ಚಾಮರಾಜನಗರ: ಅಧಿಕಾರಿಗಳೆಂದರೆ ಕಾರಿನಲ್ಲಿ ಬಂದು, ಎಸಿ ಕಚೇರಿಯಲ್ಲಿ ಕೂರುವವರೇ ಹೆಚ್ಚು. ಆದ್ರೆ ಈ ಮಾತಿಗೆ ಅಪವಾದ ಎಂಬಂತಿದ್ದಾರೆ ಇಲ್ಲೋರ್ವ ಸಿಇಒ.
ಹೌದು, ಚಾಮರಾಜನಗರ ಜಿ.ಪಂ. ಸಿಇಒ ಕೆ.ಎಸ್. ಲತಾಕುಮಾರಿ ಸಂತೇಮರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾವುದವಾಡಿ ಗ್ರಾಮದ ಶ್ಯಾಮಬಸವಯ್ಯನ ಕಟ್ಟೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ವೇಳೆ ಶ್ರಮದಾನ ಸ್ವತಃ ಮಾಡಿ ಕಾರ್ಮಿಕರಿಗೆ ಆತ್ಮವಿಶ್ವಾಸ ತುಂಬಿದರು.
ಗ್ರಾ.ಪಂ. ಭೇಟಿ ವೇಳೆ ದಿಢೀರನೇ ಕಾಮಗಾರಿ ಪರಿಶೀಲಿಸಿ ಕಾರ್ಮಿಕರೊಂದಿಗೆ ಸೇರಿ ಹೂಳೆತ್ತಿ ಗ್ರಾಮೀಣ ಜನರಿಗೆ ನರೇಗಾ ಯೋಜನೆ ಒಂದು ವರದಾನ. ಆರ್ಥಿಕ ಸ್ವಾವಲಂಬನೆಯನ್ನು ಉದ್ಯೋಗ ಖಾತ್ರಿ ಮೂಲಕ ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇನ್ನು, ತಮ್ಮೊಂದಿಗೆ ಕಾರ್ಮಿಕರಾಗಿ ಬೆರೆತು ಸರ್ಕಾರದ ಯೋಜನೆ ಬಗ್ಗೆ ತಿಳಿಸಿಕೊಟ್ಟ ಸಿಇಒ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.