ETV Bharat / state

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ತಡರಾತ್ರಿ ಪ್ರತಾಪ್​ ಸಿಂಹ ಫೇಸ್‌ಬುಕ್ ಪೋಸ್ಟ್​

author img

By

Published : May 3, 2021, 10:25 AM IST

ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಸಿಗದೆ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ನಿನ್ನೆ ತಡರಾತ್ರಿ ಸಂಸದ ಪ್ರತಾಪ್​ ಸಿಂಹ ಫೇಸ್​ಬುಕ್​ ಪೋಸ್ಟ್​ವೊಂದನ್ನು ಮಾಡಿದ್ದಾರೆ.

oxygen shortage in Chamarajanagar district hospital
ಆಕ್ಸಿಜನ್ ಕೊರತೆ ಬಗ್ಗೆ ನಿನ್ನೆ ತಡರಾತ್ರಿ ಸಂಸದ ಪ್ರತಾಪ್​ ಸಿಂಹ ಪೋಸ್ಟ್

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಸಿಗದೆ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೆ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದಾರೆ. ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಈ ಬಗ್ಗೆ ನಿನ್ನೆ ತಡರಾತ್ರಿ ಸಂಸದ ಪ್ರತಾಪ್​ ಸಿಂಹ ಫೇಸ್​ಬುಕ್​ ಪೋಸ್ಟ್​ವೊಂದನ್ನು ಮಾಡಿದ್ದಾರೆ. "ನಾನು ಈಗಷ್ಟೆ ಚಾಮರಾಜನಗರ ಡಿಸಿ ಮತ್ತು ಎಡಿಸಿ ಮೈಸೂರು ಹಾಗೂ ಮೈಸೂರು ಆಕ್ಸಿಜನ್​ ಪೂರೈಕೆಯ ಉಸ್ತುವಾರಿ ಹೊಂದಿರುವ ನಾಗರಾಜ್‌ ಅವರೊಂದಿಗೆ ಕಾನ್ಫರೆನ್ಸ್ ಕಾಲ್​ನಲ್ಲಿ ಮಾತನಾಡಿರುವೆ. ನಾವು ಈಗ 50 ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದೇವೆ. ಏಕೆಂದರೆ ಬೆಳಿಗ್ಗೆ 2 ಗಂಟೆಯ ಹೊತ್ತಿ ಅವರ ಸ್ಟಾಕ್ ಖಾಲಿಯಾಗಿದೆ. ಅವರ ಕೋಟಾದಿಂದ ನಾಳೆ ಆ ಸಿಲಿಂಡರ್​ಗಳನ್ನು ಹಿಂಪಡೆಯುತ್ತೇವೆ" ಎಂದು ಪೋಸ್ಟ್​ ಮಾಡಿದ್ದಾರೆ.

ನಂಜನಗೂಡಿನ ಸೋಂಕಿತರೊಬ್ಬರು ಆಕ್ಸಿಜನ್ ಕೊರತೆ ಉಂಟಾಗಿ ಮೃತಪಟ್ಟಿದ್ದು, ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದರಂತೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ, ಬೇರೆ ಬೇರೆ ಕಾರಣಗಳಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಆಕ್ಸಿಜನ್​ ಕೊರತೆ ಬಗ್ಗೆ ಮುಂಚಿತವಾಗಿಯೇ ಸುಳಿವು ಇದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತೇ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ: ಕೊರೊನಾ ಸೋಂಕಿತರ ನರಳಾಟ, ಹಲವರು ಸಾವು?

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಸಿಗದೆ ಹಲವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೆ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದಾರೆ. ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಈ ಬಗ್ಗೆ ನಿನ್ನೆ ತಡರಾತ್ರಿ ಸಂಸದ ಪ್ರತಾಪ್​ ಸಿಂಹ ಫೇಸ್​ಬುಕ್​ ಪೋಸ್ಟ್​ವೊಂದನ್ನು ಮಾಡಿದ್ದಾರೆ. "ನಾನು ಈಗಷ್ಟೆ ಚಾಮರಾಜನಗರ ಡಿಸಿ ಮತ್ತು ಎಡಿಸಿ ಮೈಸೂರು ಹಾಗೂ ಮೈಸೂರು ಆಕ್ಸಿಜನ್​ ಪೂರೈಕೆಯ ಉಸ್ತುವಾರಿ ಹೊಂದಿರುವ ನಾಗರಾಜ್‌ ಅವರೊಂದಿಗೆ ಕಾನ್ಫರೆನ್ಸ್ ಕಾಲ್​ನಲ್ಲಿ ಮಾತನಾಡಿರುವೆ. ನಾವು ಈಗ 50 ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದೇವೆ. ಏಕೆಂದರೆ ಬೆಳಿಗ್ಗೆ 2 ಗಂಟೆಯ ಹೊತ್ತಿ ಅವರ ಸ್ಟಾಕ್ ಖಾಲಿಯಾಗಿದೆ. ಅವರ ಕೋಟಾದಿಂದ ನಾಳೆ ಆ ಸಿಲಿಂಡರ್​ಗಳನ್ನು ಹಿಂಪಡೆಯುತ್ತೇವೆ" ಎಂದು ಪೋಸ್ಟ್​ ಮಾಡಿದ್ದಾರೆ.

ನಂಜನಗೂಡಿನ ಸೋಂಕಿತರೊಬ್ಬರು ಆಕ್ಸಿಜನ್ ಕೊರತೆ ಉಂಟಾಗಿ ಮೃತಪಟ್ಟಿದ್ದು, ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದರಂತೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿಲ್ಲ, ಬೇರೆ ಬೇರೆ ಕಾರಣಗಳಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ ಆಕ್ಸಿಜನ್​ ಕೊರತೆ ಬಗ್ಗೆ ಮುಂಚಿತವಾಗಿಯೇ ಸುಳಿವು ಇದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತೇ ಎಂಬ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ: ಕೊರೊನಾ ಸೋಂಕಿತರ ನರಳಾಟ, ಹಲವರು ಸಾವು?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.