ETV Bharat / state

ಹಸು ಮೇಯಿಸುತ್ತಿದ್ದವನ ಮೇಲೆ ಕಾಡುಕೋಣ ದಾಳಿ: ವೃದ್ಧ ಸಾವು

author img

By

Published : Aug 30, 2020, 4:40 PM IST

ಕಾಡುಕೋಣ ದಾಳಿಗೆ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಶಾಗ್ಯ ಗ್ರಾಮದಲ್ಲಿ ಜರುಗಿದೆ.

chamarajanagar old man died of a bison attack
ಕಾಡುಕೋಣ ದಾಳಿ

ಚಾಮರಾಜನಗರ: ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಕಾಡುಕೋಣನ ದಾಳಿಗೆ ಬಲಿಯಾಗಿರುವ ಘಟನೆ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚನ್ನಬಸವಪ್ಪ (62) ಮೃತ ದುರ್ದೈವಿ. ಮೃತರ ಜಮೀನು ಕಾಡಂಚಿನಲ್ಲಿದ್ದು ಹಸು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡುಕೋಣ ತೊಡೆ, ಹೊಟ್ಟೆಭಾಗಕ್ಕೆ ತಿವಿದಿದೆ.

ಗಂಭೀರ ಗಾಯಗೊಂಡಿದ್ದ ವೃದ್ಧನನ್ನು ಅಕ್ಕಪಕ್ಕದ ರೈತರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಾವೇರಿ ವನ್ಯಧಾಮದ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ.

ಚಾಮರಾಜನಗರ: ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಕಾಡುಕೋಣನ ದಾಳಿಗೆ ಬಲಿಯಾಗಿರುವ ಘಟನೆ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚನ್ನಬಸವಪ್ಪ (62) ಮೃತ ದುರ್ದೈವಿ. ಮೃತರ ಜಮೀನು ಕಾಡಂಚಿನಲ್ಲಿದ್ದು ಹಸು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಕಾಡುಕೋಣ ತೊಡೆ, ಹೊಟ್ಟೆಭಾಗಕ್ಕೆ ತಿವಿದಿದೆ.

ಗಂಭೀರ ಗಾಯಗೊಂಡಿದ್ದ ವೃದ್ಧನನ್ನು ಅಕ್ಕಪಕ್ಕದ ರೈತರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಾವೇರಿ ವನ್ಯಧಾಮದ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.