ಬೆಂಗಳೂರು: ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ 13 ಮಂದಿಯ ಖತರ್ನಾಕ್ ಗ್ಯಾಂಗ್ಅನ್ನು ಕೊನೆಗೂ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರೆಡ್ ಸ್ಯಾಂಡಲ್ ಗ್ಯಾಂಗ್ ಕಿಂಗ್ ಫಿನ್ ಅಬ್ದುಲ್ ರಷೀದ್ ಅಲಿಯಾಸ್ ಪತ್ತು ಜುಬೇರ್ ಖಾನ್ , ಸಲೀಂ ಖಾನ್ ಸೇರಿ ಒಟ್ಟು 13 ಮಂದಿಯನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಬಂಧಿತರಿಂದ 3.5 ಕೋಟಿ ಬೆಲೆ ಬಾಳುವ 4 ಸಾವಿರ ಕೆ.ಜಿ ರೆಡ್ ಸ್ಯಾಂಡಲ್ ವಶಡಿಸಿಕೊಳ್ಳಲಾಗಿದೆ.
ಕಳೆದ ಹತ್ತಾರು ವರ್ಷದಿಂದ ಪೊಲೀಸರಿಗೆ ಸವಾಲಾಗಿದ್ದ ಅಂತರ್ ರಾಜ್ಯ ರೆಡ್ ಸ್ಯಾಂಡಲ್ ಕಳ್ಳರ ಮನೆಗಳ ಮೇಲೆ ಸಿಸಿಬಿ ಪೊಲೀಸರು ಲಗ್ಗೆ ಇಟ್ಟಿದ್ದಾರೆ. ಅಲೋಕ್ ಕುಮಾರ್ ನೇತೃತ್ವದ 50 ಕ್ಕೂ ಹೆಚ್ಚು ಪೊಲೀಸರ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳು ರೆಡ್ ಸ್ಯಾಂಡಲ್ ವಶಪಡಿಸಿಕೊಂಡಿದ್ದಾರೆ.
ಖದೀಮರು ಕಟ್ಟಿಗೇನಹಳ್ಳಿಯಿಂದ ರೆಡ್ ಸ್ಯಾಂಡಲ್ ಖರೀದಿಸಿ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿಯ ಮೇಲೆ ನಿನ್ನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೀಗಂಧದ ಮರಗಳನ್ನ ಸ್ಟಾಕ್ ಮಾಡಿರುವ ಶಂಕೆ ಮೇರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ವಿಭಾಗ ಡಿಸಿಪಿ ದೇವರಾಜ್, ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಸೇರಿದಂತೆ 50 ಕ್ಕೂ ಹೆಚ್ಚು ಪೊಲೀಸರು ಜಸ್ತರಿ ಖಾನ್ರವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.