ETV Bharat / state

ಇನ್ನೆರಡು‌‌ ದಿನದಲ್ಲಿ ಆನ್​ಲೈನ್‌‌ ಮೂಲಕ ಮಲೆ ಮಹದೇಶ್ವರನ‌ ದರ್ಶನ - Malemahadeshwara Temple

ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವಾಲಯದಲ್ಲಿನ ಆನ್ ಲೈನ್ ಮೂಲಕ ದರ್ಶನಕ್ಕೆ ತಯಾರಿ ನಡೆಸಲಾಗಿದೆ.

Malemahadeshwara Temple
ಆನ್​ಲೈನ್‌‌ ಮೂಲಕ ಮಲೆ ಮಹದೇಶ್ವರನ‌ ದರ್ಶನ
author img

By

Published : May 25, 2020, 8:54 PM IST

ಚಾಮರಾಜನಗರ: ಎಲ್ಲವೂ ಸರಿಯಾದರೆ, ಇನ್ನೆರೆಡು ದಿನಗಳಲ್ಲಿ ಆನ್ ಲೈನ್ ಮೂಲಕ ಏಳುಮಲೆ ಒಡೆಯ ಮಲೆ ಮಹದೇಶ್ವರನ‌ ದರ್ಶನ ಪ್ರಾರಂಭವಾಗಲಿದೆ.

Malemahadeshwara Temple
ಆನ್​ಲೈನ್‌‌ ಮೂಲಕ ಮಲೆ ಮಹದೇಶ್ವರನ‌ ದರ್ಶನ
ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವಾಲಯದಲ್ಲಿನ ಆನ್ ಲೈನ್ ದರ್ಶನಕ್ಕೆ ಮುಂದಡಿಯಿಟ್ಟಿದ್ದು, ಈಗಾಗಲೇ ಟ್ರಯಲ್ ನಡೆಸಲಾಗುತ್ತದೆ.
ತಾಂತ್ರಿಕವಾಗಿ ಎಲ್ಲ ಸರಿ ಹೋಗಿದ್ದು, ಮಲೆಮಹದೇಶ್ವರ ಬೆಟ್ಟ ಅಧಿಕೃತ ವೆಬ್ ಸೈಟ್​ನಲ್ಲಿ ಪ್ರತಿ ದಿನ‌ ಬೆಳಗ್ಗೆ ಮತ್ತು ಸಂಜೆ ಆನ್ ಲೈನ್ ಮೂಲಕ ದರ್ಶನ ಪಡೆಯಬಹುದಾಗಿದೆ. ಬೆಳಗಿನ‌ ಅಭಿಷೇಕ‌ ಸಮಯ 4.30- 6 ಗಂಟೆ ಮತ್ತು ಸಂಜೆ 6.45 ರಿಂದ 8 ರ ವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಾಮಿಯ ಪೂಜೆಯ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.
ಅಲ್ಲದೇ ಆನ್ ಲೈನ್ ಮೂಲಕವೇ ಭಕ್ತಾದಿಗಳು‌ ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು, ವಿಶೇಷವಾಗಿ ರಾಜ್ಯದ ಭಕ್ತಾದಿಗಳು ಸೇವೆ ಮಾಡಿಸಿದರೆ ಅಂಚೆ ಮೂಲಕ ಕಲ್ಲು ಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ಕಳುಹಿಸುತ್ತೇವೆ. ಇದು ನಮ್ಮ ರಾಜ್ಯದ ಭಕ್ತಾದಿಗಳಿಗೆ ಮಾತ್ರ. ಬೇರೆ ರಾಜ್ಯದ ಭಕ್ತರಿಗೆ ಪ್ರಸಾದ ಕಳುಹಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಚಾಮರಾಜನಗರ: ಎಲ್ಲವೂ ಸರಿಯಾದರೆ, ಇನ್ನೆರೆಡು ದಿನಗಳಲ್ಲಿ ಆನ್ ಲೈನ್ ಮೂಲಕ ಏಳುಮಲೆ ಒಡೆಯ ಮಲೆ ಮಹದೇಶ್ವರನ‌ ದರ್ಶನ ಪ್ರಾರಂಭವಾಗಲಿದೆ.

Malemahadeshwara Temple
ಆನ್​ಲೈನ್‌‌ ಮೂಲಕ ಮಲೆ ಮಹದೇಶ್ವರನ‌ ದರ್ಶನ
ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವಾಲಯದಲ್ಲಿನ ಆನ್ ಲೈನ್ ದರ್ಶನಕ್ಕೆ ಮುಂದಡಿಯಿಟ್ಟಿದ್ದು, ಈಗಾಗಲೇ ಟ್ರಯಲ್ ನಡೆಸಲಾಗುತ್ತದೆ.
ತಾಂತ್ರಿಕವಾಗಿ ಎಲ್ಲ ಸರಿ ಹೋಗಿದ್ದು, ಮಲೆಮಹದೇಶ್ವರ ಬೆಟ್ಟ ಅಧಿಕೃತ ವೆಬ್ ಸೈಟ್​ನಲ್ಲಿ ಪ್ರತಿ ದಿನ‌ ಬೆಳಗ್ಗೆ ಮತ್ತು ಸಂಜೆ ಆನ್ ಲೈನ್ ಮೂಲಕ ದರ್ಶನ ಪಡೆಯಬಹುದಾಗಿದೆ. ಬೆಳಗಿನ‌ ಅಭಿಷೇಕ‌ ಸಮಯ 4.30- 6 ಗಂಟೆ ಮತ್ತು ಸಂಜೆ 6.45 ರಿಂದ 8 ರ ವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವಾಮಿಯ ಪೂಜೆಯ ನೇರ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.
ಅಲ್ಲದೇ ಆನ್ ಲೈನ್ ಮೂಲಕವೇ ಭಕ್ತಾದಿಗಳು‌ ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು, ವಿಶೇಷವಾಗಿ ರಾಜ್ಯದ ಭಕ್ತಾದಿಗಳು ಸೇವೆ ಮಾಡಿಸಿದರೆ ಅಂಚೆ ಮೂಲಕ ಕಲ್ಲು ಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ಕಳುಹಿಸುತ್ತೇವೆ. ಇದು ನಮ್ಮ ರಾಜ್ಯದ ಭಕ್ತಾದಿಗಳಿಗೆ ಮಾತ್ರ. ಬೇರೆ ರಾಜ್ಯದ ಭಕ್ತರಿಗೆ ಪ್ರಸಾದ ಕಳುಹಿಸಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.