ETV Bharat / state

ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ಆರೋಪ: ಖಾಸಗಿ ಚಾನಲ್​ ವರದಿಗಾರನ ವಿರುದ್ಧ ಕೇಸ್‌

author img

By

Published : Mar 1, 2020, 4:40 PM IST

ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ ಆರೋಪದಡಿ ಬೀದರ್​ನಲ್ಲಿ ಖಾಸಗಿ ಸುದ್ದಿ ವಾಹಿನಿ ವರದಿಗಾರನ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿವೋರ್ವರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

police station
ನ್ಯೂಟೌನ್ ಪೊಲೀಸ್ ಠಾಣೆ

ಬೀದರ್: ಹಣಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಿರುವ ಆರೋಪದಡಿ ಖಾಸಗಿ ಸುದ್ದಿ ವಾಹಿನಿ ವರದಿಗಾರ ಓಕಾರ್​ ಮಠಪತಿ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿವೋರ್ವರು ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸಚಿವ ಪ್ರಭು ಚವ್ಹಾಣ್​ ಅವರು ಡಿಸೆಂಬರ್ ತಿಂಗಳಲ್ಲಿ ಆರ್​​​ಟಿಒ ಕಚೇರಿ ಮೇಲೆ ದಾಳಿ ನಡೆಸಿದ್ದರು ಆರೋಪ ಕೇಳಿಬಂದಿತ್ತು.

ಅಧಿಕಾರಿ ದೂರಿನಲ್ಲಿ ಏನಿದೆ: ರಜೆಯಲ್ಲಿದ್ದ ಅಧಿಕಾರಿ ಮರಳಿ ಕಚೇರಿಗೆ ಬಂದ ನಂತರ ಖಾಸಗಿ ವಾಹಿನಿ ವರದಿಗಾರ, ಅಧಿಕಾರಿಯೊಂದಿಗೆ ವಿವರವಾಗಿ ಸಂಭಾಷಣೆ ನಡೆಸಿ, ಸಚಿವರ ದಾಳಿ ಬಗ್ಗೆಯೂ ಕೇಳಿದ್ದರು. ಆದ್ರೆ ಈ ಸಚಿವರ ವಿರುದ್ಧದ ಸಂಭಾಷಣೆಯ ವಿಡಿಯೋ ಪ್ರಸಾರ ಮಾಡದಂತೆ ಹಣದ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಆರ್​ಟಿಓ ಅಧಿಕಾರಿ ವಿಶ್ವನಾಥ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಕೇಳಿದ ಲಂಚದ ಹಣ ಕೊಡದ್ದಕ್ಕೆ ನನ್ನ ವಿರುದ್ಧ ಸುಳ್ಳು ವರದಿ ಬಿತ್ತರಿಸಿ ತೇಜೋವಧೆ ಮಾಡಿದ್ದಾರೆ ಎಂದು ವಿಶ್ವನಾಥ್​ ಆರೋಪಿಸಿದ್ದಾರೆ.

ವರದಿಗಾರನಿಂದಲೂ ದೂರು:

ವರದಿಗಾರ ಓಂಕಾರ್​ ಮಠಪತಿ ಕೂಡ ಗಾಂಧಿ ಗಂಜ್​ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೇದರಿಕೆ ಇದೆ ಹಾಗೂ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಪ್ರತಿ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

ಬೀದರ್: ಹಣಕ್ಕೆ ಬೇಡಿಕೆಯಿಟ್ಟು ಕಿರುಕುಳ ನೀಡಿರುವ ಆರೋಪದಡಿ ಖಾಸಗಿ ಸುದ್ದಿ ವಾಹಿನಿ ವರದಿಗಾರ ಓಕಾರ್​ ಮಠಪತಿ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿವೋರ್ವರು ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸಚಿವ ಪ್ರಭು ಚವ್ಹಾಣ್​ ಅವರು ಡಿಸೆಂಬರ್ ತಿಂಗಳಲ್ಲಿ ಆರ್​​​ಟಿಒ ಕಚೇರಿ ಮೇಲೆ ದಾಳಿ ನಡೆಸಿದ್ದರು ಆರೋಪ ಕೇಳಿಬಂದಿತ್ತು.

ಅಧಿಕಾರಿ ದೂರಿನಲ್ಲಿ ಏನಿದೆ: ರಜೆಯಲ್ಲಿದ್ದ ಅಧಿಕಾರಿ ಮರಳಿ ಕಚೇರಿಗೆ ಬಂದ ನಂತರ ಖಾಸಗಿ ವಾಹಿನಿ ವರದಿಗಾರ, ಅಧಿಕಾರಿಯೊಂದಿಗೆ ವಿವರವಾಗಿ ಸಂಭಾಷಣೆ ನಡೆಸಿ, ಸಚಿವರ ದಾಳಿ ಬಗ್ಗೆಯೂ ಕೇಳಿದ್ದರು. ಆದ್ರೆ ಈ ಸಚಿವರ ವಿರುದ್ಧದ ಸಂಭಾಷಣೆಯ ವಿಡಿಯೋ ಪ್ರಸಾರ ಮಾಡದಂತೆ ಹಣದ ಬೇಡಿಕೆ ಇಟ್ಟು ಕಿರುಕುಳ ನೀಡಿದ್ದಾರೆ ಎಂದು ಆರ್​ಟಿಓ ಅಧಿಕಾರಿ ವಿಶ್ವನಾಥ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ ಕೇಳಿದ ಲಂಚದ ಹಣ ಕೊಡದ್ದಕ್ಕೆ ನನ್ನ ವಿರುದ್ಧ ಸುಳ್ಳು ವರದಿ ಬಿತ್ತರಿಸಿ ತೇಜೋವಧೆ ಮಾಡಿದ್ದಾರೆ ಎಂದು ವಿಶ್ವನಾಥ್​ ಆರೋಪಿಸಿದ್ದಾರೆ.

ವರದಿಗಾರನಿಂದಲೂ ದೂರು:

ವರದಿಗಾರ ಓಂಕಾರ್​ ಮಠಪತಿ ಕೂಡ ಗಾಂಧಿ ಗಂಜ್​ ಪೊಲೀಸ್ ಠಾಣೆಯಲ್ಲಿ ತನಗೆ ಜೀವ ಬೇದರಿಕೆ ಇದೆ ಹಾಗೂ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಪ್ರತಿ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.