ETV Bharat / state

ಲಿಂಗಾಭಿಷೇಕಕ್ಕೆ ಗಂಗೆ ತರಲು 35 ಕಿ.ಮೀ ಬರಿಗಾಲಲ್ಲಿ ನಡೆದ ಭಕ್ತರು

ಈ ಗ್ರಾಮದ ಜನರು ಶಿವರಾತ್ರಿಯ ದಿನ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ಮಾಡುವ ಸಂಪ್ರದಾಯವನ್ನು ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದಾರೆ.

author img

By

Published : Mar 4, 2019, 11:31 PM IST

ಬರಿಗಾಲಲ್ಲಿ ಗಂಗೆ ಹೊತ್ತು ತರುತ್ತಿರುವ ಭಕ್ತರು

ಚಾಮರಾಜನಗರ: ಶಿವರಾತ್ರಿ ಎಂದರೆ ಜಾಗರಣೆ, ಬಿಲ್ವಾರ್ಚಣೆ, ಅಭಿಷೇಕ ಸಾಮಾನ್ಯ. ಆದರೆ ಜಿಲ್ಲೆಯ ಈ ಗ್ರಾಮದ ಸಂಪ್ರದಾಯ ಸ್ವಲ್ಪ ಕಷ್ಟವೇ.

ಹೌದು..,ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಬರೋಬ್ಬರಿ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ‌.

ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ ಗ್ರಾಮದ 6 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 6ಕುಟುಂಬಗಳಿಂದ ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ,ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆಮೂಲಕ ಗ್ರಾಮ ಸೇರುತ್ತಾರೆ.

4 ಬಿಂದಿಗೆಗಳ ನೀರಲ್ಲಿಸಿದ್ಧರಾಮೇಶ್ವರನ ಅಭಿಷೇಕಕ್ಕೆ 1ಬಿಂದಿಗೆ ನೀರು, ಇನ್ನಿತರ‌ ದೇವರ ಅಭಿಷೇಕಕ್ಕೆ 2 ಬಿಂದಿಗೆ ನೀರು ಹಾಗೂ ಉಳಿದ 1ಬಿಂದಿಗೆ ನೀರು ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.

ಚಾಮರಾಜನಗರ: ಶಿವರಾತ್ರಿ ಎಂದರೆ ಜಾಗರಣೆ, ಬಿಲ್ವಾರ್ಚಣೆ, ಅಭಿಷೇಕ ಸಾಮಾನ್ಯ. ಆದರೆ ಜಿಲ್ಲೆಯ ಈ ಗ್ರಾಮದ ಸಂಪ್ರದಾಯ ಸ್ವಲ್ಪ ಕಷ್ಟವೇ.

ಹೌದು..,ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಬರೋಬ್ಬರಿ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ‌.

ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ ಗ್ರಾಮದ 6 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 6ಕುಟುಂಬಗಳಿಂದ ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ,ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆಮೂಲಕ ಗ್ರಾಮ ಸೇರುತ್ತಾರೆ.

4 ಬಿಂದಿಗೆಗಳ ನೀರಲ್ಲಿಸಿದ್ಧರಾಮೇಶ್ವರನ ಅಭಿಷೇಕಕ್ಕೆ 1ಬಿಂದಿಗೆ ನೀರು, ಇನ್ನಿತರ‌ ದೇವರ ಅಭಿಷೇಕಕ್ಕೆ 2 ಬಿಂದಿಗೆ ನೀರು ಹಾಗೂ ಉಳಿದ 1ಬಿಂದಿಗೆ ನೀರು ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.

Intro:ಲಿಂಗಾಭಿಷೇಕಕ್ಕೆ ಗಂಗೆ ತರಲು 35 ಕಿಮೀ ಬರಿಗಾಲಲ್ಲಿ ನಡೆವ ಭಕ್ತರು: ಗಡಿಜಿಲ್ಲೆಯಲ್ಲಿ ವಿಶಿಷ್ಟ ಶಿವರಾತ್ರಿ ಸಂಪ್ರದಾಯ 



ಚಾಮರಾಜನಗರ: ಶಿವರಾತ್ರಿ ಎಂದರೆ ಜಾಗರಣೆ, ಬಿಲ್ವಾರ್ಚಣೆ, ಅಭಿಷೇಕ ಸಾಮಾನ್ಯ. ಆದರೆ, ಗಡಿಜಿಲ್ಲೆಯ ಈ ಗ್ರಾಮದ ಸಂಪ್ರದಾಯ ತುಸು ಕಷ್ಟವೇ





Body:ಹೌದು, ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಬರೋಬ್ಬರಿ ೩೫ ಕಿಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ‌.



ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದ 

ಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ ೬ ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ.


ಗ್ರಾಮದ ೬ ಕುಟುಂಬಗಳಿಂದ

ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ,  ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಾಡಿಗೆ  ಮೂಲಕ ಗ್ರಾಮ ಸೇರುತ್ತಾರೆ.


೪ ಬಿಂದಿಗೆಗಳ ನೀರು ಸಿದ್ಧರಾಮೇಶ್ವರನ ಅಭಿಷೇಕಕ್ಕೆ ೧ ಬಿಂದಿಗೆ ನೀರು ಇನ್ನಿತರ‌ ದೇವರ ಅಭಿಷೇಕಕ್ಕೆ ಹಾಗೂ ಉಳಿದ ೧ ಬಿಂದಿಗೆ ನೀರು ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.


ಈ ಕುರಿತು ಕಾಲ್ನಡಿಗೆಯಲ್ಲಿ ಗಂಗೆ ತರಲು ತೆರಳಿದ್ದ ನಾಗಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ಶತಮನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು ನಮ್ಮ ಕುಟುಂಬಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ. ರಾತ್ರಿ ಭಜನೆ,ವಿಶೇಷ ಪೂಜೆ, ಜಾಗರಣೆ ನಡೆಯಲಿದೆ ಎಂದರು.





Conclusion:ಒಟ್ಟಿನಲ್ಲಿ ಇವರ ಭಕ್ತಿಗೆ, ಆಧುನಿಕ ಯುಗದಲ್ಲೂ ಪಾಲಿಸುತ್ತಿರುವ ಸಂಪ್ರದಾಯ ಪಾಲನೆಗೆ ಶಿವನೂ ಮೆಚ್ಚಬಹುದೇನೋ ಅನಿಸದಿರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.