ETV Bharat / state

ಪರಾರಿಯಾದ‌ವ ಫೇಸ್‍ಬುಕ್​ನಲ್ಲಿ ಆ್ಯಕ್ಟಿವ್​: ಬಂಧಿಸಲು ವಿಫಲರಾದರೇ ಬೇಗೂರು ಪೊಲೀಸರು?

ತಲೆಮರೆಸಿಕೊಂಡ ಆರೋಪಿಯೋರ್ವ ಫೇಸ್​ಬುಕ್​ನಲ್ಲಿ ಸಕ್ರಿಯನಾಗಿದ್ದರೂ ಆತನನ್ನು ಸೆರೆಹಿಡಿಯುವಲ್ಲಿ ಬೇಗೂರು ಪೊಲೀಸರು ವಿಫಲರಾಗಿದ್ದಾರೆಂಬ ಮಾತು ಕೇಳಿಬಂದಿದೆ.

author img

By

Published : Jan 14, 2022, 2:54 PM IST

is beguru police failed to detect a accused siddaraju ?
ಪರಾರಿಯಾದ ಆರೋಪಿ ಸಿದ್ದರಾಜು

ಚಾಮರಾಜನಗರ: ಜಾತಿನಿಂದನೆ, ಪೊಲೀಸರ ಮೇಲೆ ಗುಂಪು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಆರೋಪಿ ಫೇಸ್​ಬುಕ್​ನಲ್ಲಿ ಆ್ಯಕ್ಟಿವ್​ ಆಗಿದ್ದು ಆತನನ್ನು ಬಂಧಿಸುವಲ್ಲಿ ಬೇಗೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹೊಣಕನಪುರ ಗ್ರಾಮದ ಸಿದ್ದರಾಜು ಪೊಲೀಸರಿಂದ ತಲೆ ಮರೆಸಿಕೊಂಡು ಫೇಸ್​ಬುಕ್​ನಲ್ಲಿ ಆ್ಯಕ್ಟಿವ್​ ಆಗಿದ್ದಾನೆ. ಕಳೆದ ಮಂಗಳವಾರ ರಾತ್ರಿ ಜಾತಿನಿಂದನೆ ಕೇಸ್​ನಡಿ ಬಂಧಿಸಲು ತೆರಳಿದ್ದ ವೇಳೆ ಸಿದ್ದರಾಜು ಹಾಗೂ ಸಂಬಂಧಿಕರು ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿದ್ದರು. ಆ ವೇಳೆ, ಆರೋಪಿ ಸಿದ್ದರಾಜು ಪರಾರಿಯಾಗಿದ್ದ.

siddaraju face book posts
ಆರೋಪಿ ಸಿದ್ದರಾಜು ಫೇಸ್​ಬುಕ್​ ಪೋಸ್ಟ್​

ಬಳಿಕ, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕದಲ್ಲಿ ಕಾಣಿಸಿಕೊಂಡು ಪ್ರಕರಣದಿಂದ ಬಚಾವಾಗಲು ಯತ್ನಿಸಿದ್ದು ಸುದ್ದಿಯಾಗಿತ್ತು. ಇದೀಗ ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಫೇಸ್​​ಬುಕ್​ನಲ್ಲಿ ಪೋಸ್ಟ್​ ಹಾಕುತ್ತಿದ್ದಾನೆ.

siddaraju face book photo
ಆರೋಪಿ ಸಿದ್ದರಾಜು ಫೇಸ್​ಬುಕ್​ ಫೋಟೋ

ಇದನ್ನೂ ಓದಿ: ಲಂಚ ಆರೋಪ: ರವಿ ಚನ್ನಣ್ಣನವರ ಅಮಾನತಿಗೆ ಆಪ್ ಒತ್ತಾಯ

ಹೀಗಾಗಿ, ಆರೋಪಿ ಪಾದಯಾತ್ರೆಯಲ್ಲಿ ಕಾಣಿಸಿಕೊಂಡು, ಫೇಸ್​ಬುಕ್​ನಲ್ಲಿ ಸಕ್ರಿಯವಾಗಿದ್ದರೂ ಆತನನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆಂಬ ಆರೋಪ ಕೇಳಿಬಂದಿದೆ.

ಚಾಮರಾಜನಗರ: ಜಾತಿನಿಂದನೆ, ಪೊಲೀಸರ ಮೇಲೆ ಗುಂಪು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಆರೋಪಿ ಫೇಸ್​ಬುಕ್​ನಲ್ಲಿ ಆ್ಯಕ್ಟಿವ್​ ಆಗಿದ್ದು ಆತನನ್ನು ಬಂಧಿಸುವಲ್ಲಿ ಬೇಗೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹೊಣಕನಪುರ ಗ್ರಾಮದ ಸಿದ್ದರಾಜು ಪೊಲೀಸರಿಂದ ತಲೆ ಮರೆಸಿಕೊಂಡು ಫೇಸ್​ಬುಕ್​ನಲ್ಲಿ ಆ್ಯಕ್ಟಿವ್​ ಆಗಿದ್ದಾನೆ. ಕಳೆದ ಮಂಗಳವಾರ ರಾತ್ರಿ ಜಾತಿನಿಂದನೆ ಕೇಸ್​ನಡಿ ಬಂಧಿಸಲು ತೆರಳಿದ್ದ ವೇಳೆ ಸಿದ್ದರಾಜು ಹಾಗೂ ಸಂಬಂಧಿಕರು ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿದ್ದರು. ಆ ವೇಳೆ, ಆರೋಪಿ ಸಿದ್ದರಾಜು ಪರಾರಿಯಾಗಿದ್ದ.

siddaraju face book posts
ಆರೋಪಿ ಸಿದ್ದರಾಜು ಫೇಸ್​ಬುಕ್​ ಪೋಸ್ಟ್​

ಬಳಿಕ, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕದಲ್ಲಿ ಕಾಣಿಸಿಕೊಂಡು ಪ್ರಕರಣದಿಂದ ಬಚಾವಾಗಲು ಯತ್ನಿಸಿದ್ದು ಸುದ್ದಿಯಾಗಿತ್ತು. ಇದೀಗ ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಫೇಸ್​​ಬುಕ್​ನಲ್ಲಿ ಪೋಸ್ಟ್​ ಹಾಕುತ್ತಿದ್ದಾನೆ.

siddaraju face book photo
ಆರೋಪಿ ಸಿದ್ದರಾಜು ಫೇಸ್​ಬುಕ್​ ಫೋಟೋ

ಇದನ್ನೂ ಓದಿ: ಲಂಚ ಆರೋಪ: ರವಿ ಚನ್ನಣ್ಣನವರ ಅಮಾನತಿಗೆ ಆಪ್ ಒತ್ತಾಯ

ಹೀಗಾಗಿ, ಆರೋಪಿ ಪಾದಯಾತ್ರೆಯಲ್ಲಿ ಕಾಣಿಸಿಕೊಂಡು, ಫೇಸ್​ಬುಕ್​ನಲ್ಲಿ ಸಕ್ರಿಯವಾಗಿದ್ದರೂ ಆತನನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆಂಬ ಆರೋಪ ಕೇಳಿಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.