ETV Bharat / state

'ಸಚಿವರು ಬಾಡಿಗೆ ಸಿಪಾಯಿಗಳಿದ್ದಂತೆ'.. ಜಿಲ್ಲೆಗೆ ಸಿಎಂ ಬಾರದಿದ್ದಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಗರಂ - chamarajangara oxygen incident

ಸಿದ್ದರಾಮಯ್ಯ 11 ಬಾರಿ ಚಾಮರಾಜನಗರಕ್ಕೆ ಬಂದು 5 ವರ್ಷ ಆಡಳಿತ ನಡೆಸಲಿಲ್ಲವೇ? ನಾಲ್ಕು ಬಾರಿ ಸಿಎಂ ಆದರೂ ಚಾಮರಾಜನಗರಕ್ಕೆ ಯಡಿಯೂರಪ್ಪ ಬಂದಿಲ್ಲ. ಎರಡು ವರ್ಷದಿಂದ ಒಂದು ರೂಪಾಯಿಯ ಕೆಲಸ ಆಗಿಲ್ಲ, ಅಷ್ಟು ಪಾಪ ಮಾಡಿದ್ದಾರಾ ಜನರು..?

puttarangashetty
ಶಾಸಕ ಪುಟ್ಟರಂಗಶೆಟ್ಟಿ
author img

By

Published : Jul 2, 2021, 2:04 PM IST

Updated : Jul 2, 2021, 3:05 PM IST

ಚಾಮರಾಜನಗರ : ಆಕ್ಸಿಜನ್ ದುರಂತಕ್ಕೆ ಎರಡು ತಿಂಗಳುಗಳಾಗುತ್ತಿದೆ. ಆದ್ರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಸಿಎಂ ಯಡಿಯೂರಪ್ಪರ ನಡೆಯ ವಿರುದ್ಧ ಶಾಸಕ ಸಿ. ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಎರಡು ತಿಂಗಳುಗಳಾದರೂ ಸರ್ಕಾರ ಈವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ದುರಂತದ ಸಾವುಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಉದಾಸೀನ ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ ಒಂದು ರೀತಿ ಜನರಿಗೆ ದ್ರೋಹ ಬಗೆಯುವಂತಿದೆ ಎಂದು ಕಿಡಿಕಾರಿದರು.

ಶಾಸಕ ಪುಟ್ಟರಂಗಶೆಟ್ಟಿ

ಆರಂಭದಲ್ಲಿ ಮೂವರಷ್ಟೇ ದುರಂತದಲ್ಲಿ ಸತ್ತಿದ್ದಾರೆ ಎಂದರು. ಬಳಿಕ 24 ಜನಕ್ಕೆ ಪರಿಹಾರ ಕೊಟ್ಟಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಡೆತ್ ಸರ್ಟಿಫಿಕೇಟ್ ಕೊಡುತ್ತಿಲ್ಲ. ನಾವು ಪ್ರತಿಭಟಿಸಿದರೆ ಕೊರೊನಾ ಕಾಲದಲ್ಲಿ ರಾಜಕೀಯ ಮಾಡುತ್ತಾರೆ ಎನ್ನುತ್ತಾರೆ. ಕನಿಷ್ಠ 10 ಲಕ್ಷ ರೂಪಾಯಿಯನ್ನಾದರೂ 36 ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಸಚಿವರುಗಳು ಬಾಡಿಗೆ ಸಿಪಾಯಿಗಳು : ಇಷ್ಟು ದೊಡ್ಡ ದುರಂತ ನಡೆದರೂ ಮೂಢನಂಬಿಕೆಗೆ ಕಟ್ಟುಬಿದ್ದು ಸಿಎಂ ಚಾಮರಾಜನಗರಕ್ಕೆ ಬಂದಿಲ್ಲ. ಬಾಡಿಗೆ ಸಿಪಾಯಿಗಳು ದೇಶ ಕಾಯದ ಹಾಗೇ ಸಚಿವರುಗಳು ಬಾಡಿಗೆ ಸಿಪಾಯಿಗಳು, ಇವರು ಕೊಟ್ಟ ವರದಿಯನ್ನೇ ಅವರು ನೋಡಬೇಕು, ಮುಖ್ಯಮಂತ್ರಿಯಾದವರು ಜಿಲ್ಲೆಗೆ ಬಂದರೆ ವಸ್ತುಸ್ಥಿತಿ ಅರ್ಥವಾಗಲಿದೆ ಎಂದರು.

ಸಿಎಂ ವಿರುದ್ಧ ಆಕ್ರೋಶ : ಸಿದ್ದರಾಮಯ್ಯ 11 ಬಾರಿ ಚಾಮರಾಜನಗರಕ್ಕೆ ಬಂದು 5 ವರ್ಷ ಆಡಳಿತ ನಡೆಸಲಿಲ್ಲವೇ? ನಾಲ್ಕು ಬಾರಿ ಸಿಎಂ ಆದರೂ ಚಾಮರಾಜನಗರಕ್ಕೆ ಯಡಿಯೂರಪ್ಪ ಬಂದಿಲ್ಲ. ಎರಡು ವರ್ಷದಿಂದ ಒಂದು ರೂಪಾಯಿಯ ಕೆಲಸ ಆಗಿಲ್ಲ, ಅಷ್ಟು ಪಾಪ ಮಾಡಿದ್ದಾರಾ ಜನರು? ಎಂದು ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ : ಡಾ. ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ಕಾರ್ಯಕರ್ತರು ಎಲ್ಲಿ ಹೋಗಿದ್ದಾರೆ. ಜನರು ಉಗಿಯುತ್ತಿದ್ದಾರೆ. ಒಮ್ಮೆ ನಗರಕ್ಕೆ ಭೇಟಿ ಕೊಡಿ ಎಂದು ಹೇಳಲಿಕ್ಕಾಗುವುದಿಲ್ಲವೇ? ತುರ್ತು ಪರಿಸ್ಥಿತಿ ನೆನಪಲ್ಲಿ ಕರಾಳ ದಿನ ಆಚರಿಸುತ್ತಾರೆ, ಯಡಿಯೂರಪ್ಪ ಅವರನ್ನು ಚಾಮರಾಜನಗರಕ್ಕೆ ಕರೆತರಲಾಗಲ್ಲ, ತುರ್ತು ಪರಿಸ್ಥಿತಿ ಬಾರದೇ ಹೋಗಿದ್ದರೆ 20 ಅಂಶದ ಕಾರ್ಯಕ್ರಮ ಎಲ್ಲಿರುತ್ತಿತ್ತು, ಉಳುವವನೇ ಭೂ ಒಡೆಯ ನೀತಿ ಎಲ್ಲಿರುತ್ತಿತ್ತು?. ತುರ್ತು ಪರಿಸ್ಥಿತಿ ನೆನಪನ್ನು ಕರಾಳ ದಿನವಾಗಲ್ಲ, ವಿಜಯೋತ್ಸವವಾಗಿ ಆಚರಿಸಬೇಕೆಂದು ಹೇಳಿಕೆ ಕೊಟ್ಟರು.

ಚಾಮರಾಜನಗರ : ಆಕ್ಸಿಜನ್ ದುರಂತಕ್ಕೆ ಎರಡು ತಿಂಗಳುಗಳಾಗುತ್ತಿದೆ. ಆದ್ರೆ, ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಸಿಎಂ ಯಡಿಯೂರಪ್ಪರ ನಡೆಯ ವಿರುದ್ಧ ಶಾಸಕ ಸಿ. ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಎರಡು ತಿಂಗಳುಗಳಾದರೂ ಸರ್ಕಾರ ಈವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ದುರಂತದ ಸಾವುಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಉದಾಸೀನ ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ ಒಂದು ರೀತಿ ಜನರಿಗೆ ದ್ರೋಹ ಬಗೆಯುವಂತಿದೆ ಎಂದು ಕಿಡಿಕಾರಿದರು.

ಶಾಸಕ ಪುಟ್ಟರಂಗಶೆಟ್ಟಿ

ಆರಂಭದಲ್ಲಿ ಮೂವರಷ್ಟೇ ದುರಂತದಲ್ಲಿ ಸತ್ತಿದ್ದಾರೆ ಎಂದರು. ಬಳಿಕ 24 ಜನಕ್ಕೆ ಪರಿಹಾರ ಕೊಟ್ಟಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಡೆತ್ ಸರ್ಟಿಫಿಕೇಟ್ ಕೊಡುತ್ತಿಲ್ಲ. ನಾವು ಪ್ರತಿಭಟಿಸಿದರೆ ಕೊರೊನಾ ಕಾಲದಲ್ಲಿ ರಾಜಕೀಯ ಮಾಡುತ್ತಾರೆ ಎನ್ನುತ್ತಾರೆ. ಕನಿಷ್ಠ 10 ಲಕ್ಷ ರೂಪಾಯಿಯನ್ನಾದರೂ 36 ಕುಟುಂಬಗಳಿಗೆ ನೀಡಬೇಕೆಂದು ಆಗ್ರಹಿಸಿದರು.

ಸಚಿವರುಗಳು ಬಾಡಿಗೆ ಸಿಪಾಯಿಗಳು : ಇಷ್ಟು ದೊಡ್ಡ ದುರಂತ ನಡೆದರೂ ಮೂಢನಂಬಿಕೆಗೆ ಕಟ್ಟುಬಿದ್ದು ಸಿಎಂ ಚಾಮರಾಜನಗರಕ್ಕೆ ಬಂದಿಲ್ಲ. ಬಾಡಿಗೆ ಸಿಪಾಯಿಗಳು ದೇಶ ಕಾಯದ ಹಾಗೇ ಸಚಿವರುಗಳು ಬಾಡಿಗೆ ಸಿಪಾಯಿಗಳು, ಇವರು ಕೊಟ್ಟ ವರದಿಯನ್ನೇ ಅವರು ನೋಡಬೇಕು, ಮುಖ್ಯಮಂತ್ರಿಯಾದವರು ಜಿಲ್ಲೆಗೆ ಬಂದರೆ ವಸ್ತುಸ್ಥಿತಿ ಅರ್ಥವಾಗಲಿದೆ ಎಂದರು.

ಸಿಎಂ ವಿರುದ್ಧ ಆಕ್ರೋಶ : ಸಿದ್ದರಾಮಯ್ಯ 11 ಬಾರಿ ಚಾಮರಾಜನಗರಕ್ಕೆ ಬಂದು 5 ವರ್ಷ ಆಡಳಿತ ನಡೆಸಲಿಲ್ಲವೇ? ನಾಲ್ಕು ಬಾರಿ ಸಿಎಂ ಆದರೂ ಚಾಮರಾಜನಗರಕ್ಕೆ ಯಡಿಯೂರಪ್ಪ ಬಂದಿಲ್ಲ. ಎರಡು ವರ್ಷದಿಂದ ಒಂದು ರೂಪಾಯಿಯ ಕೆಲಸ ಆಗಿಲ್ಲ, ಅಷ್ಟು ಪಾಪ ಮಾಡಿದ್ದಾರಾ ಜನರು? ಎಂದು ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಸಿದ್ದರಾಮಯ್ಯನವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ : ಡಾ. ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ಕಾರ್ಯಕರ್ತರು ಎಲ್ಲಿ ಹೋಗಿದ್ದಾರೆ. ಜನರು ಉಗಿಯುತ್ತಿದ್ದಾರೆ. ಒಮ್ಮೆ ನಗರಕ್ಕೆ ಭೇಟಿ ಕೊಡಿ ಎಂದು ಹೇಳಲಿಕ್ಕಾಗುವುದಿಲ್ಲವೇ? ತುರ್ತು ಪರಿಸ್ಥಿತಿ ನೆನಪಲ್ಲಿ ಕರಾಳ ದಿನ ಆಚರಿಸುತ್ತಾರೆ, ಯಡಿಯೂರಪ್ಪ ಅವರನ್ನು ಚಾಮರಾಜನಗರಕ್ಕೆ ಕರೆತರಲಾಗಲ್ಲ, ತುರ್ತು ಪರಿಸ್ಥಿತಿ ಬಾರದೇ ಹೋಗಿದ್ದರೆ 20 ಅಂಶದ ಕಾರ್ಯಕ್ರಮ ಎಲ್ಲಿರುತ್ತಿತ್ತು, ಉಳುವವನೇ ಭೂ ಒಡೆಯ ನೀತಿ ಎಲ್ಲಿರುತ್ತಿತ್ತು?. ತುರ್ತು ಪರಿಸ್ಥಿತಿ ನೆನಪನ್ನು ಕರಾಳ ದಿನವಾಗಲ್ಲ, ವಿಜಯೋತ್ಸವವಾಗಿ ಆಚರಿಸಬೇಕೆಂದು ಹೇಳಿಕೆ ಕೊಟ್ಟರು.

Last Updated : Jul 2, 2021, 3:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.