ETV Bharat / state

50 ಸಾವಿರ ಹಣ ಬಾಕಿ: ಕತ್ತು ಕತ್ತರಿಸಿ ವ್ಯಕ್ತಿಯನ್ನು ಸುಟ್ಟು ಹಾಕಿದ್ದ ಗಾಂಜಾ ವ್ಯಾಪಾರಿಗಳು! - undefined

ವ್ಯಕ್ತಿಯೊಬ್ಬ 50 ಸಾವಿರ ರೂ. ಹಣ ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಗಾಂಜಾ ವ್ಯಾಪಾರಿಗಳಿಬ್ಬರು ಆತನ ಕತ್ತು ಕತ್ತರಿಸಿ, ಬಳಿಕ ಸುಟ್ಟು ಬರ್ಬರವಾಗಿ ಕೊಲೆ ಮಾಡಿದ್ದರು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕತ್ತು ಕತ್ತರಿಸಿ ವ್ಯಕ್ತಿಯನ್ನು ಸುಟ್ಟ ಗಾಂಜಾ ವ್ಯಾಪಾರಿಗಳು
author img

By

Published : Jul 1, 2019, 8:56 PM IST

Updated : Jul 1, 2019, 9:19 PM IST

ಚಾಮರಾಜನಗರ: ತಲೆ ಸಂಪೂರ್ಣ ಸುಟ್ಟು ಹೋಗಿ ದೇಹ ಅರ್ಧಂಬರ್ಧ ಬೆಂದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ ಪ್ರಕರಣವನ್ನು ಹನೂರು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ಜೂ. 23 ರಂದು ಹನೂರು ತಾಲೂಕಿನ ಮಣಗಳ್ಳಿ ಸಮೀಪದ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ತಲೆ ಸಂಪೂರ್ಣ ಸುಟ್ಟು ಹೋಗಿ, ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಇದು ಮಣಗಳ್ಳಿ ಗ್ರಾಮದ ಗಾರೆ ಕೆಲಸಗಾರ ವೆಂಕಟಯ್ಯ ಎಂಬವರ ಶವ ಎಂದು ಗುರುತಿಸಲಾಗಿತ್ತು. ಇದೀಗ ಹನೂರು ಪಿಎಸ್​ಐ ಮೋಹಿತ್ ಸಹದೇವ್ ನೇತೃತ್ವದ ತಂಡ ಪ್ರಕರಣ ಬೇಧಿಸಿ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಶಫೀವುಲ್ಲಾ ಷರೀಪ್ ಹಾಗೂ ಆರ್.ಎಸ್.ದೊಡ್ಡಿ ಗ್ರಾಮದ ಫರಾತ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ಕರೆದು ಎಸ್ಪಿ ಹೆಚ್.ಡಿ.ಆನಂದಕುಮಾರ್ ಮಾತನಾಡಿ, ಮೃತ ವೆಂಕಟಯ್ಯನಿಗೂ ಮತ್ತು ಶಫೀವುಲ್ಲಾ ಷರೀಪನಿಗೂ ಗಾಂಜಾ ವ್ಯವಹಾರವಿತ್ತು. ವೆಂಕಟಯ್ಯನಿಂದ ಬರಬೇಕಾದ 50 ಸಾವಿರ ರೂ. ಹಣ ಬರದಿದ್ದಾಗ ಮಾತನಾಡಬೇಕೆಂದು ಕರೆಯಿಸಿಕೊಂಡು ಸ್ನೇಹಿತನಾದ ಫರಾತ್ ಜೊತೆ ಸೇರಿ ಕತ್ತಿಯಿಂದ ರುಂಡ-ಮುಂಡ ಬೇರ್ಪಡಿಸಿ, ರುಂಡವನ್ನು ಸುಟ್ಟು ತೆರಳಿದ್ದಾರೆ ಎಂದರು.

ಕತ್ತು ಕತ್ತರಿಸಿ ವ್ಯಕ್ತಿಯನ್ನು ಸುಟ್ಟ ಗಾಂಜಾ ವ್ಯಾಪಾರಿಗಳು

ವೆಂಕಟಯ್ಯನನ್ನು ಕರೆದುಕೊಂಡು ಬಂದಿದ್ದ ರಾಮಚಂದ್ರ ಎಂಬಾತ ದೂರದಿಂದಲೇ ಕೊಲೆ ಮಾಡಿ ಸುಟ್ಟು ಹಾಕಿರುವುದನ್ನು ಕಂಡಿದ್ದು, ಈತನೇ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದಾನೆ.‌ ಆರೋಪಿಗಳು ಪೊಲೀಸರಿಗೆ ವಿಚಾರ ತಿಳಿಸಕೂಡದು ಎಂದು ಧಮ್ಕಿ ಹಾಕಿದ್ದರಿಂದ ರಾಮಚಂದ್ರ ಘಟನೆ ವಿವರಿಸಲು ಮುಂದೆ ಬಂದಿರಲಿಲ್ಲ. ಕೃತ್ಯಕ್ಕೆ ಬಳಸಿದ್ದ ಕತ್ತಿ, ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಎಎಸ್​ಪಿ ಅನಿತಾ, ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ, ಹನೂರು ಪಿಎಸ್ಐ ಮೋಹಿತ್ ಸಹದೇವ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಚಾಮರಾಜನಗರ: ತಲೆ ಸಂಪೂರ್ಣ ಸುಟ್ಟು ಹೋಗಿ ದೇಹ ಅರ್ಧಂಬರ್ಧ ಬೆಂದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ ಪ್ರಕರಣವನ್ನು ಹನೂರು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ಜೂ. 23 ರಂದು ಹನೂರು ತಾಲೂಕಿನ ಮಣಗಳ್ಳಿ ಸಮೀಪದ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ತಲೆ ಸಂಪೂರ್ಣ ಸುಟ್ಟು ಹೋಗಿ, ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಇದು ಮಣಗಳ್ಳಿ ಗ್ರಾಮದ ಗಾರೆ ಕೆಲಸಗಾರ ವೆಂಕಟಯ್ಯ ಎಂಬವರ ಶವ ಎಂದು ಗುರುತಿಸಲಾಗಿತ್ತು. ಇದೀಗ ಹನೂರು ಪಿಎಸ್​ಐ ಮೋಹಿತ್ ಸಹದೇವ್ ನೇತೃತ್ವದ ತಂಡ ಪ್ರಕರಣ ಬೇಧಿಸಿ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಶಫೀವುಲ್ಲಾ ಷರೀಪ್ ಹಾಗೂ ಆರ್.ಎಸ್.ದೊಡ್ಡಿ ಗ್ರಾಮದ ಫರಾತ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ಕರೆದು ಎಸ್ಪಿ ಹೆಚ್.ಡಿ.ಆನಂದಕುಮಾರ್ ಮಾತನಾಡಿ, ಮೃತ ವೆಂಕಟಯ್ಯನಿಗೂ ಮತ್ತು ಶಫೀವುಲ್ಲಾ ಷರೀಪನಿಗೂ ಗಾಂಜಾ ವ್ಯವಹಾರವಿತ್ತು. ವೆಂಕಟಯ್ಯನಿಂದ ಬರಬೇಕಾದ 50 ಸಾವಿರ ರೂ. ಹಣ ಬರದಿದ್ದಾಗ ಮಾತನಾಡಬೇಕೆಂದು ಕರೆಯಿಸಿಕೊಂಡು ಸ್ನೇಹಿತನಾದ ಫರಾತ್ ಜೊತೆ ಸೇರಿ ಕತ್ತಿಯಿಂದ ರುಂಡ-ಮುಂಡ ಬೇರ್ಪಡಿಸಿ, ರುಂಡವನ್ನು ಸುಟ್ಟು ತೆರಳಿದ್ದಾರೆ ಎಂದರು.

ಕತ್ತು ಕತ್ತರಿಸಿ ವ್ಯಕ್ತಿಯನ್ನು ಸುಟ್ಟ ಗಾಂಜಾ ವ್ಯಾಪಾರಿಗಳು

ವೆಂಕಟಯ್ಯನನ್ನು ಕರೆದುಕೊಂಡು ಬಂದಿದ್ದ ರಾಮಚಂದ್ರ ಎಂಬಾತ ದೂರದಿಂದಲೇ ಕೊಲೆ ಮಾಡಿ ಸುಟ್ಟು ಹಾಕಿರುವುದನ್ನು ಕಂಡಿದ್ದು, ಈತನೇ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದಾನೆ.‌ ಆರೋಪಿಗಳು ಪೊಲೀಸರಿಗೆ ವಿಚಾರ ತಿಳಿಸಕೂಡದು ಎಂದು ಧಮ್ಕಿ ಹಾಕಿದ್ದರಿಂದ ರಾಮಚಂದ್ರ ಘಟನೆ ವಿವರಿಸಲು ಮುಂದೆ ಬಂದಿರಲಿಲ್ಲ. ಕೃತ್ಯಕ್ಕೆ ಬಳಸಿದ್ದ ಕತ್ತಿ, ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಎಎಸ್​ಪಿ ಅನಿತಾ, ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ, ಹನೂರು ಪಿಎಸ್ಐ ಮೋಹಿತ್ ಸಹದೇವ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Intro:೫೦ ಸಾವಿರ ಹಣ ಬಾಕಿ: ಕತ್ತು ಕತ್ತರಿಸಿ ಸುಟ್ಟ ಗಾಂಜಾ ವ್ಯಾಪಾರಿಗಳು!


ಚಾಮರಾಜನಗರ: ತಲೆ ಸಂಪೂರ್ಣ ಸುಟ್ಟು ಹೋಗಿ ದೇಹ ಅರ್ಧಂಬರ್ಧ ಬೆಂದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ ಪ್ರಕರಣವನ್ನು ಹನೂರು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Body:ಕಳೆದ ಜೂ.೨೩ರಂದು ಹನೂರು ತಾಲೂಕಿನ ಮಣಗಳ್ಳಿ ಸಮೀಪದ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ತಲೆ ಸಂಪೂರ್ಣ ಸುಟ್ಟು ಹೋಗಿ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಬಳಿಕ, ಮಣಗಳ್ಳಿ ಗ್ರಾಮದ ಗಾರೆ ಕೆಲಸಗಾರ ವೆಂಕಟಯ್ಯ ಎಂದು ಗುರುತು ಪತ್ತೆಯಾಗಿತ್ತು. ಹನೂರು ಪಿಎಸ್ ಐ ಮೋಹಿತ್ ಸಹದೇವ್ ನೇತೃತ್ವದ ತಂಡ ಪ್ರಕರಣ ಬೇಧಿಸಿ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಶಫೀವುಲ್ಲಾ ಷರೀಪ್ ಹಾಗೂ ಆರ್.ಎಸ್.ದೊಡ್ಡಿ ಗ್ರಾಮದ ಫರಾತ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ಕರೆದು ಎಸ್ ಪಿ ಎಚ್.ಡಿ.ಆನಂದಕುಮಾರ್ ಮಾತನಾಡಿ, ಮೃತ ವೆಂಕಟಯ್ಯನಿಗೂ ಮತ್ತು ಶಫೀವುಲ್ಲಾ ಷರೀಪನಿಗೂ ಗಾಂಜಾ ವ್ಯವಹಾರವಿತ್ತು. ವೆಂಕಟಯ್ಯನಿಂದ ಬರಬೇಕಾದ ೫೦ ಸಾವಿರ ರೂ. ಹಣ ಬರದಿದ್ದಾಗ ಮಾತನಾಡಬೇಕೆಂದು ಕರೆಯಿಸಿಕೊಂಡು ಸ್ನೇಹಿತನಾದ ಫರಾತ್ ಒಂದುಗೂಡಿ ಕತ್ತಿಯಿಂದ ರುಂಡ-ಮುಂಡ ಬೇರ್ಪಡಿಸಿ ರುಂಡವನ್ನು ಸುಟ್ಟು ತೆರಳಿದ್ದಾರೆ ಎಂದರು.

ವೆಂಕಟಯ್ಯನನ್ನು ಕರೆದುಕೊಂಡು ಬಂದಿದ್ದ ರಾಮಚಂದ್ರ ದೂರದಿಂದಲೇ ಕೊಲೆ ಮಾಡಿ ಸುಟ್ಟು ಹಾಕಿರುವುದನ್ನು ಕಂಡಿದ್ದು ಈತನೇ ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದಾನೆ.‌ಆರೋಪಿಗಳು ಪೊಲೀಸರಿಗೆ ವಿಚಾರ ತಿಳಿಸಕೂಡದು ಎಂದು ಧಮ್ಕಿ ಹಾಕಿದ್ದರಿಂದ ರಾಮಚಂದ್ರ ಘಟನೆ ವಿವರಿಸಲು ಮುಂದೆ ಬಂದಿರಲಿಲ್ಲ ಎಂದು ಮಾಹಿತಿ ನೀಡಿದರು.

ಕೃತ್ಯಕ್ಕೆ ಬಳಸಿದ್ದ ಕತ್ತಿ, ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದರು.

Conclusion:ಎಎಸ್ ಪಿ ಅನಿತಾ, ಕೊಳ್ಳೇಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ, ಹನೂರು ಪಿಎಸ್ ಐ ಮೋಹಿತ್ ಸಹದೇವ್ ಸೇರಿದಂತೆ ಸಿಬ್ಬಂದಿ ಇದ್ದರು.
Last Updated : Jul 1, 2019, 9:19 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.