ETV Bharat / state

ಬೈಕ್ ಹಿಂದಿಕ್ಕಿದ್ದಕ್ಕೆ ಸಿಟ್ಟಿಗೆದ್ದ... ಸಾರಿಗೆ ಸಂಸ್ಥೆ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ... ಮುಂದೇನಾಯ್ತು! - ಬೈಕ್​ ಸವಾರನಿಂದ ಬಸ್​​ ಚಾಲಕನಿಗೆ ಥಳಿತ

ಚಾಮರಾಜನಗರದಲ್ಲಿ ಬೈಕ್​ ಸವಾರನೊಬ್ಬ ಸರ್ಕಾರಿ ಬಸ್​​ ಹಿಂದೆ ಹೋಗಬೇಕಾದರೆ ಧೂಳು ಕಣ್ಣಿಗೆ ಬಿದ್ದ ಕಾರಣ ಬಸ್​​ ಡ್ರೈವರ್​​ಗೆ ಥಳಿಸಿದ ಘಟನೆ ನಡೆದಿದೆ.

ಹಲ್ಲೆ
author img

By

Published : Nov 12, 2019, 7:36 PM IST

ಚಾಮರಾಜನಗರ: ಕೆಎಸ್ ಆರ್ ಟಿಸಿ ಬಸ್ ಚಾಲಕ ತನ್ನ ಬೈಕ್​​ ಹಿಂದಿಕ್ಕಿದ್ದಕ್ಕೆ ಬೈಕ್​ ಸವಾರ ಹಲ್ಲೆ ಮಾಡಿರುವ ಘಟನೆ, ಸಂತೇಮರಹಳ್ಳಿ ಸಮೀಪದ ಬಾನಳ್ಳಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಾರಿಗೆ ಸಂಸ್ಥೆ ಚಾಲಕ ಶಿವಕುಮಾರ್ ಎಂಬುವರ ಮೇಲೆ ಬೈಕ್ ಸವಾರ ಸಯ್ಯದ್ ಸಮಿವುಲ್ಲಾ ಎಂಬುವನು ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬೈಕ್ ಹಿಂದಿಕ್ಕುವ ವೇಳೆ ತನ್ನ ಕಣ್ಣಿಗೆ ಧೂಳು ಬಿದ್ದಿತು ಎಂದು ನೆಪವೊಡ್ಡಿ ಬಸ್ ಅಡ್ಡಹಾಕಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದುಬಂದಿದೆ.

ಸಾರಿಗೆ ಸಂಸ್ಥೆ ಚಾಲಕನಿಗೆ ಸವಾರನಿಂದ ಹಲ್ಲೆ

ಘಟನೆಯಿಂದ ಕುಪಿತಗೊಂಡ‌ ಪ್ರಯಾಣಿಕರು ಸಮೀವುಲ್ಲಾನನ್ನು ಟಿ.ನರಸೀಪುರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಾಮರಾಜನಗರ: ಕೆಎಸ್ ಆರ್ ಟಿಸಿ ಬಸ್ ಚಾಲಕ ತನ್ನ ಬೈಕ್​​ ಹಿಂದಿಕ್ಕಿದ್ದಕ್ಕೆ ಬೈಕ್​ ಸವಾರ ಹಲ್ಲೆ ಮಾಡಿರುವ ಘಟನೆ, ಸಂತೇಮರಹಳ್ಳಿ ಸಮೀಪದ ಬಾನಳ್ಳಿಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಾರಿಗೆ ಸಂಸ್ಥೆ ಚಾಲಕ ಶಿವಕುಮಾರ್ ಎಂಬುವರ ಮೇಲೆ ಬೈಕ್ ಸವಾರ ಸಯ್ಯದ್ ಸಮಿವುಲ್ಲಾ ಎಂಬುವನು ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬೈಕ್ ಹಿಂದಿಕ್ಕುವ ವೇಳೆ ತನ್ನ ಕಣ್ಣಿಗೆ ಧೂಳು ಬಿದ್ದಿತು ಎಂದು ನೆಪವೊಡ್ಡಿ ಬಸ್ ಅಡ್ಡಹಾಕಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದುಬಂದಿದೆ.

ಸಾರಿಗೆ ಸಂಸ್ಥೆ ಚಾಲಕನಿಗೆ ಸವಾರನಿಂದ ಹಲ್ಲೆ

ಘಟನೆಯಿಂದ ಕುಪಿತಗೊಂಡ‌ ಪ್ರಯಾಣಿಕರು ಸಮೀವುಲ್ಲಾನನ್ನು ಟಿ.ನರಸೀಪುರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ಬೈಕ್ ಹಿಂದಿಕ್ಕಿದ್ದಕ್ಕೆ ಆಕ್ರೋಶ... ಸಾರಿಗೆ ಸಂಸ್ಥೆ ಚಾಲಕನಿಗೆ ಸವಾರನಿಂದ ಹಲ್ಲೆ!

ಚಾಮರಾಜನಗರ: ಕೆಎಸ್ ಆರ್ ಟಿಸಿ ಬಸ್ ಚಾಲಕ ತನ್ನ ಬೈಕನ್ನು ಹಿಂದಿಕ್ಕಿದ್ದಕ್ಕೆ ಚಾಲಕನ ಮೇಲೆ ಸವಾರ ಹಲ್ಲೆ ನಡೆಸಿರುವ ಘಟನೆ ಸಂತೇಮರಹಳ್ಳಿ ಸಮೀಪದ ಬಾನಳ್ಳಿಯಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Body:ಸಾರಿಗೆ ಸಂಸ್ಥೆ ಚಾಲಕ ಶಿವಕುಮಾರ್ ಎಂಬವರ ಮೇಲೆ
ಬೈಕ್ ಸವಾರ ಸಯ್ಯದ್ ಸಮಿವುಲ್ಲಾ ಎಂಬವನು ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಬೈಕ್ ಹಿಂದಿಕ್ಕುವ ವೇಳೆ ತನ್ನ ಕಣ್ಣಿಗೆ ಧೂಳು ಬಿದ್ದಿತು ಎಂದು ನೆಪವೊಡ್ಡಿ ಬಸ್ ನ್ನು ಅಡ್ಡಹಾಕಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕುಪಿತಗೊಂಡ‌ ಪ್ರಯಾಣಿಕರು ಸಮೀವುಲ್ಲಾನನ್ನು ಟಿ.ನರಸೀಪುರ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಸಂತೇಮರಹಳ್ಳಿ ವ್ಯಾಪ್ತಿಗೆ ಬರಲಿದೆ ಎಂದಾಗ ಸಮೀವುಲ್ಲಾನನ್ನು ಸಂತೇಮರಹಳ್ಳಿ ಠಾಣೆಗೆ ಒಪ್ಪಿಸಿದ್ದಾರೆ‌.

Conclusion:ಸಂತೇಮರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.