ETV Bharat / state

ನಾವು ಸತ್ತೋಗಿದಿವಿ ನಮ್ಮ ಮೇಲೆ ಕರುಣೆ ತೊರಿ- ಕಾರಂಜಾ ಸಂತ್ರಸ್ತರ ಗೋಳು...!

ಕಾರಂಜ ಜಲಾಶಯಕ್ಕೆ ಇದ್ದ ಜಮಿನು ಕೊಟ್ಟು ಈಗ ಊಟಕ್ಕೂ ಗತಿ ಇಲ್ಲದಂತೆ ಸುತ್ತಾಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

author img

By

Published : Oct 25, 2019, 6:22 PM IST

ಕಾರಂಜಾ ಸಂತ್ರಸ್ತರನ್ನ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್​

ಬೀದರ್: ಕಾರಂಜಾ ಜಲಾಶಯದಲ್ಲಿ ಭೂಮಿ ಮುಳುಗಡೆಯಾಗಿ ಬೀದಿ ಪಾಲಾಗಿದ್ದಿವಿ, ನಾಲ್ಕು ದಶಕಗಳಿಂದ ಮನವಿ ಕೊಟ್ಟು ಹೋರಾಟ ಮಾಡಿ ಜೀವಂತವಾಗಿದ್ದರೂ ಸತ್ತೋಗಿದ್ದಿವಿ ದಯವಿಟ್ಟು ನಮ್ಮ ಬಗ್ಗೆ ಕರುಣೆ ತೋರಿ ಎಂದು ಸಂತ್ರಸ್ತ ಅಜ್ಜಿಯೊಬ್ಬಳು ಸಚಿವ ಪ್ರಭು ಚವ್ಹಾಣ್ ಮುಂದೆ ಕಣ್ಣಿರು ಹಾಕಿದ್ದಾಳೆ.

ಕಾರಂಜಾ ಸಂತ್ರಸ್ತರನ್ನ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್​

ನಗರದ ಅಂಬೇಡ್ಕರ್ ವೃತ್ತ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡಸಿದ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಬಂದ ಸಚಿವ ಪ್ರಭು ಚವ್ಹಾಣ ಮುಂದೆ ಅಜ್ಜಿ ಕಣ್ಣಿರು ಹಾಕಿದ್ದಾರೆ.

ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ನಾವು ಮನವಿ ಕೊಟ್ಟು ಸಾಕಾಗಿ ಹೊಗಿದೆ. ಜಲಾಶಯ ನಿರ್ಮಾಣಕ್ಕೆ ಭೂಮಿ ಕೊಟ್ಟರೂ ಪರಿಹಾರ ಕೊಡದೇ ಸರ್ಕಾರ ಅನ್ಯಾಯ ಮಾಡುತ್ತಿದೆ. ಅಂದು ನಿಗದಿಪಡಿಸಿದ ಪರಿಹಾರ ಇಂದು ಕೊಟ್ಟರೆ ಹೇಗೆ. ರೂಪಾಯಿ ಮೌಲ್ಯ ಬದಲಾದಂಗೆ ಪರಿಹಾರದ ಮೊತ್ತವು ಬದಲಾಯಿಸಿ ಕೊಡಲು ಆಗಲ್ಲ ಎಂದರೆ ಹೇಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡಿದಕ್ಕೆ ನಮ್ಮ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದ್ದ ಜಮಿನು ಕೊಟ್ಟು ಈಗ ಊಟಕ್ಕೂ ಗತಿ ಇಲ್ಲದಂತೆ ಸುತ್ತಾಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತರ ನಿಯೋಗ ಮಾಡಿ ಸಿಎಂ ಯಡಿಯೂರಪ್ಪ ಅವರ ಹತ್ರ ಕರೆದುಕೊಂಡು ಹೊಗಿ. ಪ್ರತಿ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಅವರು ನಮ್ಮ ಬೆನ್ನಿಗೆ ನಿಂತಿದ್ದರು. ಈಗ ಸರ್ಕಾರ ನಿಮ್ಮದಿದೆ ನಮ್ಮದೊಂದು ನಿಯೋಗ ಮಾಡಿ ಹೊಗೋಣ ಎಂದು ಸಚಿವ ಚವ್ಹಾಣ್​ಗೆ ಒತ್ತಡ ಹಾಕಿದರು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಕೂಡ ಉಪಸ್ಥಿತರಿದ್ದರು.

ಬೀದರ್: ಕಾರಂಜಾ ಜಲಾಶಯದಲ್ಲಿ ಭೂಮಿ ಮುಳುಗಡೆಯಾಗಿ ಬೀದಿ ಪಾಲಾಗಿದ್ದಿವಿ, ನಾಲ್ಕು ದಶಕಗಳಿಂದ ಮನವಿ ಕೊಟ್ಟು ಹೋರಾಟ ಮಾಡಿ ಜೀವಂತವಾಗಿದ್ದರೂ ಸತ್ತೋಗಿದ್ದಿವಿ ದಯವಿಟ್ಟು ನಮ್ಮ ಬಗ್ಗೆ ಕರುಣೆ ತೋರಿ ಎಂದು ಸಂತ್ರಸ್ತ ಅಜ್ಜಿಯೊಬ್ಬಳು ಸಚಿವ ಪ್ರಭು ಚವ್ಹಾಣ್ ಮುಂದೆ ಕಣ್ಣಿರು ಹಾಕಿದ್ದಾಳೆ.

ಕಾರಂಜಾ ಸಂತ್ರಸ್ತರನ್ನ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್​

ನಗರದ ಅಂಬೇಡ್ಕರ್ ವೃತ್ತ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡಸಿದ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಬಂದ ಸಚಿವ ಪ್ರಭು ಚವ್ಹಾಣ ಮುಂದೆ ಅಜ್ಜಿ ಕಣ್ಣಿರು ಹಾಕಿದ್ದಾರೆ.

ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ನಾವು ಮನವಿ ಕೊಟ್ಟು ಸಾಕಾಗಿ ಹೊಗಿದೆ. ಜಲಾಶಯ ನಿರ್ಮಾಣಕ್ಕೆ ಭೂಮಿ ಕೊಟ್ಟರೂ ಪರಿಹಾರ ಕೊಡದೇ ಸರ್ಕಾರ ಅನ್ಯಾಯ ಮಾಡುತ್ತಿದೆ. ಅಂದು ನಿಗದಿಪಡಿಸಿದ ಪರಿಹಾರ ಇಂದು ಕೊಟ್ಟರೆ ಹೇಗೆ. ರೂಪಾಯಿ ಮೌಲ್ಯ ಬದಲಾದಂಗೆ ಪರಿಹಾರದ ಮೊತ್ತವು ಬದಲಾಯಿಸಿ ಕೊಡಲು ಆಗಲ್ಲ ಎಂದರೆ ಹೇಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡಿದಕ್ಕೆ ನಮ್ಮ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದ್ದ ಜಮಿನು ಕೊಟ್ಟು ಈಗ ಊಟಕ್ಕೂ ಗತಿ ಇಲ್ಲದಂತೆ ಸುತ್ತಾಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತರ ನಿಯೋಗ ಮಾಡಿ ಸಿಎಂ ಯಡಿಯೂರಪ್ಪ ಅವರ ಹತ್ರ ಕರೆದುಕೊಂಡು ಹೊಗಿ. ಪ್ರತಿ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಅವರು ನಮ್ಮ ಬೆನ್ನಿಗೆ ನಿಂತಿದ್ದರು. ಈಗ ಸರ್ಕಾರ ನಿಮ್ಮದಿದೆ ನಮ್ಮದೊಂದು ನಿಯೋಗ ಮಾಡಿ ಹೊಗೋಣ ಎಂದು ಸಚಿವ ಚವ್ಹಾಣ್​ಗೆ ಒತ್ತಡ ಹಾಕಿದರು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಕೂಡ ಉಪಸ್ಥಿತರಿದ್ದರು.

Intro:ನಾವು ಸತ್ತೊಗಿದ್ದಿವಿ ನಮ್ಮ ಬಗ್ಗೆ ಕರುಣೆ ತೊರಿಸಿ- ಕಾರಂಜಾ ಸಂತ್ರಸ್ತರ ಗೋಳು...!

ಬೀದರ್:
ಕಾರಂಜಾ ಜಲಾಶಯದಲ್ಲಿ ಭೂಮಿ ಮುಳುಗಡೆಯಾಗಿ ಬೀದಿ ಪಾಲಾಗಿದ್ದಿವಿ, ನಾಲ್ಕು ದಶಕಗಳಿಂದ ಮನವಿ ಕೊಟ್ಟು ಹೋರಾಟ ಮಾಡಿ ಜೀವಂತವಾಗಿದ್ರು ಸತ್ತೊಗಿದ್ದಿವಿ ದಯವಿಟ್ಟು ನಮ್ಮ ಬಗ್ಗೆ ಕರುಣೆ ತೊರಿ ಎಂದು ಸಂತ್ರಸ್ತ ಅಜ್ಜಿಯೊಬ್ಬಳು ಸಚಿವ ಪ್ರಭು ಚವ್ಹಾಣ ಮುಂದೆ ಕಣ್ಣಿರು ಹಾಕಿದ್ದಾಳೆ.

ನಗರದ ಅಂಬೇಡ್ಕರ್ ವೃತ್ತ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡಸಿದ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಬಂದ ಸಚಿವ ಪ್ರಭು ಚವ್ಹಾಣ ಮುಂದೆ ಅಜ್ಜಿ ಕಣ್ಣಿರು ಹಾಕಿದ್ದಾರೆ. ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ನಾವು ಮನವಿ ಕೊಟ್ಟು ಕೊಟ್ಟು ಸಾಕಾಗಿ ಹೊಗಿದೆ. ಜಲಾಶಯ ನಿರ್ಮಾಣಕ್ಕೆ ಭೂಮಿ ಕೊಟ್ಟು ಪರಿಹಾರ ಕೊಡದೆ ಸರ್ಕಾರ ಅನ್ಯಾಯ ಮಾಡ್ತಿದೆ. ಅಂದು ನಿಗದಿಪಡಿಸಿದ ಪರಿಹಾರ ಇಂದು ಕೊಟ್ಟರೆ ಹೆಗೆ ರುಪಾಯಿ ಮೌಲ್ಯ ಬದಲಾದಂಗೆ ಪರಿಹಾರದ ಮೊತ್ತವು ಬದಲಾಯಿಸಿ ಕೊಡಲಿಕ್ಕಾಗೊಲ್ಲ ಅಂದ್ರೆ ಹೆಂಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡಿದಕ್ಕೆ ನಮ್ಮ ಮಕ್ಕಳಿಗೆ ಯಾರು ಹೆಣ್ಣು ಕೊಡ್ತಿಲ್ಲ. ಇರೋ ಜಮಿನು ಕೊಟ್ಟು ಈಗ ಊಟಕ್ಕೂ ಗತಿ ಇಲ್ಲದಂತೆ ಸುತ್ತಾಡುತ್ತಿದ್ದೆವೆ ಎಂದು ರೈತರು ಕೆಂಡ ಕಾರಿದರು.

ಸಂತ್ರಸ್ತರ ನಿಯೋಗ ಮಾಡಿ ಸಿಎಂ ಯಡಿಯೂರಪ್ಪ ಅವರ ಹತ್ರ ಕರಕೊಂಡು ಹೊಗಿ. ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಅವರು ನಮ್ಮ ಬೆನ್ನಿಗೆ ನಿಂತಿದ್ದರು ಈಗ ಸರ್ಕಾರ ನಿಮ್ಮದಿದೆ ನಮ್ಮದೊಂದು ನಿಯೋಗ ಮಾಡಿ ಹೊಗೊಣ ಎಂದು ಸಚಿವ ಚವ್ಹಾಣಗೆ ಒತ್ತಡ ಹಾಕಿದರು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಉಪಸ್ಥಿತರಿದ್ದರು.


Body:ಅನೀಲ


Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.