ETV Bharat / state

ಬಂಡೀಪುರದತ್ತ ಪ್ರವಾಸಿಗರ ಲಗ್ಗೆ: ಎರಡೇ ತಿಂಗಳಲ್ಲಿ 2 ಕೋಟಿ ರೂ‌. ಸಂಗ್ರಹ! - undefined

ರಾಷ್ಟ್ರೀಯ ಅಭಯಾರಣ್ಯ ಬಂಡೀಪುರದತ್ತ ಪ್ರವಾಸಿಗರ ದಂಡು. ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಶುಲ್ಕ ಸಂಗ್ರಹ. ಸರ್ಕಾರದ ಬೊಕ್ಕಸಕ್ಕೆ ಬಂತು ದಾಖಲೆಯ ಹಣ.

Bandipur safari
author img

By

Published : Jun 2, 2019, 10:04 PM IST

ಚಾಮರಾಜನಗರ: ದೇಶದಲ್ಲೇ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ 2 ತಿಂಗಳಲ್ಲಿ ದಾಖಲೆಯ ಮೊತ್ತದ ಶುಲ್ಕ ಸಂಗ್ರಹವಾಗಿದೆ.

ಕಳೆದ ಏಪ್ರಿಲ್​ನಲ್ಲಿ 77 ಲಕ್ಷ ಹಾಗೂ ಮೇನಲ್ಲಿ 1.40 ಲಕ್ಷ ಹಣ ಸಂಗ್ರಹವಾಗಿದ್ದು, ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಳೆದ ವರ್ಷ ಎಂಟೂವರೆ ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಎರಡೇ ತಿಂಗಳಿಗೆ 2 ಕೋಟಿ ಸಂಗ್ರಹವಾಗಿದ್ದು, ವರ್ಷದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಎನ್ನುವವರು 'ಈಟಿವಿ ಭಾರತ​'ಕ್ಕೆ ಪ್ರತಿಕ್ರಿಯಿಸಿ, ದಾಖಲೆ ಮೊತ್ತ ಹರಿದು ಬಂದು ಸರ್ಕಾರಕ್ಕೆ ಆದಾಯ ತಂದಿರುವುದು ಸಂತೋಷದ ವಿಚಾರವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಾಹನಗಳನ್ನು ಪಾರ್ಕಿಂಗ್​ ಮಾಡಲು ಸ್ವಲ್ಪ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆ, ಕ್ಯಾಂಪಸ್​ನಲ್ಲಿ ಸಫಾರಿ ಕೌಂಟರ್ ಇಂದಿನಿಂದ ಬದಲಾಗಿದೆ. ಮೊದಲ ದಿನವೇ 28 ಬಸ್​ಗಳು ಫುಲ್ ಆಗಿದ್ದು 4.80 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಚಾಮರಾಜನಗರ: ದೇಶದಲ್ಲೇ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ 2 ತಿಂಗಳಲ್ಲಿ ದಾಖಲೆಯ ಮೊತ್ತದ ಶುಲ್ಕ ಸಂಗ್ರಹವಾಗಿದೆ.

ಕಳೆದ ಏಪ್ರಿಲ್​ನಲ್ಲಿ 77 ಲಕ್ಷ ಹಾಗೂ ಮೇನಲ್ಲಿ 1.40 ಲಕ್ಷ ಹಣ ಸಂಗ್ರಹವಾಗಿದ್ದು, ಎರಡೇ ತಿಂಗಳಿಗೆ 2 ಕೋಟಿ 10 ಲಕ್ಷ ರೂ. ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಳೆದ ವರ್ಷ ಎಂಟೂವರೆ ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಎರಡೇ ತಿಂಗಳಿಗೆ 2 ಕೋಟಿ ಸಂಗ್ರಹವಾಗಿದ್ದು, ವರ್ಷದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಎನ್ನುವವರು 'ಈಟಿವಿ ಭಾರತ​'ಕ್ಕೆ ಪ್ರತಿಕ್ರಿಯಿಸಿ, ದಾಖಲೆ ಮೊತ್ತ ಹರಿದು ಬಂದು ಸರ್ಕಾರಕ್ಕೆ ಆದಾಯ ತಂದಿರುವುದು ಸಂತೋಷದ ವಿಚಾರವಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ವಾಹನಗಳನ್ನು ಪಾರ್ಕಿಂಗ್​ ಮಾಡಲು ಸ್ವಲ್ಪ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆ, ಕ್ಯಾಂಪಸ್​ನಲ್ಲಿ ಸಫಾರಿ ಕೌಂಟರ್ ಇಂದಿನಿಂದ ಬದಲಾಗಿದೆ. ಮೊದಲ ದಿನವೇ 28 ಬಸ್​ಗಳು ಫುಲ್ ಆಗಿದ್ದು 4.80 ಲಕ್ಷ ರೂ. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

Intro:ಬಂಡೀಪುರ ಸಫಾರಿಗೆ ಪ್ರವಾಸಿಗರ ಲಗ್ಗೆ: ೨ ತಿಂಗಳಿಗೆ ೨ ಕೋಟಿ ರೂ‌. ಸಂಗ್ರಹ!


ಚಾಮರಾಜನಗರ: ದೇಶದಲ್ಲೇ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹೆಸರುವಾಸಿಯಾಗಿರುವ ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು ೨ ತಿಂಗಳಿನಲ್ಲಿ ದಾಖಲೆಮೊತ್ತ ಸಂಗ್ರಹವಾಗಿದೆ.


Body:ಕಳೆದ ಏಪ್ರಿಲ್ ನಲ್ಲಿ ೭೭ ಲಕ್ಷ ಹಾಗೂ ಮೇ ನಲ್ಲಿ ೧.೪೦ ಲಕ್ಷ ಹಣ ಸಂಗ್ರಹವಾಗಿದ್ದು ಎರಡೇ ತಿಂಗಳಿಗೆ ೨ ಕೋಟಿ ೧೦ ಲಕ್ಷ ರೂ. ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಕಳೆದ ವರ್ಷ ಎಂಟುವರೇ ಕೋಟಿ ಸಂಗ್ರಹವಾಗಿತ್ತು, ಈ ವರ್ಷ ಎರಡೇ ತಿಂಗಳಿಗೇ ೨ ಕೋಟಿ ಸಂಗ್ರಹವಾಗಿದ್ದು ವರ್ಷದ ಆದಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ದಾಖಲೆ ಮೊತ್ತ ಹರಿದು ಬಂದು ಸರ್ಕಾರಕ್ಕೆ ಆದಾಯ ತಂದಿರುವುದು ಸಂತೋಷದ ವಿಚಾರವಾದರೇ ಪ್ರವಾಸಿಗರಿಂದ ವನ್ಯಜೀವಿಗಳಿಗೆ ಕಿರಿಕಿರಿ ಆಗುವುದು ದುಃಖದ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಾರ್ಕಿಂಗ್ ಸಮಸ್ಯೆ, ಕ್ಯಾಂಪಸ್ ನಲ್ಲಿ ಶಿಸ್ತಿರಲು ಸಫಾರಿ ಕೌಂಟರ್ ಇಂದಿನಿಂದ ಬದಲಾಗಿದೆ. ಮೊದಲ ದಿನವೇ ೨೮ ಬಸ್ ಗಳು ಫುಲ್ ಆಗಿದ್ದು ೪.೮೦ ಲಕ್ಷ ರೂ. ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು.

Conclusion:ಒಟ್ಟಿನಲ್ಲಿ ಹುಲಿರಾಯನನ್ನು
ನೇರವಾಗಿ ಕಣ್ತುಂಬಿಕೊಳ್ಳಲು
ಬಂಡೀಪುರಕ್ಕೆ ಪ್ರವಾಸಿಗರು ದಿನದಿಂದ ದಿನಕ್ಕೆ ಲಗ್ಗೆ ಇಡುತ್ತಿದ್ದು ವನ್ಯಜೀವಿಗಳಿಗೆ ಕಿರಿಕಿರಿಯಾಗದಂತೆ ಕಾಡನ್ನು ಕಾಪಾಡಬೇಕಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.