ETV Bharat / state

ಬಾಲ ಬಿಚ್ಚದಂತೆ ಮಳೆಯಲ್ಲೇ ರೌಡಿಗಳ ಚಳಿ ಬಿಡಿಸಿದ ಎಸ್​​ಪಿ - ರೌಡಿಶೀಟರ್​ ಪಟ್ಟಿ

ಅಶಾಂತಿ, ಕೋಮುಗಲಭೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರಿಕೆ ನೀಡಲು ಅಪರಾಧ ಹಿನ್ನೆಲೆಯುಳ್ಳ ರೌಡಿಶೀಟರ್​ಗಳನ್ನು ಕರೆಸಿ ಪರೇಡ್​ ನಡೆಸಲಾಯಿತು.

Rowdy shearer pared in chamarajnagar
author img

By

Published : Aug 31, 2019, 8:49 PM IST

ಚಾಮರಾಜನಗರ: ವಿಧ್ವಂಸಕ ಕಾರ್ಯ, ಪೈಶಾಚಿಕ ಕೃತ್ಯ, ಅಶಾಂತಿ, ಕೋಮುಗಲಭೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರಿಕೆ ನೀಡಲು ಕರೆಸಿದ ಗೂಂಡಾಗಳಿಗೆ ಜಿಲ್ಲಾ ಎಸ್​ಪಿ ಸಖತ್​ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಸಿದ ರೌಡಿಶೀಟರ್​​​ಗಳ ಪರೇಡ್​ನಲ್ಲಿ ಎಸ್​ಪಿ ಎಚ್.ಡಿ.ಆನಂದಕುಮಾರ್ ಅವರು ಗಂಭೀರವಾಗಿರುವಂತೆ ಗೂಂಢಾಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ರೌಡಿಶೀಟರ್​ ಪರೇಡ್​

ಅಪರಾಧ ಕೃತ್ಯಗಳನ್ನು ಎಸಗಿದ್ದರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪ್ರಸ್ತುತ ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿದಾಗ ನಗುತ್ತಿದ್ದ ಗೂಂಡಾಗೆ ಎಸ್​ಪಿ ಕಪಾಳ ಮೋಕ್ಷ ಮಾಡಿ ಈಗ ನಗು ಎಂದು ಗುರಾಯಿಸಿದರು.

ಎಲ್ಲರ ಕೈಯಲ್ಲಿ ಕಡಗ, ಕತ್ತಿಗೆ ಚೈನ್​ ಹಾಕಿದ್ದವರಿಗೆ ಮುಂದೆ ಏನನ್ನೂ ಹಾಕಿಕೊಳ್ಳಬಾರದು. ಕೆಲವರು ಕೊಟ್ಟ ಉಡಾಫೆ ಉತ್ತರಕ್ಕೆ ಸುರಿಯುವ ಮಳೆಯಳ್ಳೇ ಚಳಿ ಬಿಡಿಸಿದರು. ಆಕಸ್ಮಿಕ ಘಟನೆಯಲ್ಲಿ ಎರಡೂ ಕಣ್ಣು ಕಳೆದುಕೊಂಡ ಹೊಂಗನೂರಿನ ರೌಡಿಶೀಟರ್​ನ ಹೆಸರನ್ನು ರೌಡಿಶೀಟರ್​ ಪಟ್ಟಿಯಿಂದ ತೆಗೆಯುವಂತೆ ಪಿಎಸ್​ಐಗೆ ಸೂಚಿಸಿದರು.

ಗಲಾಟೆ, ದೊಂಬಿ ನಡೆಸದೇ ಶಾಂತಿಯಿಂದ ಇರಬೇಕು. ಬಾಲ ಬಿಚ್ಚಿದರೇ ಕಟ್​ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಚಾಮರಾಜನಗರ ಉಪವಿಭಾಗದಲ್ಲಿ 410 ರೌಡಿಶೀಟರ್​ಗಳಲ್ಲಿ 168 ಮಂದಿ ಮಾತ್ರ ಹಾಜರಾಗಿದ್ದರು.

ಚಾಮರಾಜನಗರ: ವಿಧ್ವಂಸಕ ಕಾರ್ಯ, ಪೈಶಾಚಿಕ ಕೃತ್ಯ, ಅಶಾಂತಿ, ಕೋಮುಗಲಭೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರಿಕೆ ನೀಡಲು ಕರೆಸಿದ ಗೂಂಡಾಗಳಿಗೆ ಜಿಲ್ಲಾ ಎಸ್​ಪಿ ಸಖತ್​ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಸಿದ ರೌಡಿಶೀಟರ್​​​ಗಳ ಪರೇಡ್​ನಲ್ಲಿ ಎಸ್​ಪಿ ಎಚ್.ಡಿ.ಆನಂದಕುಮಾರ್ ಅವರು ಗಂಭೀರವಾಗಿರುವಂತೆ ಗೂಂಢಾಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ರೌಡಿಶೀಟರ್​ ಪರೇಡ್​

ಅಪರಾಧ ಕೃತ್ಯಗಳನ್ನು ಎಸಗಿದ್ದರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪ್ರಸ್ತುತ ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿದಾಗ ನಗುತ್ತಿದ್ದ ಗೂಂಡಾಗೆ ಎಸ್​ಪಿ ಕಪಾಳ ಮೋಕ್ಷ ಮಾಡಿ ಈಗ ನಗು ಎಂದು ಗುರಾಯಿಸಿದರು.

ಎಲ್ಲರ ಕೈಯಲ್ಲಿ ಕಡಗ, ಕತ್ತಿಗೆ ಚೈನ್​ ಹಾಕಿದ್ದವರಿಗೆ ಮುಂದೆ ಏನನ್ನೂ ಹಾಕಿಕೊಳ್ಳಬಾರದು. ಕೆಲವರು ಕೊಟ್ಟ ಉಡಾಫೆ ಉತ್ತರಕ್ಕೆ ಸುರಿಯುವ ಮಳೆಯಳ್ಳೇ ಚಳಿ ಬಿಡಿಸಿದರು. ಆಕಸ್ಮಿಕ ಘಟನೆಯಲ್ಲಿ ಎರಡೂ ಕಣ್ಣು ಕಳೆದುಕೊಂಡ ಹೊಂಗನೂರಿನ ರೌಡಿಶೀಟರ್​ನ ಹೆಸರನ್ನು ರೌಡಿಶೀಟರ್​ ಪಟ್ಟಿಯಿಂದ ತೆಗೆಯುವಂತೆ ಪಿಎಸ್​ಐಗೆ ಸೂಚಿಸಿದರು.

ಗಲಾಟೆ, ದೊಂಬಿ ನಡೆಸದೇ ಶಾಂತಿಯಿಂದ ಇರಬೇಕು. ಬಾಲ ಬಿಚ್ಚಿದರೇ ಕಟ್​ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಚಾಮರಾಜನಗರ ಉಪವಿಭಾಗದಲ್ಲಿ 410 ರೌಡಿಶೀಟರ್​ಗಳಲ್ಲಿ 168 ಮಂದಿ ಮಾತ್ರ ಹಾಜರಾಗಿದ್ದರು.

Intro:ಗೂಂಡಾಗಳ ಚಳಿ ಬಿಡಿಸಿದ ಗಡಿಜಿಲ್ಲೆ ಎಸ್ಪಿ: ಬಿಸಿ-ಬಿಸಿ ಕಜ್ಜಾಯ ನೀಡಿ ರೌಡಿಗಳ ರಿಪೇರಿ!

ಚಾಮರಾಜನಗರ:ವಿಧ್ಚಂಸಕ ಕಾರ್ಯದಲ್ಲಿ ತೊಡಗಿರುವರು, ಪೈಶಾಚಿಕ ಕೃತ್ಯ ಎಸಗಿದವರು ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆ ಭಂಗ ಉಂಟು ಮಾಡುವವರಿಗೆ ಚಾಮರಾಜನಗರ ಎಸ್ ಪಿ ಎಚ್.ಡಿ.ಆನಂದಕುಮಾರ್ ಸಖತ್ ಡ್ರಿಲ್ ಮಾಡಿದರು.

Body:ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿ ಕಮ್ಯೂನಲ್ ಗೂಂಡಾನಿಗೆ ಕಪಾಲಕ್ಕೆ ಬಿಗಿದು ಗಂಭೀರವಾಗಿರುವಂತೆ ತಿಳಿಹೇಳಿದರು.

ಚಾಮರಾಜನಗರ ಉಪವಿಭಾಗದಲ್ಲಿನ ೪೧೦ ಮಂದಿ ರೌಡಿಶೀಟರ್ ಗಳಲ್ಲಿ ೧೬೮ ಮಂದಿ ಹಾಜರಾಗಿದ್ದರು. ಅಪರಾಧ ಹಿನ್ನೆಲೆ, ಈಗಿನ ಚಟುವಟಿಕೆಗಳನ್ನು ಕೇಳುತ್ತಾ ಕೆಲವು ಗೂಂಡಾಗಳಿಗೆ ಲಾಠಿ ಏಟಿನ ರುಚಿಯನ್ನು ತೋರಿಸಿದರು.

ಎಲ್ಲರ ಕೈಗಳು, ಕಡಗ, ಕತ್ತಿಗೆ ಚೈನ್ ಗಳು,ಉಢಾಫೆ ರೀತಿ ಉತ್ತರ ಕೊಟ್ಟವರಿಗೆ ಮೈಚಳಿ ಬಿಡಿಸಿ ಧೋ ಎಂದು ಸುರಿಯುವ ಮಳೆಯ ನಡುವೆಯೂ ವಿಧ್ವಂಸಕ ಶಕ್ತಿಗಳು ಬೆವರುವಂತೆ ಮಾಡಿದರು.

ಈ ವೇಳೆ ರೌಡಿಶೀಟರ್ ಆಗಿದ್ದ ಹೊಂಗನೂರಿನ ವ್ಯಕ್ತಿಯೋರ್ವ ಆಕಸ್ಮಿಕ ಘಟನೆಯಲ್ಲಿ ಎರಡು ಕಣ್ಣು ಕಳೆದುಕೊಂಡಿರುವುದರಿಂದ ಆತನ ಹೆಸರನ್ನು ರೌಡಿಗಳ ಪಟ್ಟಿಯಿಂದ ತೆಗೆಯುವಂತೆ ರಾಮಸಮುದ್ರ ಪಿಎಸ್ ಐಗೆ ಸೂಚಿಸಿದರು.

Conclusion:ಯಾವುದೇ ಗಲಾಟೆ, ದೊಂಬಿ ನಡೆಸದೇ ಶಾಂತಿಯಿಂದ ಇರಬೇಕು, ಬಾಲ ಬಿಚ್ಚಿದರೇ ಪೊಲೀಸರ ಮತ್ತೊಂದು ರೀತಿಯ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.