ETV Bharat / state

ಅನರ್ಹ ಶಾಸಕರು ಜನಪ್ರತಿನಿಧಿಗಳಾಗಲಿಕ್ಕೆ ನಾಲಾಯಕ್​​: ಉಮಾಶ್ರೀ

author img

By

Published : Nov 26, 2019, 5:26 PM IST

Updated : Nov 26, 2019, 5:58 PM IST

ಯಾರದ್ರು ಸತ್ತರೆ ಉಪ ಚುನಾವಣೆ ಬರುತ್ತೆ. ಆದರೆ ಈಗ ರಾಜ್ಯದಲ್ಲಿ ಚುನಾವಣೆ ಬಂದಿದೆ. ಆದರೆ ಯಾರು ಸತ್ತಿಲ್ಲಾವಲ್ಲಾ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ವಾಗ್ದಾಳಿ ನಡೆಸಿದರು.

rse
ಅನರ್ಹ ಶಾಸಕರು ನಾಲಾಯಕ್ ರಾಜಕಾರಣಿಗಳು:ನಟಿ ಉಮಾಶ್ರೀ

ಚಿಕ್ಕಬಳ್ಳಾಪುರ: 5 ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಚುನಾವಣೆ ನಾಲಾಯಕ್ ಜನಪ್ರತಿನಿಧಿಗಳಿಂದಾಗಿ ಒಂದೂವರೆ ವರ್ಷಕ್ಕೆ ನಡೆಯುತ್ತಿದೆ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅನರ್ಹ ಶಾಸಕರು ಮತ್ತು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜಿನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಆಮಿಷ ಒಡ್ಡಿ ಶಾಸಕರ ರಾಜೀನಾಮೆ ಕೊಡಿಸಿದ್ದು, ಅನರ್ಹ ಶಾಸಕರು ಕೇವಲ ಮಾತಾನಾಡಲು ಸಾಧ್ಯ. ಅವರಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ನಮ್ಮ ಜೀವನದ ದೊಡ್ಡ ನಾಯಕ. ಒಂದು ಶಕ್ತಿ ಎಂದರು. ಅಲ್ಲದೆ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಅವರ ಜೊತೆ ಸೇರಿದ ಮೇಲೆ ಸುಧಾಕರ್​ಗೆ ಸುಳ್ಳು ಹೇಳೋ ಚಾಳಿ ಬಂದಿದೆ ಎಂದು ಕಿಡಿಕಾರಿದರು.

ಅನರ್ಹ ಶಾಸಕರು ಜನಪ್ರತಿನಿಧಿಗಳಾಗಲಿಕ್ಕೆ ನಾಲಾಯಕ್​​: ಉಮಾಶ್ರೀ
ಬೇರೆ ರಾಜ್ಯಗಳಲ್ಲೂ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಕರ್ನಾಟಕದಲ್ಲಿ ವಾಮಮಾರ್ಗದಿಂದಲೇ ಬಿಜೆಪಿ ಅಧಿಕಾರ ಹಿಡಿದಿದೆ. ಸ್ವಾರ್ಥಕ್ಕಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ರಮೇಶ್ ಕಮಾರ್ ಇವರೆಲ್ಲಾರ ನಡುವಳಿಕೆಗೆ ಬೇಸತ್ತು ಇತಿಹಾಸದಲ್ಲಿ ದಾಖಲಾಗುವ ತೀರ್ಪು ಕೊಟ್ಟಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರದ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಉಮಾಶ್ರೀ ಮನವಿ ಮಾಡಿದರು.

ಚಿಕ್ಕಬಳ್ಳಾಪುರ: 5 ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಚುನಾವಣೆ ನಾಲಾಯಕ್ ಜನಪ್ರತಿನಿಧಿಗಳಿಂದಾಗಿ ಒಂದೂವರೆ ವರ್ಷಕ್ಕೆ ನಡೆಯುತ್ತಿದೆ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅನರ್ಹ ಶಾಸಕರು ಮತ್ತು ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಆಂಜಿನಪ್ಪ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಆಮಿಷ ಒಡ್ಡಿ ಶಾಸಕರ ರಾಜೀನಾಮೆ ಕೊಡಿಸಿದ್ದು, ಅನರ್ಹ ಶಾಸಕರು ಕೇವಲ ಮಾತಾನಾಡಲು ಸಾಧ್ಯ. ಅವರಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ನಮ್ಮ ಜೀವನದ ದೊಡ್ಡ ನಾಯಕ. ಒಂದು ಶಕ್ತಿ ಎಂದರು. ಅಲ್ಲದೆ ಸುಳ್ಳು ಹೇಳುವುದೇ ಬಿಜೆಪಿ ಕೆಲಸ. ಅವರ ಜೊತೆ ಸೇರಿದ ಮೇಲೆ ಸುಧಾಕರ್​ಗೆ ಸುಳ್ಳು ಹೇಳೋ ಚಾಳಿ ಬಂದಿದೆ ಎಂದು ಕಿಡಿಕಾರಿದರು.

ಅನರ್ಹ ಶಾಸಕರು ಜನಪ್ರತಿನಿಧಿಗಳಾಗಲಿಕ್ಕೆ ನಾಲಾಯಕ್​​: ಉಮಾಶ್ರೀ
ಬೇರೆ ರಾಜ್ಯಗಳಲ್ಲೂ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಕರ್ನಾಟಕದಲ್ಲಿ ವಾಮಮಾರ್ಗದಿಂದಲೇ ಬಿಜೆಪಿ ಅಧಿಕಾರ ಹಿಡಿದಿದೆ. ಸ್ವಾರ್ಥಕ್ಕಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ರಮೇಶ್ ಕಮಾರ್ ಇವರೆಲ್ಲಾರ ನಡುವಳಿಕೆಗೆ ಬೇಸತ್ತು ಇತಿಹಾಸದಲ್ಲಿ ದಾಖಲಾಗುವ ತೀರ್ಪು ಕೊಟ್ಟಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರದ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಉಮಾಶ್ರೀ ಮನವಿ ಮಾಡಿದರು.
Intro:ಬಿಜೆಪಿ ಪಕ್ಷ ಆಮಿಶಗಳನ್ನು ಹೊಡ್ಡಿ ಶಾಸಕರಿಗೆ ರಾಜೀನಾಮೆ ಕೊಡಿಸಿದ್ದು 5 ವರ್ಷ ಗಳಿಗೊಮ್ಮೆ ನಡೆಯಬೇಕಿದ್ದ ಚುನಾವಣೆ ನಾಲಾಯಕ್ ರಾಜಕಾರಣಿಗಳಿಂದ ಒಂದು ವರೆ ವರ್ಷಗಳಿಗೆ ನಡೆಯುತ್ತಿದೆ ಮಾಜಿ ಸಚಿವ ಹಾಗೂ ನಟಿ ಉಮಾಶ್ರೀ ಬಿಜೆಪಿ ಪಕ್ಷದ ವಿರುದ್ದ ಗುಡುಗಿದ್ದಾರೆ.


Body:ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಎಂ ಆಂಜಿನಪ್ಪ ಪರ ಬಿರುಸಿನ ಮತಯಾಚನೆಗೆ ಬಂದಿದ್ದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಾದ ಉಮಾಶ್ರೀ ಅನರ್ಹ ಶಾಸಕರ ಬಗ್ಗೆ ಕಿಡಿಕಾರಿದ್ದಾರೆ.

ಅನರ್ಹ ಶಾಸಕರು ಕೇವಲ ಮಾತುಗಳನ್ನು ಮಾತ್ರ ಮಾತಾನಾಡಲು ಸಾಧ್ಯ ಅವರಿಂದ ಏನು ನಿರೀಕ್ಷಿಸಲು ಸಾಧ್ಯವಿಲ್ಲಾ.ಸಿದ್ದರಾಮಯ್ಯ ನವರ ಬಗ್ಗೆ ಜನರು ಮಾತನಾಡುತ್ತಿಲ್ಲಾ ನಮ್ಮ ಜೀವನದ ದೊಡ್ಡ ನಾಯಕ,ಒಂದಯ ಶಕ್ತಿ ಸಿದ್ದರಾಮಯ್ಯ ಹೊಗಳಿದ್ದಾರೆ.

ಸರ್ಕಾರದಲ್ಲಿ ಎಲ್ಲಾ ದಾಖಲೆಗಳು ಸಿಗುತ್ತೆ .ಅಭಿವೃದ್ದಿಗೆ ಎಷ್ಟು ಕೋಟಿ ಹಣ ಸಾಥ್ ಕೊಟ್ಟಿದ್ದಾರೆ.ಸುಳ್ಳು ಹೇಳುವುದೇ ಬಿಜೆಪಿ ಕೆಲಸ ಅವರ ಜೊತೆ ಸೇರಿದ್ಮೇಲೆ ಸುಧಾಕರ್ ಸುಳ್ಳು ಹೇಳೋ ಚಾಳಿ ಬಂದಿದೆ.

ಬೇರೆ ರಾಜ್ಯಗಳಲ್ಲೂ ವಾಮಮಾರ್ಗದಿಂದ ಅಧಿಕಾರ ಹೊಡಿಯಲು ಹೊರಟ್ಟಿದ್ದಾರೆ.ಕರ್ನಾಟಕದಲ್ಲಿ ವಾಮಮಾರ್ಗದಿಂದಲೇ ಅಧಿಕಾರ ಹಿಡಿದಿದೆ ಎಂದು ಬಿಜೆಪಿ ಪಕ್ಷದ ಬಗ್ಗೆ ವಾಗ್ದಾಳಿ ನಡೆಸಿದ್ರು.

ಸ್ವಾರ್ಥಕ್ಕಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ.ಯಾರದ್ರು ಸತ್ತರೇ ಉಪಚುನಾವಣೆ ಬರುತ್ತೆ ಆದರೆ ಈಗ ರಾಜ್ಯದಲ್ಲಿ ಚುನಾವಣೆ ಬಂದಿದೆ.ಆದರೆ ಯಾರು ಸತ್ತಿಲ್ಲಾವಲ್ಲಾ ಎಂದು ಅನರ್ಹ ಶಾಸಕರ ವಗ್ಗೆ ವಾಗ್ದಾಳಿ ನಡೆಸಿದರು.ರಮೇಶ್ ಕಮಾರ್ ಇವರೆಲ್ಲಾರ ನಡುವಳಿಕೆಗೆ ಬೇಸತ್ತು ಇತಿಹಾಸದಂತಹ ತೀರ್ಪು ಕೊಟ್ಟಿದ್ದಾರೆ.ಚಿಕ್ಕಬಳ್ಳಾಪುರದ ಜನತೆ ಕಾಂಗ್ರೆಸ್ ಅಭ್ಯರ್ಥಿಗೆ ಮತವನ್ನು ನೀಡಿ ಜನಾಭಿಪ್ರಾಯ ನೀಡಬೇಕಾಗಿದೆ ಎಂದಯ ಮನವಿ ಮಾಡಿಕೊಂಡ್ರು.



Conclusion:
Last Updated : Nov 26, 2019, 5:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.