ETV Bharat / state

ಉಘೇ ಉಘೇ ಮಾದಪ್ಪ..! ಏಳುಮಲೆ ಮಲೆಮಹದೇಶ್ವರ ಬೆಟ್ಟ ಏರಿಬಂದ ಭಕ್ತಸಾಗರ!

ಬೆಳಕಿನ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿರುವ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಏಳುಮಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.

author img

By

Published : Oct 28, 2019, 6:21 PM IST

deepavali-celebration-in-male-mahadeswara-temple

ಚಾಮರಾಜನಗರ: ಬೆಳಕಿನ ಹಬ್ಬದ ಸಂಭ್ರಮಕ್ಕೆ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಸಜ್ಜಾಗಿದೆ. ರಾಜ್ಯ-ಅನ್ಯ ರಾಜ್ಯಗಳಿಂದ ಲಕ್ಷಾಂತರ ಮಂದಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಇಂದಿನಿಂದ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ದೀಪಾವಳಿ ರಥೋತ್ಸವ ನಡೆಯುವುದರಿಂದ ಅಂದಾಜು ಲಕ್ಷಾಂತರ ಭಕ್ತಾದಿಗಳು ಮಾದಪ್ಪನ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇದೆ. ಪ್ರಾಧಿಕಾರ 24 ಗಂಟೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿದೆ.

deepavali-celebration-in-male-mahadeswara-temple
ಶ್ರೀಕ್ಷೇತ್ರ ಏಳುಮಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು

ಇಂದು ಬೇಡ ಗಂಪಣ ಸಮುದಾಯದ ಬಾಲಕಿಯರು ಮಧ್ಯಾಹ್ನ ಹಾಲರವೆ ಸೇವೆ ಸಲ್ಲಿಸಿದರು. 108 ಮಂದಿ ಕನ್ಯೆಯರು ಅಂತರಗಂಗೆಯಿಂದ ಪವಿತ್ರ ಅಮೃತ ಗಂಗೆಯನ್ನು ಕಲಷದಲ್ಲಿ ತಂದು ಸ್ವಾಮಿಯ ಅಭಿಷೇಕಕ್ಕೆ ನೀಡಿದರು.

ಭಕ್ತಸಮೂಹ

ಸ್ವಾಮಿಯ ಸನ್ನಿಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿರುವುದರಿಂದ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಪದೇಪದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ‌. ಮಲೆಮಹದೇಶ್ವರ ವನ್ಯಜೀವಿಧಾಮ ಪ್ಲಾಸ್ಟಿಕ್ ರಾಕ್ಷಸನ ಹಾವಳಿ ತಡೆಗೆ ಸ್ವಯಂಸೇವಕರನ್ನೂ ನೇಮಿಸಿದೆ.

ಚಾಮರಾಜನಗರ: ಬೆಳಕಿನ ಹಬ್ಬದ ಸಂಭ್ರಮಕ್ಕೆ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಸಜ್ಜಾಗಿದೆ. ರಾಜ್ಯ-ಅನ್ಯ ರಾಜ್ಯಗಳಿಂದ ಲಕ್ಷಾಂತರ ಮಂದಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಇಂದಿನಿಂದ ಬೆಟ್ಟದಲ್ಲಿ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ದೀಪಾವಳಿ ರಥೋತ್ಸವ ನಡೆಯುವುದರಿಂದ ಅಂದಾಜು ಲಕ್ಷಾಂತರ ಭಕ್ತಾದಿಗಳು ಮಾದಪ್ಪನ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇದೆ. ಪ್ರಾಧಿಕಾರ 24 ಗಂಟೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿದೆ.

deepavali-celebration-in-male-mahadeswara-temple
ಶ್ರೀಕ್ಷೇತ್ರ ಏಳುಮಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ದಂಡು

ಇಂದು ಬೇಡ ಗಂಪಣ ಸಮುದಾಯದ ಬಾಲಕಿಯರು ಮಧ್ಯಾಹ್ನ ಹಾಲರವೆ ಸೇವೆ ಸಲ್ಲಿಸಿದರು. 108 ಮಂದಿ ಕನ್ಯೆಯರು ಅಂತರಗಂಗೆಯಿಂದ ಪವಿತ್ರ ಅಮೃತ ಗಂಗೆಯನ್ನು ಕಲಷದಲ್ಲಿ ತಂದು ಸ್ವಾಮಿಯ ಅಭಿಷೇಕಕ್ಕೆ ನೀಡಿದರು.

ಭಕ್ತಸಮೂಹ

ಸ್ವಾಮಿಯ ಸನ್ನಿಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿರುವುದರಿಂದ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಪದೇಪದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ‌. ಮಲೆಮಹದೇಶ್ವರ ವನ್ಯಜೀವಿಧಾಮ ಪ್ಲಾಸ್ಟಿಕ್ ರಾಕ್ಷಸನ ಹಾವಳಿ ತಡೆಗೆ ಸ್ವಯಂಸೇವಕರನ್ನೂ ನೇಮಿಸಿದೆ.

Intro:ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ಸಡಗರ: ಏಳುಮಲೆ ಏರಿ ಬಂದ ಭಕ್ತಸಾಗರ!

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯು ಕಳೆಗಟ್ಟಿದ್ದು ರಾಜ್ಯಾದ್ಯಂತ ಲಕ್ಷಾಂತರ ಮಂದಿ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದಾರೆ.

Body:ಮಂಗಳವಾರ ದೀಪಾವಳಿ ರಥೋತ್ಸವ ನಡೆಯುವುದರಿಂದ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಮಾದಪ್ಪನ ಬೆಟ್ಟಕ್ಕೆ ಬಂದಿದ್ದು ಪ್ರಾಧಿಕಾರ 24 ಗಂಟೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿದೆ.

ಬೇಡಗಂಪಣ ಸಮುದಾಯದ ಬಾಲಕಿಯರು ಮಧ್ಯಾಹ್ನ ಹಾಲರವೆ ಸೇವೆ ಸಲ್ಲಿಸಿದರು. ೧೦೮ ಮಂದಿ ಕನ್ಯೆಯರು ಅಂತರಗಂಗೆಯಿಂದ ಪವಿತ್ರ ಅಮೃತಗಂಗೆಯನ್ನು ಕಲಷದಲ್ಲಿ ತಂದು ಸ್ವಾಮಿಯ ಅಭಿಷೇಕಕ್ಕೆ ನೀಡಿದರು.

ಮಂಗಳವಾರ ಮುಂಜಾನೆ ಮಲೆಮಹದೇಶ್ವರನ ರಥೋತ್ಸವ ನಡೆಯಲಿದ್ದು ಮಹದೇಶ್ವರ ಬೆಟ್ಡ ಅಭಿವೃದ್ಧಿ ಪ್ರಾಧಿಕಾರ ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಅಹಿತಕರ ಘಟನೆ ನಡೆಯದಂತೆ ಕೊಳ್ಳೇಗಾಲ ಡಿವೈಎಸ್ಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Conclusion:
ಭಕ್ತಸಾಗರವೇ ಬೆಟ್ಟಕ್ಕೆ ಹರಿದುಬರುತ್ತಿರುವುದರಿಂದ ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಂ ಉಂಟಾಗುತ್ತಿದೆ‌. ಮಲೆಮಹದೇಶ್ವರ ವನ್ಯಜೀವಿಧಾಮ ಪ್ಲಾಸ್ಟಿಕ್ ರಾಕ್ಷಸನ ಹಾವಳಿ ತಡೆಗೆ ಸ್ವಯಂಸೇವಕರನ್ನು ನೇಮಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.