ETV Bharat / state

ಮಾದಪ್ಪನ ಕ್ಷೇತ್ರ ಅಭಿವೃದ್ಧಿಗೆ ಸುರೇಶ್​ ಕುಮಾರ್ ಸಭೆ...ಸಚಿವರ ಮನಸೆಳೆದ 'ಸಾಂಬಾರ್' ಬಸವಣ್ಣ!

author img

By

Published : Jan 23, 2020, 11:38 PM IST

ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮಾದಪ್ಪನ ಕ್ಷೇತ್ರ ಅಭಿವೃದ್ಧಿಗೆ ಸುರೇಶ್​ ಕುಮಾರ್ ಸಭೆ
Suresh kumar made meeting

ಚಾಮರಾಜನಗರ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬೆಟ್ಟದ ನಾಗಮಲೆ ಭವನದಲ್ಲಿ ಸಭೆ ನಡೆಸಿದ ಸಚಿವರು, ಲಕ್ಷಾಂತರ ಭಕ್ತರು ಆಗಮಿಸುವ ಬೆಟ್ಟದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೊಬೈಲ್ ನೆಟ್​ವರ್ಕ್​ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ 20 ದಿನದ ಗಡುವು ನೀಡಿದರು. ವಿಶೇಷ ದಿನಗಳಲ್ಲಿ ಮೂರು ವಿವಿಧ ಕಂಪನಿಗಳು ನೆಟ್​ವರ್ಕ್​ ನೀಡಲು ಮುಂದಾಗಿರುವ ಕುರಿತು ಮಾಹಿತಿ ನೀಡಿದರು.

Suresh kumar made meeting
ಸಚಿವರಿಂದ ಪರಿಶೀಲನೆ

ಕಳೆದ ಎರಡು ವರ್ಷಗಳಿಂದ ನಿವೇಶನದ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಮಹದೇಶ್ವರ ಪ್ರತಿಮೆ ಕಾಮಗಾರಿಗೆ ಒಂದು ಎಕರೆ ಜಮೀನು ಪ್ರಾಧಿಕಾರದ ಹೆಸರಲ್ಲಿನಲ್ಲಿ ಖರೀದಿಸಿದ್ದು, ಮುಂದಿನವಾರ ಗುತ್ತಿಗೆದಾರರಿಗೆ ಒಪ್ಪಂದ ಕರಾರು ಮಾಡಿಕೊಟ್ಟು ಕಾಮಗಾರಿಯನ್ನು 2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 132x62 ಮೀ ಎತ್ತರಕ್ಕೆ ಪೀಠವನ್ನು ನಿರ್ಮಾಣ ಮಾಡಿ ಇದರ ಸುತ್ತಲು ಒಳಭಾಗದಲ್ಲಿ 15 ಸ್ಥಳಗಳಲ್ಲಿ ಮದೇಶ್ವರನ ಜೀವನ ಚರಿತ್ರೆಯನ್ನು ಆಡಿಯೋ ಮೂಲಕ ಬಿಂಬಿಸಲಾಗುವುದು ಎಂದರು.

ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಈಗಾಗಲೇ 22 ಕೋಟಿ ವೆಚ್ಚದಲ್ಲಿ ತಾಳಬೆಟ್ಟದಿಂಧ ಖತ್ತಿ ಪವಾಡದವರೆಗೆ ಸುಮಾರು 7.60 ಕಿಮೀ ಅನಾಯಾಸವಾಗಿ ನಡೆದು ಬರಲು ಮೆಟ್ಟಿಲುಗಳ ನಿರ್ಮಾಣ ಹಾಗೂ ಮಾರ್ಗ ಮಧ್ಯದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರಿಂದ ಪರಿಶೀಲನೆ: ಸಭೆಗೂ ಮುನ್ನ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ 512 ಕೊಠಡಿಗಳ ಕಾಮಗಾರಿ ಮೂರು ವರ್ಷಗಳಿಂದ ನಡೆಯುತ್ತಿದ್ದು, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಸದ ಗುತ್ತಿಗೆದಾರರಿಗೆ ಆಗಸ್ಟ್ ತಿಂಗಳ ಒಳಗಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹನೂರು ಶಾಸಕ ಆರ್.ನರೇಂದ್ರ, ಡಿಸಿ ಬಿ.ಬಿ.ಕಾವೇರಿ, ಎಸ್ಪಿ ಎಚ್.ಡಿ.ಆನಂದಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳಿದ್ದರು‌.

minister tweet
ಸಚಿವರ ಟ್ವೀಟ್​

ಮನ ಕದ್ದ ಬಸವಣ್ಣ: ಸಾಮಾಜಿಕ ಜಾಲಾತಣದಲ್ಲಿ ಸಕ್ರಿಯರಾಗಿರುವ ಸುರೇಶ್ ಕುಮಾರ್ ಬೆಟ್ಟದಲ್ಲಿನ‌ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು 'ನನ್ನ ಮನ ಮುಟ್ಟಿದ ಸನ್ನಿವೇಶ' ಎಂದು ಫೇಸ್​​​ಬುಕ್​ ಮತ್ತು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಅಡಿಗೆ ಮನೆ ಪರಿಶೀಲನೆ ವೇಳೆ ಸಾಂಬಾರು ತಯಾರಿಸುತ್ತಿದ್ದ ಬಸವಣ್ಣ ಎಂಬ ಬಾಣಸಿಗನನ್ನು ಮಾತನಾಡಿಸಿದ ಸಚಿವರು, ಕಳೆದ 32 ವರ್ಷಗಳಿಂದ ದಾಸೋಹದ ಅಡಿಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ " ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು" ಎಂಬ ಬಾಣಸಿಗನ ಪ್ರತಿಕ್ರಿಯೆ ಮನಮುಟ್ಟಿತು ಎಂದು ಬರೆದುಕೊಂಡಿದ್ದಾರೆ.

ಚಾಮರಾಜನಗರ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬೆಟ್ಟದ ನಾಗಮಲೆ ಭವನದಲ್ಲಿ ಸಭೆ ನಡೆಸಿದ ಸಚಿವರು, ಲಕ್ಷಾಂತರ ಭಕ್ತರು ಆಗಮಿಸುವ ಬೆಟ್ಟದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೊಬೈಲ್ ನೆಟ್​ವರ್ಕ್​ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ 20 ದಿನದ ಗಡುವು ನೀಡಿದರು. ವಿಶೇಷ ದಿನಗಳಲ್ಲಿ ಮೂರು ವಿವಿಧ ಕಂಪನಿಗಳು ನೆಟ್​ವರ್ಕ್​ ನೀಡಲು ಮುಂದಾಗಿರುವ ಕುರಿತು ಮಾಹಿತಿ ನೀಡಿದರು.

Suresh kumar made meeting
ಸಚಿವರಿಂದ ಪರಿಶೀಲನೆ

ಕಳೆದ ಎರಡು ವರ್ಷಗಳಿಂದ ನಿವೇಶನದ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಮಹದೇಶ್ವರ ಪ್ರತಿಮೆ ಕಾಮಗಾರಿಗೆ ಒಂದು ಎಕರೆ ಜಮೀನು ಪ್ರಾಧಿಕಾರದ ಹೆಸರಲ್ಲಿನಲ್ಲಿ ಖರೀದಿಸಿದ್ದು, ಮುಂದಿನವಾರ ಗುತ್ತಿಗೆದಾರರಿಗೆ ಒಪ್ಪಂದ ಕರಾರು ಮಾಡಿಕೊಟ್ಟು ಕಾಮಗಾರಿಯನ್ನು 2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. 132x62 ಮೀ ಎತ್ತರಕ್ಕೆ ಪೀಠವನ್ನು ನಿರ್ಮಾಣ ಮಾಡಿ ಇದರ ಸುತ್ತಲು ಒಳಭಾಗದಲ್ಲಿ 15 ಸ್ಥಳಗಳಲ್ಲಿ ಮದೇಶ್ವರನ ಜೀವನ ಚರಿತ್ರೆಯನ್ನು ಆಡಿಯೋ ಮೂಲಕ ಬಿಂಬಿಸಲಾಗುವುದು ಎಂದರು.

ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಈಗಾಗಲೇ 22 ಕೋಟಿ ವೆಚ್ಚದಲ್ಲಿ ತಾಳಬೆಟ್ಟದಿಂಧ ಖತ್ತಿ ಪವಾಡದವರೆಗೆ ಸುಮಾರು 7.60 ಕಿಮೀ ಅನಾಯಾಸವಾಗಿ ನಡೆದು ಬರಲು ಮೆಟ್ಟಿಲುಗಳ ನಿರ್ಮಾಣ ಹಾಗೂ ಮಾರ್ಗ ಮಧ್ಯದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವರಿಂದ ಪರಿಶೀಲನೆ: ಸಭೆಗೂ ಮುನ್ನ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ 512 ಕೊಠಡಿಗಳ ಕಾಮಗಾರಿ ಮೂರು ವರ್ಷಗಳಿಂದ ನಡೆಯುತ್ತಿದ್ದು, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಸದ ಗುತ್ತಿಗೆದಾರರಿಗೆ ಆಗಸ್ಟ್ ತಿಂಗಳ ಒಳಗಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹನೂರು ಶಾಸಕ ಆರ್.ನರೇಂದ್ರ, ಡಿಸಿ ಬಿ.ಬಿ.ಕಾವೇರಿ, ಎಸ್ಪಿ ಎಚ್.ಡಿ.ಆನಂದಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳಿದ್ದರು‌.

minister tweet
ಸಚಿವರ ಟ್ವೀಟ್​

ಮನ ಕದ್ದ ಬಸವಣ್ಣ: ಸಾಮಾಜಿಕ ಜಾಲಾತಣದಲ್ಲಿ ಸಕ್ರಿಯರಾಗಿರುವ ಸುರೇಶ್ ಕುಮಾರ್ ಬೆಟ್ಟದಲ್ಲಿನ‌ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು 'ನನ್ನ ಮನ ಮುಟ್ಟಿದ ಸನ್ನಿವೇಶ' ಎಂದು ಫೇಸ್​​​ಬುಕ್​ ಮತ್ತು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಅಡಿಗೆ ಮನೆ ಪರಿಶೀಲನೆ ವೇಳೆ ಸಾಂಬಾರು ತಯಾರಿಸುತ್ತಿದ್ದ ಬಸವಣ್ಣ ಎಂಬ ಬಾಣಸಿಗನನ್ನು ಮಾತನಾಡಿಸಿದ ಸಚಿವರು, ಕಳೆದ 32 ವರ್ಷಗಳಿಂದ ದಾಸೋಹದ ಅಡಿಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ " ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು" ಎಂಬ ಬಾಣಸಿಗನ ಪ್ರತಿಕ್ರಿಯೆ ಮನಮುಟ್ಟಿತು ಎಂದು ಬರೆದುಕೊಂಡಿದ್ದಾರೆ.

Intro:ಮಾದಪ್ಪನ ಕ್ಷೇತ್ರ ಅಭಿವೃದ್ಧಿಗೆ ಸುರೇಶಕುಮಾರ್ ಸಭೆ...ಸಚಿವರ ಮನಸೆಳೆದ 'ಸಾಂಬಾರ್' ಬಸವಣ್ಣ!

ಚಾಮರಾಜನಗರ: ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಅಧಿಕಾರಿಗಳೊಂದಿಗೆ ಬೆಟ್ಟದ ನಾಗಮಲೆ ಭವನದಲ್ಲಿ ಸಭೆ ನಡೆಸಿದರು.

Body:ಲಕ್ಷಾಂತರ ಭಕ್ತರು ಆಗಮಿಸುವ ಬೆಟ್ಟದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ತಾತ್ಕಾಲಿಕ ಪರಿಹಾರಕ್ಕಾಗಿ 20 ದಿನದ ಗಡುವು ನೀಡಿರುವ ಸಚಿವರು ವಿಶೇಷ ದಿನಗಳಲ್ಲಿ ಮೂರು ವಿವಿಧ ಕಂಪನಿಗಳು ನೆಟ್ವರ್ಕ್ ನೀಡಲು ಮುಂದಾಗಿರುವ ಕುರಿತು ಮಾಹಿತಿ ನೀಡಿದರು.

ಇನ್ನು, ಕಳೆದ ಎರಡು ವರ್ಷಗಳಿಂದ ನಿವೇಶನದ ಕೊರತೆಯಿಂದ ನನೆಗುದಿಗೆ ಬಿದ್ದಿದ್ದ ಮಹದೇಶ್ವರ ಪ್ರತಿಮೆ ಕಾಮಗಾರಿಗೆ ಒಂದು ಎಕರೆ ಜಮೀನು ಪ್ರಾಧಿಕಾರದ ಹೆಸರಲ್ಲಿನಲ್ಲಿ ಖರೀದಿಸಿದ್ದು , ಮುಂದಿನ ವಾರ ಗುತ್ತಿಗೆದಾರರಿಗೆ ಒಪ್ಪಂದ ಕರಾರು ಮಾಡಿಕೊಟ್ಟು ಕಾಮಗಾರಿಯನ್ನು 2 ಕೋಟಿ ವೆಚ್ಚದಲ್ಲಿ ಕೈಗೇತ್ತಿಕೊಳ್ಳಲಾಗುವುದು. 132*62 ಎತ್ತರಕ್ಕೆ ಪೀಠವನ್ನು ನಿರ್ಮಾಣ ಮಾಡಿ ಇದರ ಸುತ್ತಲು ಒಳಭಾಗದಲ್ಲಿ 15 ಸ್ಥಳಗಳಲ್ಲಿ ಮಾದೇಶ್ವರನ ಜೀವನ ಚರಿತ್ರೆಯನ್ನು ಆಡಿಯೋ ಮೂಲಕ ಬಿಂಬಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಈಗಾಗಲೇ 22 ಕೋಟಿ ವೆಚ್ಚದಲ್ಲಿ ತಾಳಬೆಟ್ಟದಿಂಧ ಖತ್ತಿ ಪವಾಡದವರೆಗೆ ಸುಮಾರು 7.60 ಕಿಮೀ ಅನಾಯಾಸವಾಗಿ ನಡೆದು ಬರಲು ಮೆಟ್ಟಿಲುಗಳ ನಿರ್ಮಾಣ ಹಾಗೂ ಮಾರ್ಗ ಮಧ್ಯದಲ್ಲಿ ಶುದ್ದ ಕುಡಿಯುವ ನೀರು, ಶೌಚಾಲಯ, ಹಾಗೂ ವಿಶ್ರಾಂತಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲು ಈ ಯೋಜನೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಭೆಗೂ ಮುನ್ನ ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ 512 ಕೊಠಡಿಗಳ ಕಾಮಗಾರಿ ಮೂರು ವರ್ಷಗಳಿಂದ ನಡೆಯುತ್ತಿದೆ ನಿಗಧಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಗುತ್ತಿಗೆದಾರರು ಆಗಸ್ಟ್ ತಿಂಗಳ ಒಳಗಡೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತರಾಟೆಗೆ ತೆಗೆದುಕೊಂಡರು.

ಬುಧವಾರವಷ್ಟೇ ಮಾದಪ್ಪನ ಬೆಟ್ಟದಲ್ಲಿನ ನೆಟ್ವರ್ಕ್ ಸಮಸ್ಯೆಗೆ ಸಚಿವರು ಇತಿಶ್ರೀ ಹಾಡುವರೇ ಎಂದು ಈಟಿವಿ ಭಾರತ ವರದಿ ಮಾಡಿ ಸಭೆ ನಡೆಸಲಿದ್ದ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿತ್ತು.

ಹನೂರು ಶಾಸಕ ಆರ್.ನರೇಂದ್ರ, ಡಿಸಿ ಬಿ.ಬಿ.ಕಾವೇರಿ, ಎಸ್ಪಿ ಎಚ್.ಡಿ.ಆನಂದಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳಿದ್ದರು‌.

ಮನಕದ್ದ ಬಸವಣ್ಣ: ಸಾಮಾಜಿಕ ಜಾಲಾತಣದಲ್ಲಿ ಸಕ್ರಿಯರಾಗಿರುವ ಸುರೇಶ್ ಕುಮಾರ್ ಬೆಟ್ಟದಲ್ಲಿನ‌ ದಾಸೋಹ ಕೊಠಡಿಗೆ ತೆರಳಿದಾಗಿನ ಪ್ರಸಂಗವೊಂದನ್ನು 'ನನ್ನ ಮನ ಮುಟ್ಟಿದ ಸನ್ನಿವೇಶ' ಎಂದು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Conclusion:ಅಡಿಗೆ ಮನೆ ಪರಿಶೀಲನೆ ವೇಳೆ ಸಾಂಬಾರು ತಯಾರಿಸುತ್ತಿದ್ದ ಬಸವಣ್ಣ ಎಂಬ ಬಾಣಸಿಗ ನನ್ನು ಮಾತನಾಡಿಸಿದ ಸಚಿವರು ಕಳೆದ 32 ವರ್ಷಗಳಿಂದ ದಾಸೋಹದ ಅಡಿಗೆ ಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ " ಆ ಮಾದಪ್ಪ ನನಗೆ ಕೊಟ್ಟಿರುವ ಅವಕಾಶ ಇದು" ಎಂಬ ಬಾಣಸಿಗನ ಪ್ರತಿಕ್ರಿಯೆ ಮನಮುಟ್ಟಿತು ಎಂದು ಬರೆದುಕೊಂಡಿದ್ದಾರೆ.
ಅವರ ವಿನಮ್ರತೆಗೆ ನಾನು ಶರಣು ಶರಣೆಂದೆ ಎಂದು ಬಸವಣ್ಣನ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.