ETV Bharat / state

ಅಬಕಾರಿ ಪ್ಲಾನ್ ಸಕ್ಸಸ್ ಆದ್ರೆ ಕುಡುಕರೇ ಮಾದರಿ... ಯಾವ ವಿಚಾರದಲ್ಲಿ ಎಂದರೆ...? - ಕೊರೊನಾವೈರಸ್ ಸುರಕ್ಷತೆ

ಕುಡುಕರು ಎಂದು ಮೂಗು ಮುರಿಯಬೇಡಿ ನಮ್ಮಲ್ಲಿರುವ ಪ್ರಜ್ಞೆ ನಿಮ್ಮಲ್ಲಿಲ್ಲ. ರಾಜ್ಯದ ಬೊಕ್ಕಸಕ್ಕೆ ಸಿಂಹಪಾಲು ನೀಡುವ ನಾವು ಕೊರೊನಾ ವಿಚಾರದಲ್ಲೂ ನಾವೇ ಸಮಾಜಕ್ಕೆ ಮಾದರಿ ಎಂಬಂತಾಗಿದೆ ಮದ್ಯಪ್ರಿಯರ ವರ್ತನೆ. ಹೇಗಪ್ಪಾ ಅಂದ್ರಾ ಈ ಸ್ಟೋರಿ ನೋಡಿ...

wine shops
ಮದ್ಯದಂಗಡಿ
author img

By

Published : Mar 23, 2020, 11:23 PM IST

ಚಾಮರಾಜನಗರ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅದರ ಬಿಸಿ ಎಲ್ಲರಿಗೂ ತಟ್ಟಿದೆ. ಮದ್ಯಪ್ರಿಯರಂತೂ ಪತರಗುಟ್ಟಿದ್ದಾರೆ. ಆದರೆ, ಈಗ ಅವರು ತೋರುತ್ತಿರುವ ವರ್ತನೆ ಒಂದು ರೀತಿ ಎಲ್ಲರಿಗೂ ಮಾದರಿಯಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೊಸ ಪ್ಲಾನ್​

ಹೌದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಅಬಕಾರಿ ಡಿಸಿ ಮಾದೇಶ್ ಖಡಕ್ ಸೂಚನೆ ಕೊಟ್ಟಿರುವ ಹಿನ್ನೆಲೆ ಜಿಲ್ಲೆಯ 10 ಕ್ಕೂ ಹೆಚ್ಚು ಎಂಆರ್​ಪಿ ಮದ್ಯದಂಗಡಿಗಳಲ್ಲಿ ಸಾಮಾಜಿಕ‌ ಅಂತರ ಪಾಲನೆಯಾಗುತ್ತಿದೆ‌. ಎರಡು ಅಡಿ ಅಂತರದಲ್ಲಿ ಅಬಕಾರಿ ಇಲಾಖೆ ಬಾಕ್ಸ್​ಗಳನ್ನು ಮಾಡಿದ್ದು ಮದ್ಯ ಕೊಳ್ಳಲು ಬರುವವರು ಬಾಕ್ಸ್​ನೊಳಗೆ ನಿಂತು ಮದ್ಯ ತೆಗೆದುಕೊಳ್ಳಬೇಕು. ಈ ಮೂಲಕ ಕೊರೊನಾ ವಿರುದ್ಧ ಪ್ರಾಕ್ಟಿಕಲ್ ಹೋರಾಟಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಎಂಎಸ್ಐಎಲ್, ವೈನ್ ಸ್ಟೋರ್ ಹೊರತುಪಡಿಸಿ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ದಾಗಿದ್ದರಿಂದ ಎಂಆರ್​ಪಿ ಅಂಗಡಿಗಳಲ್ಲಿ ಜನಜಂಗುಳಿಯೇ ನೆರೆಯುತ್ತಿತ್ತು. ಜನಜಂಗುಳಿಯಲ್ಲಿ ಕೊರೊನಾ ವೈರಸ್ ಹರಡದಿರಲಿ ಎಂದು ಅಬಕಾರಿ ಇಲಾಖೆ ಜಾರಿಗೆ ತಂದಿರುವ ಕೇರಳ ಪ್ಲಾನ್​ಗೆ ಕುಡುಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಕುರಿತು ಅಬಕಾರಿ ಡಿಸಿ ಮಾದೇಶ್ ಮಾತನಾಡಿ, ಎಂಎಸ್ಐಎಲ್ ಅಂಗಡಿಗಳಲ್ಲಿ ಜನದಟ್ಟನೆ ಆಗುವ ಕಾರಣದಿಂದ ಸೋಷಿಯಲ್ ಡಿಸ್ಟೆನ್ಸ್ ಇರಲೆಂದು ಕೇರಳ ಶಾಪ್​ಗಳಲ್ಲಿರುವಂತೆ ಸಾಲಾಗಿ ನಡುವೆ ಅಂತರವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು, ಎಂಎಸ್ಐಎಲ್ ಎಡಿಒ ಆಗಿರುವ ಮಹಾದೇವಯ್ಯ ಮಾತನಾಡಿ, ವೈರಸ್ ಹರಡಿದರಲೆಂದು ಅಬಕಾರಿ ಡಿಸಿ ಆದೇಶದ ಮೇರೆಗೆ ಮದ್ಯ ಕೊಳ್ಳಲು ಬರುವವರು ಎರಡು ಮೂರು ಅಡಿ ಅಂತರದಲ್ಲಿ ಬರಲೆಂದು ಬಾಕ್ಸ್​ಗಳನ್ನು ಮಾಡಿರುತ್ತಾರೆ. ಇದಕ್ಕೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ತಿಳಿಸಿದರು.

ಚಾಮರಾಜನಗರ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅದರ ಬಿಸಿ ಎಲ್ಲರಿಗೂ ತಟ್ಟಿದೆ. ಮದ್ಯಪ್ರಿಯರಂತೂ ಪತರಗುಟ್ಟಿದ್ದಾರೆ. ಆದರೆ, ಈಗ ಅವರು ತೋರುತ್ತಿರುವ ವರ್ತನೆ ಒಂದು ರೀತಿ ಎಲ್ಲರಿಗೂ ಮಾದರಿಯಾಗಿದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೊಸ ಪ್ಲಾನ್​

ಹೌದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಅಬಕಾರಿ ಡಿಸಿ ಮಾದೇಶ್ ಖಡಕ್ ಸೂಚನೆ ಕೊಟ್ಟಿರುವ ಹಿನ್ನೆಲೆ ಜಿಲ್ಲೆಯ 10 ಕ್ಕೂ ಹೆಚ್ಚು ಎಂಆರ್​ಪಿ ಮದ್ಯದಂಗಡಿಗಳಲ್ಲಿ ಸಾಮಾಜಿಕ‌ ಅಂತರ ಪಾಲನೆಯಾಗುತ್ತಿದೆ‌. ಎರಡು ಅಡಿ ಅಂತರದಲ್ಲಿ ಅಬಕಾರಿ ಇಲಾಖೆ ಬಾಕ್ಸ್​ಗಳನ್ನು ಮಾಡಿದ್ದು ಮದ್ಯ ಕೊಳ್ಳಲು ಬರುವವರು ಬಾಕ್ಸ್​ನೊಳಗೆ ನಿಂತು ಮದ್ಯ ತೆಗೆದುಕೊಳ್ಳಬೇಕು. ಈ ಮೂಲಕ ಕೊರೊನಾ ವಿರುದ್ಧ ಪ್ರಾಕ್ಟಿಕಲ್ ಹೋರಾಟಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಎಂಎಸ್ಐಎಲ್, ವೈನ್ ಸ್ಟೋರ್ ಹೊರತುಪಡಿಸಿ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ದಾಗಿದ್ದರಿಂದ ಎಂಆರ್​ಪಿ ಅಂಗಡಿಗಳಲ್ಲಿ ಜನಜಂಗುಳಿಯೇ ನೆರೆಯುತ್ತಿತ್ತು. ಜನಜಂಗುಳಿಯಲ್ಲಿ ಕೊರೊನಾ ವೈರಸ್ ಹರಡದಿರಲಿ ಎಂದು ಅಬಕಾರಿ ಇಲಾಖೆ ಜಾರಿಗೆ ತಂದಿರುವ ಕೇರಳ ಪ್ಲಾನ್​ಗೆ ಕುಡುಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಕುರಿತು ಅಬಕಾರಿ ಡಿಸಿ ಮಾದೇಶ್ ಮಾತನಾಡಿ, ಎಂಎಸ್ಐಎಲ್ ಅಂಗಡಿಗಳಲ್ಲಿ ಜನದಟ್ಟನೆ ಆಗುವ ಕಾರಣದಿಂದ ಸೋಷಿಯಲ್ ಡಿಸ್ಟೆನ್ಸ್ ಇರಲೆಂದು ಕೇರಳ ಶಾಪ್​ಗಳಲ್ಲಿರುವಂತೆ ಸಾಲಾಗಿ ನಡುವೆ ಅಂತರವಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು, ಎಂಎಸ್ಐಎಲ್ ಎಡಿಒ ಆಗಿರುವ ಮಹಾದೇವಯ್ಯ ಮಾತನಾಡಿ, ವೈರಸ್ ಹರಡಿದರಲೆಂದು ಅಬಕಾರಿ ಡಿಸಿ ಆದೇಶದ ಮೇರೆಗೆ ಮದ್ಯ ಕೊಳ್ಳಲು ಬರುವವರು ಎರಡು ಮೂರು ಅಡಿ ಅಂತರದಲ್ಲಿ ಬರಲೆಂದು ಬಾಕ್ಸ್​ಗಳನ್ನು ಮಾಡಿರುತ್ತಾರೆ. ಇದಕ್ಕೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.