ETV Bharat / state

ಚಾಮರಾಜನಗರ : ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿ, ಸ್ಥಳದಲ್ಲೇ ಮಗ ಸಾವು - ಚಾಮರಾಜನಗರ ಟಿಪ್ಪರ್ ಪಲ್ಟಿಯಾಗಿ ಮಗ ಸಾವು

ಮೈಸೂರಿನಿಂದ ನಿನ್ನೆ ರಾತ್ರಿ ಎಂ-ಸ್ಯಾಂಡ್ ತುಂಬಲು ಬರುತ್ತಿದ್ದ ವೇಳೆ ಬೇರೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಬ್ರೇಕ್ ಹಾಕಿದಾಗ ಟಿಪ್ಪರ್ ಪಲ್ಟಿಯಾಗಿದೆ ಎನ್ನಲಾಗಿದೆ..

tipper accident
ಟಿಪ್ಪರ್ ಅಪಘಾತ
author img

By

Published : Jan 9, 2022, 12:31 PM IST

ಚಾಮರಾಜನಗರ : ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂಭಾಗವೇ ಶನಿವಾರ ರಾತ್ರಿ ಸಂಭವಿಸಿದೆ.

ಮೈಸೂರು ಮೂಲದ ಸೈಯದ್ ರಸೂಲ್ (26) ಎಂಬಾತ ಮೃತ ವ್ಯಕ್ತಿ. ಮೃತನ ತಂದೆ ಹಾಗೂ ಚಾಲಕ ಸೈಯದ್ ಅಕ್ರಂ ಪಾಷಾ (55) ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ನಿನ್ನೆ ರಾತ್ರಿ ಎಂ-ಸ್ಯಾಂಡ್ ತುಂಬಲು ಬರುತ್ತಿದ್ದ ವೇಳೆ ಬೇರೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಬ್ರೇಕ್ ಹಾಕಿದಾಗ ಟಿಪ್ಪರ್ ಪಲ್ಟಿಯಾಗಿದೆ ಎನ್ನಲಾಗಿದೆ.

young-man-died-in-tipper-accident-near-gundlupete
ಅಪಘಾತಕ್ಕೀಡಾದ ಟಿಪ್ಪರ್​

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಎಂ-ಸ್ಯಾಂಡ್ ತುಂಬಿದ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಅಸುನೀಗಿದ್ದರು.

ಇದನ್ನೂ ಓದಿ: ಹಾವೇರಿ: ಸಾಲ ನೀಡಲಿಲ್ಲವೆಂದು ಬ್ಯಾಂಕ್​​ಗೆ ಬೆಂಕಿ ಹಚ್ಚಿದ ಭೂಪ

ಚಾಮರಾಜನಗರ : ಅಪ್ಪ ಚಲಾಯಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಸ್ಥಳದಲ್ಲೇ ಮಗ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂಭಾಗವೇ ಶನಿವಾರ ರಾತ್ರಿ ಸಂಭವಿಸಿದೆ.

ಮೈಸೂರು ಮೂಲದ ಸೈಯದ್ ರಸೂಲ್ (26) ಎಂಬಾತ ಮೃತ ವ್ಯಕ್ತಿ. ಮೃತನ ತಂದೆ ಹಾಗೂ ಚಾಲಕ ಸೈಯದ್ ಅಕ್ರಂ ಪಾಷಾ (55) ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ನಿನ್ನೆ ರಾತ್ರಿ ಎಂ-ಸ್ಯಾಂಡ್ ತುಂಬಲು ಬರುತ್ತಿದ್ದ ವೇಳೆ ಬೇರೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ಬ್ರೇಕ್ ಹಾಕಿದಾಗ ಟಿಪ್ಪರ್ ಪಲ್ಟಿಯಾಗಿದೆ ಎನ್ನಲಾಗಿದೆ.

young-man-died-in-tipper-accident-near-gundlupete
ಅಪಘಾತಕ್ಕೀಡಾದ ಟಿಪ್ಪರ್​

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಎಂ-ಸ್ಯಾಂಡ್ ತುಂಬಿದ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಅಸುನೀಗಿದ್ದರು.

ಇದನ್ನೂ ಓದಿ: ಹಾವೇರಿ: ಸಾಲ ನೀಡಲಿಲ್ಲವೆಂದು ಬ್ಯಾಂಕ್​​ಗೆ ಬೆಂಕಿ ಹಚ್ಚಿದ ಭೂಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.