ಕೊಳ್ಳೇಗಾಲ: ಇಲ್ಲಿನ ಕಾವೇರಿ ವನ್ಯ ಜೀವಿ ವಿಭಾಗದ ಕೊತ್ತನೂರು ವನ್ಯ ಜೀವಿ ವಲಯದಲ್ಲಿರುವ ಹಳ್ಳ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹೆಣ್ಣು ಲಂಗೂರ್ ಮಂಗವನ್ನು ಬೇಟೆಯಾಡಿದ್ದ ಆರೋಪಿಗಳನ್ನು ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಳ್ಳನೂರು ಗ್ರಾಮದ ಮಾದೇಶ (40), ರಾಜು ಅಲಿಯಾಸ್ ರಾಜೇಂದ್ರ ಬಂಧಿತ ಆರೋಪಿಗಳು, ಚಿಕ್ಕಲ್ಕೂರು ಗ್ರಾಮದ ಜಡಿಯಪ್ಪ ಪರಾರಿಯಾಗಿರುವ ಆರೋಪಿ.
ಇನ್ನು ಬಂಧಿತರಿಂದ 1 ಬಂದೂಕು, ಲಂಗೂರ್ ಮಂಗದ ಕಳೇಬರ, ಮದ್ದು ಗುಂಡುಗಳು, ತಲೆ ಬ್ಯಾಟರಿ, ಮೊಬೈಲ್, 3,100 ರೂ. ನಗದು ಹಾಗೂ ಕಬ್ಬಿಣದ ಮಚ್ಚುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆರೋಪಿಯ ಸೆರೆಗೆ ಬಲೆ ಬಿಸಿದ್ದಾರೆ.