಗೆ ಸಾರ್ವಜನಿಕರು ಅಭಿನಂದಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.