ETV Bharat / state

ಕೊಳ್ಳೇಗಾಲ: ಬೇಟೆಗಾಗಿ ಸಿಡಿಮದ್ದು ಒಯ್ಯುತ್ತಿದ್ದವನ ಬಂಧನ - Detention of person who carrying fireworks in Kollegal

ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಸಿಡಿಮದ್ದು ತಯಾರಿಸಿಕೊಂಡು ಮನೆಯಿಂದ ಹೊರಟಿದ್ದ ವ್ಯಕ್ತಿಯನ್ನು ಕೊಳ್ಳೇಗಾಲದಲ್ಲಿ ಬಂಧಿಸಲಾಗಿದೆ.

Detention of person who carrying fireworks for hunting
ಬೇಟೆಗಾಗಿ ಸಿಡಿಮದ್ದು ಒಯ್ಯುತ್ತಿದ್ದವನ ಬಂಧನ
author img

By

Published : Mar 2, 2021, 8:00 PM IST

ಕೊಳ್ಳೇಗಾಲ (ಚಾಮರಾಜನಗರ) : ಅಕ್ರಮವಾಗಿ ಸಿಡಿಮದ್ದುಗಳನ್ನು ತಯಾರಿಸಿ ಬೇಟೆಗೆ ಒಯ್ಯುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮೇಗಲದೊಡ್ಡಿಯ ಜೋಸೆಫ್ (64) ಬಂಧಿತ ಆರೋಪಿ. ಈತ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಸಿಡಿಮದ್ದು ತಯಾರಿಸಿಕೊಂಡು ಮನೆಯಿಂದ ಹೊರಟಿದ್ದ. ಈ ಬಗ್ಗೆ ಮಾಹಿತಿ‌ ಪಡೆದ ಅರಣ್ಯ ಸಂಚಾರಿ ದಳದ ಎಸ್ಐ ಮುದ್ದುಮಾದೇವ ಸಿಬ್ಬಂದಿ ಮಡಕೇರಿ ಅರಣ್ಯ ಸಂಚಾರಿ ಘಟಕದ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ, ಸಿಡಿಮದ್ದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹುಲಿ ಬೇಟೆಗಾರರು ಅರೆಸ್ಟ್​: 10 ಲಕ್ಷ ರೂ. ಮೌಲ್ಯದ ವಸ್ತುಗಳು ವಶಕ್ಕೆ

ಬಂಧಿತನಿಂದ 25 ಸಿಡಿ ಮದ್ದುಗಳು, 6 ಕೇಪು, 36 ಖಾಲಿ ಕೇಪು, 2 ತಲೆ ಬ್ಯಾಟರಿ, 2 ಚಾರ್ಜರ್, 1 ಟಿವಿಎಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರ ದಳದ ಮುಖ್ಯಪೇದೆ ಲೋಕೇಶ್, ಬಸವರಾಜು, ಶಂಕರ್, ಸ್ವಾಮಿ, ಕುಮಾರಸ್ವಾಮಿ, ತಖೀವುಲ್ಲಾ, ರಾಮಚಂದ್ರ ಇದ್ದರು.

ಕೊಳ್ಳೇಗಾಲ (ಚಾಮರಾಜನಗರ) : ಅಕ್ರಮವಾಗಿ ಸಿಡಿಮದ್ದುಗಳನ್ನು ತಯಾರಿಸಿ ಬೇಟೆಗೆ ಒಯ್ಯುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಮೇಗಲದೊಡ್ಡಿಯ ಜೋಸೆಫ್ (64) ಬಂಧಿತ ಆರೋಪಿ. ಈತ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಸಿಡಿಮದ್ದು ತಯಾರಿಸಿಕೊಂಡು ಮನೆಯಿಂದ ಹೊರಟಿದ್ದ. ಈ ಬಗ್ಗೆ ಮಾಹಿತಿ‌ ಪಡೆದ ಅರಣ್ಯ ಸಂಚಾರಿ ದಳದ ಎಸ್ಐ ಮುದ್ದುಮಾದೇವ ಸಿಬ್ಬಂದಿ ಮಡಕೇರಿ ಅರಣ್ಯ ಸಂಚಾರಿ ಘಟಕದ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ, ಸಿಡಿಮದ್ದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹುಲಿ ಬೇಟೆಗಾರರು ಅರೆಸ್ಟ್​: 10 ಲಕ್ಷ ರೂ. ಮೌಲ್ಯದ ವಸ್ತುಗಳು ವಶಕ್ಕೆ

ಬಂಧಿತನಿಂದ 25 ಸಿಡಿ ಮದ್ದುಗಳು, 6 ಕೇಪು, 36 ಖಾಲಿ ಕೇಪು, 2 ತಲೆ ಬ್ಯಾಟರಿ, 2 ಚಾರ್ಜರ್, 1 ಟಿವಿಎಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರ ದಳದ ಮುಖ್ಯಪೇದೆ ಲೋಕೇಶ್, ಬಸವರಾಜು, ಶಂಕರ್, ಸ್ವಾಮಿ, ಕುಮಾರಸ್ವಾಮಿ, ತಖೀವುಲ್ಲಾ, ರಾಮಚಂದ್ರ ಇದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.