ETV Bharat / state

ಬಂಡೀಪುರದಲ್ಲಿ ಪ್ಲಾಸ್ಟಿಕ್​ ರಾಕ್ಷಸನನ್ನು ಹತ್ತಿಕ್ಕಲು ಜಾಗೃತಿ... 2.5ತಿಂಗಳಲ್ಲಿ 4ಲಕ್ಷ ದಂಡ ಸಂಗ್ರಹ - undefined

ಇತ್ತೀಚಿನ ದಿನಗಳಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಪ್ಲಾಸ್ಟಿಕ್ ಹೆಚ್ಚಾಗುತ್ತಿದ್ದು, ಇಲ್ಲಿಗೆ ಬರುವಂತಹ ಪ್ರವಾಸಿಗರು ತಿಂಡಿ,ತಿನಿಸುಗಳ ಕವರ್​ಗಳನ್ನು, ಪ್ಲಾಸ್ಟಿಕ್​ ಬಾಟಲ್​ಗಳನ್ನು ಎಲ್ಲಿ ಬೇಕಾದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಕಾಡು ಮಾಲಿನ್ಯಗೊಳ್ಳುತ್ತಿದೆ ಎಂದು ಕಸ ವಿಲೇವಾರಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಅಭಯಾರಣ್ಯ
author img

By

Published : Jun 22, 2019, 5:37 PM IST

ಚಾಮರಾಜನಗರ : ಬಂಡೀಪುರ ಅಭಯಾರಣ್ಯದಲ್ಲಿ ಪ್ಲಾಸ್ಟಿಕ್ ಕಂಟಕ ಹೆಚ್ಚಾಗುತ್ತಿದ್ದು, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗಳು ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು, ಎರಡೇ ವಾರಕ್ಕೆ ಟ್ರ್ಯಾಕ್ಟರ್​​ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಕಸ ವಿಲೇವಾರಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊಟಿ, ವೈನಾಡು, ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡುವ ಪ್ರವಾಸಿಗರು ನೀರಿನ ಬಾಟೆಲ್, ತಿಂಡಿ, ತಿನಿಸಿನ ಪ್ಲಾಸ್ಟಿಕ್ ಕವರ್​ಗಳನ್ನು ಅಲ್ಲಲ್ಲಿಯೇ ಬೀಸಾಡುತ್ತಿದ್ದು, ರಾಶಿ ರಾಶಿ ಕಸ ಅಲ್ಲಲ್ಲಿ ತುಂಬಿಕೊಂಡಿದೆ. ಈ ಕಸವನ್ನು ಆಯಲೆಂದೇ 10 ಮಂದಿ ಕೆಲಸಗಾರರನ್ನು ನಿಯೋಜನೆಗೊಳಿಸಲಾಗಿದ್ದು, ಬಂಡೀಪುರ ವಲಯದಲ್ಲಿ ನಾಲ್ವರು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಾಲ್ವರು ಮತ್ತು ಇಬ್ಬರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ‌.

Bhandipura
ಕಸ ಕಲೆ ಹಾಕುತ್ತಿರುವ ಪೌರ ಕಾರ್ಮಿಕರು

ಹೆಚ್ಚುತ್ತಿದೆ ದಂಡದ ಮೊತ್ತ:
ಕಾಡಿಗೆ ಪ್ಲಾಸ್ಟಿಕ್ ಕಂಟಕವಾಗುತ್ತಿರುವ ಕುರಿತು ಬಂಡೀಪುರ ಹುಲಿ ಯೋಜನೆ ಸಿಎಫ್​ಒ ಬಾಲಚಂದ್ರ ಈಟಿವಿ ಭಾರತ್​ನೊಂದಿಗೆ ಮಾತನಾಡಿ, ರಸ್ತೆ ಪಕ್ಕ ಕಸ ಬಿಸಾಡುವರು, ಸೆಲ್ಪಿ ಕ್ಲಿಕ್ಕಿಸುವುದು, ತಿಂಡಿ ತಿನಿಸು ನೀಡುವವರಿಗೆ ದಂಡ ವಿಧಿಸಿ ಮುಂದೆಂದೂ ಈ ತಪ್ಪನ್ನು ಮಾಡದಂತೆ ಅರಿವು ಮೂಡಿಸಲಾಗುತ್ತಿದೆ. ಎರಡೂವರೆ ತಿಂಗಳಿಗೆ 4 ಲಕ್ಷದ 19 ಸಾವಿರ ರೂ. ಹಣ ಸಂಗ್ರಹವಾಗಿದೆ. ನಮ್ಮದು ದಂಡ ಸಂಗ್ರಹಿಸುವ ಉದ್ದೇಶವಲ್ಲ. ಅವರು ಮುಂದೆ ಈ ರೀತಿಯ ತಪ್ಪನ್ನು ಮಾಡಬಾರದು ಎಂಬುದು ನಮ್ಮ ಆಶಯವಾಗಿದೆ ಎಂದರು.

ಕಾಡಿನಲ್ಲಿ ಶೀಘ್ರವೇ ನೋ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಹಮ್ಮಿಕೊಂಡು ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಂದೇಶ ಇರುವ ಕರಪತ್ರಗಳನ್ನು ಹಂಚಬೇಕೆಂದು ಚಿಂತನೆ ನಡೆಸಲಾಗಿದೆ‌. ಅದನ್ನು ಓದಿಯಾದರೂ ಕಾಡಿನ ರಸ್ತೆಬದಿಗಳಲ್ಲಿ ಕಸ ಬಿಸಾಡದಿರಲಿ ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಚಾಮರಾಜನಗರ : ಬಂಡೀಪುರ ಅಭಯಾರಣ್ಯದಲ್ಲಿ ಪ್ಲಾಸ್ಟಿಕ್ ಕಂಟಕ ಹೆಚ್ಚಾಗುತ್ತಿದ್ದು, ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗಳು ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು, ಎರಡೇ ವಾರಕ್ಕೆ ಟ್ರ್ಯಾಕ್ಟರ್​​ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಕಸ ವಿಲೇವಾರಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊಟಿ, ವೈನಾಡು, ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡುವ ಪ್ರವಾಸಿಗರು ನೀರಿನ ಬಾಟೆಲ್, ತಿಂಡಿ, ತಿನಿಸಿನ ಪ್ಲಾಸ್ಟಿಕ್ ಕವರ್​ಗಳನ್ನು ಅಲ್ಲಲ್ಲಿಯೇ ಬೀಸಾಡುತ್ತಿದ್ದು, ರಾಶಿ ರಾಶಿ ಕಸ ಅಲ್ಲಲ್ಲಿ ತುಂಬಿಕೊಂಡಿದೆ. ಈ ಕಸವನ್ನು ಆಯಲೆಂದೇ 10 ಮಂದಿ ಕೆಲಸಗಾರರನ್ನು ನಿಯೋಜನೆಗೊಳಿಸಲಾಗಿದ್ದು, ಬಂಡೀಪುರ ವಲಯದಲ್ಲಿ ನಾಲ್ವರು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಾಲ್ವರು ಮತ್ತು ಇಬ್ಬರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ‌.

Bhandipura
ಕಸ ಕಲೆ ಹಾಕುತ್ತಿರುವ ಪೌರ ಕಾರ್ಮಿಕರು

ಹೆಚ್ಚುತ್ತಿದೆ ದಂಡದ ಮೊತ್ತ:
ಕಾಡಿಗೆ ಪ್ಲಾಸ್ಟಿಕ್ ಕಂಟಕವಾಗುತ್ತಿರುವ ಕುರಿತು ಬಂಡೀಪುರ ಹುಲಿ ಯೋಜನೆ ಸಿಎಫ್​ಒ ಬಾಲಚಂದ್ರ ಈಟಿವಿ ಭಾರತ್​ನೊಂದಿಗೆ ಮಾತನಾಡಿ, ರಸ್ತೆ ಪಕ್ಕ ಕಸ ಬಿಸಾಡುವರು, ಸೆಲ್ಪಿ ಕ್ಲಿಕ್ಕಿಸುವುದು, ತಿಂಡಿ ತಿನಿಸು ನೀಡುವವರಿಗೆ ದಂಡ ವಿಧಿಸಿ ಮುಂದೆಂದೂ ಈ ತಪ್ಪನ್ನು ಮಾಡದಂತೆ ಅರಿವು ಮೂಡಿಸಲಾಗುತ್ತಿದೆ. ಎರಡೂವರೆ ತಿಂಗಳಿಗೆ 4 ಲಕ್ಷದ 19 ಸಾವಿರ ರೂ. ಹಣ ಸಂಗ್ರಹವಾಗಿದೆ. ನಮ್ಮದು ದಂಡ ಸಂಗ್ರಹಿಸುವ ಉದ್ದೇಶವಲ್ಲ. ಅವರು ಮುಂದೆ ಈ ರೀತಿಯ ತಪ್ಪನ್ನು ಮಾಡಬಾರದು ಎಂಬುದು ನಮ್ಮ ಆಶಯವಾಗಿದೆ ಎಂದರು.

ಕಾಡಿನಲ್ಲಿ ಶೀಘ್ರವೇ ನೋ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಹಮ್ಮಿಕೊಂಡು ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಂದೇಶ ಇರುವ ಕರಪತ್ರಗಳನ್ನು ಹಂಚಬೇಕೆಂದು ಚಿಂತನೆ ನಡೆಸಲಾಗಿದೆ‌. ಅದನ್ನು ಓದಿಯಾದರೂ ಕಾಡಿನ ರಸ್ತೆಬದಿಗಳಲ್ಲಿ ಕಸ ಬಿಸಾಡದಿರಲಿ ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

Intro:ಕಾಡಿಗೆ ಕಂಟಕವಾಗುತ್ತಿದೆ ಪ್ಲಾಸ್ಟಿಕ್:ಶೀಘ್ರವೇ ಬಂಡೀಪುರದಲ್ಲಿ ನೋ ಪ್ಲಾಸ್ಟಿಕ್ ಜಾಗೃತಿ

ಚಾಮರಾಜನಗರ: ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಡೀಪುರ ಅಭಯಾರಣ್ಯಕ್ಕೂ ಪ್ಲಾಸ್ಟಿಕ್ ಕಂಟಕ ಹೆಚ್ಚಾಗುತ್ತಿದ್ದು ೨ ವಾರಕ್ಕೇ ಟ್ರಾಕ್ಟರ್ ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.


Body:ಹೌದು, ಕಾಡನ್ನು ಕಾಣಲು, ಊಟಿ- ವೈನಾಡಿಗೆ ಪ್ರಯಾಣ ಬೆಳೆಸುವರು, ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಡುವವರು ನೀರಿನ ಬಾಟೆಲ್, ತಿಂಡಿ-ತಿನಿಸಿನ ಪ್ಲಾಸ್ಟಿಕ್ ಕವರ್ ಗಳನ್ನು ಅರಿವಿನ ಕೊರತೆಯಿಂದ ಬಿಸಾಡುತ್ತಿದ್ದು ಇದನ್ನು ಆಯಲೆಂದೆ ೧೦ ಮಂದಿ ನಿಯೋಜನೆಗೊಳಿಸಲಾಗಿದೆ.

ಬಂಡೀಪುರ ವಲಯದಲ್ಲಿ ನಾಲ್ವರು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಾಲ್ವರು ಮತ್ತು ಗಾರ್ಬೆಜ್ ಪಿಕರ್ಸ್ ಎಂತಲೇ ಇಬ್ಬರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ‌.

ಹೆಚ್ಚುತ್ತಿದೆ ದಂಡದ ಮೊತ್ತ: ಕಾಡಿಗೆ ಪ್ಲಾಸ್ಟಿಕ್ ಕಂಟಕವಾಗುತ್ತಿರುವ ಕುರಿತು ಬಂಡೀಪುರ ಹುಲಿ ಯೋಜನೆ ಸಿಎಫ್ ಒ ಬಾಲಚಂದ್ರ ಈಟಿವಿಯೊಂದಿಗೆ ಮಾತನಾಡಿ, ರಸ್ತೆ ಬದಿ ಕಸ ಬಿಸಾಡುವರು, ಸೆಲ್ಪಿ ಕ್ಲಿಕ್ಕಿಸುವುದು, ತಿಂಡಿ ತಿನಿಸು ನೀಡುವವರಿಗೆ ದಂಡ ವಿಧಿಸಿ ಮುಂದೆಂದು ಈ ತಪ್ಪನ್ನು ಮಾಡದಂತೆ ಅರಿವು ಮೂಡಿಸಲಾಗುತ್ತಿದೆ. ಎರಡೂವರೆ ತಿಂಗಳಿಗೆ ೪ಲಕ್ಷದ ೧೯ ಸಾವಿರ ರೂ. ಹಣ ಸಂಗ್ರಹವಾಗಿದೆ. ನಮಗೆ ದಂಡ ಸಂಗ್ರಹಿಸುವುದು ಉದ್ದೇಶವಲ್ಲ ಅವರಿನ್ನೆಂದು ಆ ತಪ್ಪನ್ನು ಮುಂದೆ ಮಾಡದಿರಲಿ ಎಂಬುದಾಗಿದೆ ಎಂದರು.

ಕಾಡಿನಲ್ಲಿ ಶೀಘ್ರವೇ ನೋ ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಹಮ್ಮಿಕೊಂಡು ಕನ್ಮಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಂದೇಶ ವಿರುವ ಕರಪತ್ರಗಳನ್ನು ಹಂಚಬೇಕೆಂದು ಚಿಂತನೆ ನಡೆಸಲಾಗಿದೆ‌. ಅದನ್ನು ಓದಿಯಾದರೂ ಕಾಡಿನ ರಸ್ತೆಬದಿಗಳಲ್ಲಿ ಕಸ ಬಿಸಾಡದಿರಲಿ ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

Conclusion:ಒಟ್ಟಿನಲ್ಲಿ ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರು, ಭಕ್ತಾಧಿಗಳು ಇನ್ನಾದರೂ ಎಚ್ಚೆತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲಿ ಎಂಬುದು ಪರಿಸರಪ್ರೇಮಿಗಳ ಒತ್ತಾಸೆ‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.