ಬೀದರ್ : ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಪೊಲೀಸರು ಆತನಿಂದ 32 ಕೆಜಿ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ.
![37kg ganja seize by Excise Department; Two accused arrested](https://etvbharatimages.akamaized.net/etvbharat/prod-images/kn-bdr-03-16-ganjaraid-7203280-av-0_16092020211821_1609f_1600271301_287.jpg)
ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ಮಹಬೂಬ್ ಪಟೇಲ್ ಎಂಬಾತನ ಗದ್ದೆಯಲ್ಲಿ ಈ ಪ್ರಮಾಣದ ಅಕ್ರಮ ಗಾಂಜಾ ಬೆಳೆಯಲಾಗಿತ್ತು. ಸುದ್ದಿ ತಿಳಿದು ಅಬಕಾರಿ ಇಲಾಖೆಯ ಪೊಲೀಸರು ದಾಳಿ ಮಾಡಿದ್ದಾರೆ.
ಅಲ್ಲದೆ ಬೀದರ್-ಕಲಬುರಗಿ ಹೆದ್ದಾರಿ ಜಲಸಂಗಿ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರಗಾ ಗ್ರಾಮದ ಜಯಪ್ರಕಾಶ ಪೋಸ್ತೆ ಎಂಬಾತನನನ್ನು ಬಂಧಿಸಿದ ಪೊಲೀಸರು, ಆತನಿಂದ 4.5 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
![37kg ganja seize by Excise Department; Two accused arrested](https://etvbharatimages.akamaized.net/etvbharat/prod-images/kn-bdr-03-16-ganjaraid-7203280-av-0_16092020211821_1609f_1600271301_95.jpg)
ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅನೀಲಕುಮಾರ್ ಪೊದ್ದಾರ್, ಇನ್ಸ್ಪೆಕ್ಟರ್ ದೇವಿದಾಸ ಭೋಸ್ಲೆ, ಪಿಎಸ್ಐ ಜೆಟೆಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.